ಕನ್ನಡದ ಹೆಮ್ಮೆಯ ಅಂತರಜಾಲ ಪತ್ರಿಕೆ ಬಡಾಯಿ ನ್ಯೂಸ್ , ಕನ್ನಡದ
ಕ್ಯಾತ ಪತ್ರಕರ್ತ ಎಂದು ತಮ್ಮನ್ನು ತಾವು ಕರೆದುಕೊಳ್ಳುವ “ಬೂಸಿ ಬಷೀರ್” ಅವರನ್ನ ಸಂದರ್ಶಿಸಿದೆ
... ಮಾನ್ಯರು ವಾಂತಿ ಭಾರತಿ ಎಂಬ ಯಾರು ಓದದ ಪತ್ರಿಕೆಯ ಎಮ್ಮೆಯ ಸಂಪಾದಕರು ...
ಸಂದರ್ಶನ ನಡೆಸಿಕೊಟ್ಟವರು - ಮುದ್ದೆಶ್...
ಮುದ್ದೆಶ್ : ಕನ್ನಡದ ಎಮ್ಮೆಯ ಪತ್ರಕರ್ತ ಬೂಸಿ ಬಷೀರ್ ಅವರಿಗೆ ಬಡಾಯಿ
ನ್ಯೂಸ್ ಗೆ ಸ್ವಾಗತ
ಬೂಸಿ ಬಷೀರ್ : ಧನ್ಯವಾದಗಳು
ಮುದ್ದೆಶ್ : ಮೊದಲು ನಿಮಗೆ ಬಂದಿರುವ “ಮಂಕೆಶ್” ಪ್ರಶಸ್ತಿಗೆ
ಅಭಿನಂದನೆ ಕೋರುತ್ತೇನೆ ... ಪ್ರಶಸ್ತಿ ಪಡೆದ ನಂತರ ಹೇಗೆ ಅನ್ನಿಸ್ತ ಇದೆ ?
ಬೂಬ : ಧನ್ಯವಾದಗಳು , ಪ್ರಶಸ್ತಿ ಕೊಂಚ ದುಬಾರಿ ಆಗಿತ್ತು ಅನ್ನೋದು
ಬಿಟ್ಟರೆ, ಉಳಿದಂತೆ ತುಂಬಾ ಸಂತೋಷವಾಗಿದೆ ..
ಮುದ್ದೆಶ್ : ನನಗೆ ಅರ್ಥ ಆಗಲಿಲ್ಲ ..
ಬೂಬ : ಇರಲಿ ಬಿಡಿ... ಅದನ್ನು ಇನ್ನೊಮ್ಮೆ ಮಾತಾಡೋಣ .
ಮುದ್ದೆಶ್ : ಸಾರ್ ತಾವು ಹಿಂದೂ ಸಂಘಟನೆಗಳ ಬಗ್ಗೆ ಮತ್ತು ಮೋದಿ
ಬಗ್ಗೆ ತುಂಬಾ ಪೂರ್ವಗ್ರಹವಾಗಿ ಬರೆಯುತ್ತಿರಿ ಅನ್ನೋ ಅಪಾದನೆ ಇದೆ , ಇದಕ್ಕೆ ಎನಂತಿರಿ ?
ಬೂಬ : ನೋಡಿ ಹಿಂದೂ ಸಂಘಟನೆಗಳು ಈ ದೇಶದಲ್ಲಿ ಮುಸ್ಲಿಂರನ್ನ ನೆಮ್ಮದಿ
ಆಗಿ ಬದುಕಲು ಬಿಡುತ್ತಿಲ್ಲ... ನೋಡಿ ಹಿಂದೂಗಳು ದೀಪಾವಳಿ ದಿನ ಆಟಂ ಬಾಂಬ್ ಹೊಡೆಯಬಹುದು ಆದರೆ
ಮುಸ್ಲಿಮರು ಕೊಂಚ ಅದಕ್ಕಿಂತ ದೊಡ್ಡ ಬಾಂಬ್ ಹಾಕಿದ ಕೂಡಲೇ ಉಗ್ರಗಾಮಿ ಅಂತ ಕರೆಯುತ್ತಾರೆ ...
ಇದು ತಪ್ಪಲ್ಲವೇ ?
ಮುದ್ದೇಶ : ಯಾವುದೇ ಬಾಂಬ್ ಸ್ಪೋಟ ಆದ ತಕ್ಷಣ , ಹಿಂದೂ ಸಂಘಟನೆಗಳ
ಹೆಸರು ಹೇಳುತ್ತಿರಲ್ಲ ಯಾಕೆ ? ಮುಸ್ಲಿಂ ಸಂಘಟನೆಗಳು ಮಾಡಿಲ್ಲ ಅಂತ ನಿಮಗೆ ಅಷ್ಟು ಖಚಿತತೆ ಹೇಗೆ
? ಯಾವ ತನಿಖಾ ಸಂಸ್ಥೆ ನಿಮ್ಮನ್ನು ತನಿಖೆಗೆ ಒಳಪಡಿಸಿಲ್ಲವೇ?
ಬೂಬ : ನೋಡಿ ಮೊತ್ತ ಮೊದಲಿಗೆ ನಾನು ಏನು ಬರೆದರೂ ಅದನ್ನು ಗಂಭೀರವಾಗಿ
ತೆಗೆದುಕೊಳ್ಳುವವರು ತುಂಬಾ ಕಡಿಮೆ , ಹಾಗಾಗಿ ತನಿಖಾ ಸಂಸ್ಥೆಗಳ ತನಕ ಹೋಗಲ್ಲ. ... ಮತ್ತು ನಮಗೆ
ಸಹಾಯ ಮಾಡುವವರ ಮೆಚ್ಚಿಸೋಕ್ಕೆ ಇದೆಲ್ಲ ಮಾಡಲೇ ಬೇಕಾಗುತ್ತದೆ ...
ಮುದ್ದೇಶ : ಹಿಂದೂಗಳು ಬಂಧನ ಆದಾಗ ನೀವು ತೋರಿಸುವ ಉತ್ಸಾಹ ,
ಮುಸ್ಲಿಮರು ಬಂಧನ ಆಗುವಾಗ ತೋರಿಸೊಲ್ಲ ಯಾಕೆ ?
ಬೂಬ : ನೋಡಿ ನಾನೊಬ್ಬ ಸೆಕ್ಯುಲರ್ ಬುದ್ದಿಜೀವಿ ... ಬುದ್ದಿಜೀವಿಗಳು
ಹೀಗೆ ಇರ್ಬೇಕು ಅಂತ ಒಂದು ಪದ್ಧತಿ ಇದೆ .ಏನೋ ಮುಸ್ಲಿಂ ಯುವಕರು ಸರಿಯಾದ ಮಾರ್ಗದರ್ಶನ ಇಲ್ಲದೆ
ಹೀಗೆ ಮಾಡಿರುತ್ತಾರೆ... ಅಷ್ಟಕ್ಕೂ ಇದೆಲ್ಲ ಸಣ್ಣ ಪುಟ್ಟ ವಿಷಯಗಳ ಬಗ್ಗೆ ತಲೆ
ಕೆಡಿಸಿಕೊಳ್ಳಬಾರದು .
ಮುದ್ದೇಶ : ಮೋದಿಯ ಬಗ್ಗೆ ಹೇಳಿ
ಬೂಬ : ಮೋದಿ ಒಬ್ಬ ನರಹಂತಕ , ೨೦೦೨ ಕೋಮುಗಲಭೆಗೆ ಮೋದಿಯೇ ಕಾರಣ.
ಮುದ್ದೇಶ : ನೀವು ಏನೇ ಹೇಳಿದ್ರು , ಸುಪ್ರಿಂ ಕೋರ್ಟ್ ರಚಿಸಿದ್ದ
ತನಿಖಾ ಸಂಸ್ಥೆ ಮೋದಿ ನಿರಪರಾದಿ ಅಂತ ಹೇಳ್ತಾ ಇದೆ... ಅಷ್ಟಕ್ಕೂ ಮೋದಿಗಿಂತ ಮೊದಲು ಕೂಡ
ಗುಜರಾತಲ್ಲಿ ಕೋಮು ಗಲಭೆಗಳು ನಡೆದಿತ್ತು ಅದನ್ನ ಯಾಕೆ ನೀವು ಪ್ರಸ್ತಾಪಿಸುವುದಿಲ್ಲ....
ಬೂಬ : ಸುಪ್ರೀಂ ಕೋರ್ಟ್ ಏನು ಹೇಳಿದೆ ಅಂತ ನನಗೆ ಮಾಹಿತಿ ಇಲ್ಲ
... ಕೋಮುಗಲಭೆಗೆ ಕಾರಣ ಆದ ಎಲ್ಲರನ್ನ
ವಿರೋದಿಸುತ್ತೇನೆ ... ಆದ್ರೆ ಅವರೆಲ್ಲ ಯಾರು ಅಂತ ನನಗೆ ಸರಿಯಾದ ಮಾಹಿತಿ ಇಲ್ಲ.
ಮುದ್ದೇಶ : ಗುಜರಾತ್ ಅಭಿವೃದ್ದಿ ಬಗ್ಗೆ ಹೇಳಿ ?
ಬೂಬ : ಗುಜರಾತ್
ನಲ್ಲಿ ಆ ಸಮಸ್ಯೆ .. ಈ ಸಮಸ್ಯೆ ಇದೆ, (ನೂರಾರು ವೆಬ್ಸೈಟ್ ಲಿಂಕ್ ಗಳನ್ನ ತೋರಿಸಿ )... ಈಗ
ಹೇಳಿ ಅಭಿವೃದ್ದಿ ಎಲ್ಲಿದೆ..
ಮುದ್ದೇಶ : ಆದರೆ ಗುಜರಾತ್ ಸಾದನೆ ಬಗ್ಗೆ ಇದಕ್ಕಿಂತ ಜಾಸ್ತಿ ಲಿಂಕ್
ಗಳು ಸಿಗ್ತಾವೆ ಅಲ್ಲವೇ ? ಅಷ್ಟಕ್ಕೂ ಇಂತಹ ಸಮಸ್ಯೆಗಳು ಎಲ್ಲ ರಾಜ್ಯದಲ್ಲೂ ಸಾಮಾನ್ಯ ತಾನೇ ?
ಬೂಬ : ನೋಡಿ ನಾನು ಇಡಿ ಗುಜರಾತ್ ನ ಗೂಗಲ್ ಮ್ಯಾಪ್ ಲ್ಲಿ
ನೋಡಿದ್ದೀನಿ , ನನಗೆ ಅಂತಹ ಅಭಿವೃದ್ದಿ ಕಾಣಿಸಿಲ್ಲ.
ಮುದ್ದೇಶ : ನಿಮಗೆ ಕಾಣಿಸಿಲ್ಲ ಅಂದರೆ ಅಭಿವೃದ್ದಿ ಆಗಿಲ್ಲ ಅಂತ
ಅರ್ಥವೇ ?
ಬೂಬ : ಹೌದು
ಮುದ್ದೇಶ : ಹೋಗಲಿ ಕೊಡೊ ಲಿಂಕ್ ಗಳು ನಿಮ್ಮ ಪತ್ರಿಕೆದು ಆಗಿರದೆ ,
ಬೇರೆ ಯಾವುದು ಪತ್ರಿಕೆದು ಆಗಿರುತ್ತೆ ಯಾಕೆ ?
ಬೂಬ : (ಕಣ್ಣಂಚಿನಲ್ಲಿ ನೀರು ತುಂಬಿಕೊಂಡು) ನಮ್ಮ ಪತ್ರಿಕೆಯನ್ನ
ಯಾರು ನಂಬಲ್ಲ... ಯಾವುದೋ ಕಳಪೆ ಹಾಸ್ಯ ಓದಿದ ಹಾಗೆ ಹರಳೆಣ್ಣೆ ಮುಖ ಮಾಡಿಕೊಂಡು ಎದ್ದು
ಹೋಗ್ತಾರೆ ಅದಕ್ಕಾಗಿ ಹೀಗೆ ...
ಮುದ್ದೇಶ : ಹೋಗಲಿ ಮುಂಬೈ ಅತ್ಯಾಚಾರ ಪ್ರಕರಣ ಬಗ್ಗೆ ಹೇಳಿ
ಬೂಬ : ಇದರಲ್ಲಿ ಭಜರಂಗ ದಳದ ಯುವಕರ ಕೈವಾಡ ಇದೆ , ಅವರೇ ಇಂಥಹ ಕೆಲಸ
ಮಾಡಲು ಸಾದ್ಯ
ಮುದ್ದೇಶ : ಆದರೆ ಅಲ್ಲಿ ಸೆರೆಯದವರಲ್ಲಿ ನಾಲ್ವರು ಮುಸ್ಲಿಮರು ಮತ್ತು
ಒಬ್ಬ ಹಿಂದೂ ಹುಡುಗ ಅಲ್ಲವೇ ..
ಬೂಬ : ಹೌದಾ ... (ಒಂದು ನಿಮಿಷ ಮೌನ )... ನೋಡಿ ಆ ಹಿಂದೂ ಯುವಕನೇ ಈ
ನಾಲ್ಕು ಅಮಾಯಕ ಮುಸಿಮರನ್ನ ಸಿಲುಕಿಸಿದ್ದಾನೆ...
ಅವ್ನು RSS ಏಜೆಂಟ್ ಅಂತ ಸಾಭೀತು
ಮಾಡೋಕ್ಕೆ ಸುವೀನ್ ನೂರಿಂಜೆಗೆ ಹೇಳ್ತಿನಿ ..
ಮುದ್ದೇಶ : ಹೌದು ಇತ್ತೀಚಿಗೆ “ಓಲುಮೆ”
ಯಲ್ಲಿ ಕಾಣಿಸಿಕೊಂಡಿದ್ದಿರಿ ಏನು ವಿಶೇಷ
ಬೂಬ : ಏನ್ ಮಾಡೋಣ , ಮೊದಲೇ ಜನ ನನ್ನ
ಪತ್ರಿಕೆ ಓದಲ್ಲ... ಮೊದಲು ಫೇಸ್ಬುಕ್ ನನ್ನ ವಾಲ್ ಲ್ಲಿ ಚರ್ಚೆ ಮಾಡಿಸ್ತ ಇದ್ದೆ... ಈಗ ಅಲ್ಲೂ
ಬರಲ್ಲ ... ಇನ್ನು ನಿಲುಮೆಗೆ ಬಂದಾದ್ರು ನಾನು ಬದುಕಿದ್ದೇನೆ ಅಂತ ತೋರಿಸಬೇಕು ಇಲ್ಲ ಅಂದ್ರೆ
ಮುಂದಿನ ತಿಂಗಳು “ಅಲ್ಲಿಂದ” ಪೇಮೆಂಟ್ ಬರಲ್ಲ ..
ಮುದ್ದೇಶ : ನೀವು ಸರಿಯಾದ ಚರ್ಚೆಗೆ
ಸಿಗಲ್ಲ... ಓಡಿ ಹೋಗ್ತಿರ ಅಂತ ಆಪಾದನೆ ಇದೆ...
ಬೂಬ : ಯಾರೋ ಮನೆ ಕಾಂಪೌಂಡ್ ಗೆ ಉಚ್ಚೆ
ಹುಯ್ತಾ ನಿಂತುಕೊಂಡ್ರೆ ಬಿಡ್ತಾರ ? ಓಡಿ ಹೋಗುತ್ತಾ ಹುಯ್ಯಬೇಕು ... ಮೊದಲಿನಿಂದನು ಓಡುತ್ತ
ಉಚ್ಚೆ ಹುಯ್ದೆ ಅಭ್ಯಾಸ ..
ಮುದ್ದೇಶ : ಕಾಲು ಮೇಲೆಲ್ಲಾ ಆಗಲ್ವೇ ?
ಅಸಹ್ಯ ...
ಬೂಬ : ಅಭ್ಯಾಸ ಆಗಿದೆ, ಮೊದಮೊದಲು
ಕಸಿವಿಸಿ ಆಗ್ತಾ ಇತ್ತು ... ಈಗ ಅಂತದ್ದು ಏನಿಲ್ಲ
ಮುದ್ದೇಶ : ಕೊನೆಯದಾಗಿ ಮುಸ್ಲಿಂ ಮತ್ತು
ದಲಿತರ ಬಗ್ಗೆ ಹೇಳಿ
ಬೂಬ : ನೋಡಿ ಮುಸ್ಲಿಮರು ಮತ್ತು ದಲಿತರು
ಒಂದೇ ಹೊಕ್ಕಳಬಳ್ಳಿಯ ಮಕ್ಕಳ ಹಾಗೆ
ಮುದ್ದೇಶ : ಹೇಗೆ ವಿವರಿಸಿ ..
ಬೂಬ : ವಿವರಣೆ ಕೇಳಬೇಡಿ ಧಮ್ಮಯ್ಯ ...
ಮುದ್ದೇಶ : ಹೋಗಲಿ ಮುಂದಿನ ಯೋಜನೆ ಹೇಳಿ
ಬೂಬ : ಯೋಜನೆ ಏನು ಮಾಡೋದು ಅಂತಾನೆ
ಗೊತ್ತಾಗ್ತಾ ಇಲ್ಲ ... ಮೊದಲು ಕಾಂಗ್ರೆಸ್ ನ ಹೊಗಳಿ ಬರಿತಿವಿ ಅಂತ ೪ ಜನ ಕಾಂಗ್ರೆಸ್ಸಿಗರು
ಪೇಪರ್ ತಗೊಳ್ಲೋರು , ಈಗ ವಿವಯ ಕರ್ನಾಟಕ ಆ ಕೆಲಸ ನಮಗಿಂತ ಚೆನ್ನಾಗಿ ಮಾಡುತ್ತಿರೋದು ಇಂದ
ನಮ್ಮನ್ನ ಮೂಸೋರು ಇಲ್ಲ ...
ಮುದ್ದೇಶ : ಹಾಗಾದರೆ ಮುಂದೆ ?
ಬೂಬ : ಇದ್ದೆ ಇದಿಯಲ್ಲ ಗುಜರಿ ಅಂಗಡಿ ,
ಹಳೇ ಟೊಪ್ಪಿ ಹಾಕ್ಕೊಂಡು ಕೂರೋದು ಅಷ್ಟೇ
ಮುದ್ದೇಶ : ಧನ್ಯವಾದ ಬೂಸಿ ಬಷೀರ್ ರೆ
... ನಿಮ್ಮೊಂದಿನ ಮಾತುಕತೆಗೆ
ಬೂಬ : ಆಯ್ತು ಆಯ್ತು ,,, ಸಿದ್ದರಾಮಯ್ಯ
ಎಲ್ಲಾದರು ಸಿಕ್ಕಿದ್ರೆ ಸ್ವಲ್ಪ ನನ್ನ ಬಗ್ಗೆ ಹೇಳಿ ಪ್ಲೀಸ್ ...
ಮುದ್ದೇಶ : ಓಕೆ ಸರ್
ವಿಶೇಷ ಸೂಚನೆ : ಈ
ಸಂದರ್ಶನವು ಯಾವುದೇ ವ್ಯಕ್ತಿಗೆ ಅಥವಾ ಪತ್ರಿಕೆಗೆ ಸಂಭಂದ ಪಟ್ಟಿರುವುದಿಲ್ಲ... ಹಾಗೇನಾದರು
ಸಂಭಂದ ಕಂಡು ಬಂದರೆ ಅದನ್ನು ಕನ್ನಡ ಪತ್ರಿಕೋದ್ಯಮದ ದುರಂತ ಎಂದು ಪರಿಗಣಿಸತಕ್ಕದ್ದು
ಬೂದಿ ಬಷೀರ್ ನ ಮಾತು ಅಕ್ಷರಶಃ ಸತ್ಯ, ನಾನು ಒಂದು ತಿಂಗಳಿನಿಂದ ಹುಡುಕ್ತಿದೀನಿ ವಾಂತಿ ಭಾರತಿ ಎಲ್ಲಿ ಸಿಗುತ್ತೆ ಅಂತ, ಹೇಗೆ ಓಡುತ್ತಾ ಉಚ್ಚೆ ಹೊಯ್ದಿರಬಹದು ಅಂತ ತಿಳಕೊಳ್ಳಾಣ ಅಂತ..... ಊಹೂಂ ಇವತ್ತಿನ ವರೆಗೂ ಸಿಗಲಿಲ್ಲ...
ಪ್ರತ್ಯುತ್ತರಅಳಿಸಿ