ಶುಕ್ರವಾರ, ಆಗಸ್ಟ್ 30, 2013

ಡುಂಡಿ - ಬಷೀರ್ ಸಂಪಾದಕೀಯಕ್ಕೆ ಒಂದು ಪ್ರತ್ಯುತ್ತರ

ಲೇಖಕರು - ಸತ್ಯನಾರಾಯಣ ರಾಮಚಂದ್ರನ್


ವಾರ್ತಾಭಾರತಿ ದೈನಿಕದ ಶುಕ್ರವಾರದ ಸಂಚಿಕೆಯ ಸಂಪಾದಕೀಯ ಬರೆದ ಬಶೀರನಿಗೆ ಆತನ ಲೇಖನಕ್ಕೆ ಉತ್ತರವಾಗಿ :

ಕೊಲೆಗಾರ ಒಂದು ಜೀವಕ್ಕೆ ಹಾನಿ ಮಾಡಿದರೆ ಮನೋವಿಕಾರಿ ಲೇಖಕ ಒಂದು ಇಡೀ ಜನಾಂಗದ ನೋವಿಗೆ ಕಾರಣ ಆಗುತ್ತಾನೆ. ಅಷ್ಟೇ ಅಲ್ಲದೆ ಮನೋ ವಿಕಾರಿಗಳನ್ನು ರಸ್ತೆಯಲ್ಲೇ ಸ್ವೇಚ್ಚೆಯಿಂದ ಓಡಾಡಲು ಬಿಟ್ಟರೆ ಹುಚ್ಚು ಹಿಡಿದ ನಾಯಿಯಂತೆ ಅವರು ಯಾರನ್ನಾದರೂ ಕಚ್ಹ ಬಹುದು ಅಥವಾ ಜನಗಳೇ ಆ ಮನೋವಿಕಾರಿಯನ್ನು ಕಲ್ಲು ಹೊಡೆದು ಸಾಯಿಸ ಬಹುದು.
ಆದ್ದರಿಂದ ಅಂತಹವರನ್ನು ಆದಷ್ಟು ಬೇಗನೆ ಬಂದಿಸಿ ಅವರ ಪ್ರಾಣ ಹರಣ ತಡೆಯುವುದು ಪೋಲೀಸರ ಕೆಲಸ. ನೀವೇ ಹೇಳಿದಂತೆ ಇಂತಹ ಲೇಖಕರ ಹಿಂದಿರುವುದು ಕಪಟ ರಾಜಕಾರಣಿಗಳು, ಭೂಗತ ಪಾತಕಿಗಳು, ಅಕ್ರಮ ಗಣಿಗಾರಿಕೆ ನಡೆಸುವ ಪಾಳೆಗಾರರು ಅಲ್ಲಾ. ಬದಲಾಗಿ ಬುದ್ದಿ ಜೀವಿಗಳು ಎಂಬ ನಿಮ್ಮಂತಹ ಮಾತೃ ದ್ರೊಹಿಗಳು ಸಮಾಜ ದ್ರೋಹಿಗಳು ಈ ದೇಶದಲ್ಲಿ ಅಶಾಂತಿ ಮೂಡಿಸಲು ಯತ್ನಿಸುತ್ತಿರುವ ದೇಶ ದ್ರೊಹಿಗಳು. ನಿಮ್ಮಂತಹ ದ್ರೋಹಿಗಳ ಬೆಂಬಲ ಎಂದಿಗೂ ಸಹ ಸಮಾಜದ ಸ್ವಾಸ್ತ ಆರೋಗ್ಯಕ್ಕೆ ಮಾರಕ ಎಂದು ತಿಳಿದೇ ಪೊಲೀಸರು ಸರಿಯಾದ ಕೆಲಸ ಮಾಡಿದ್ದಾರೆ. 

"ಬಂಧಿಸಿದ ಅಥವಾ ಬಂಧಿಸಲು ಆದೇಶ ನೀಡಿದ ಪೊಲೀಸ್ ಅಧಿಕಾರಿ ಈ ಕಾದಂಬರಿಯ ಎಷ್ಟು ಹಾಳೆಗಳನ್ನು ಬಿಡಿಸಿದ್ದಾರೆ ಎನ್ನುವುದರ ಕುರಿತಂತೆ ಮಾಹಿತಿಯಿಲ್ಲ" ಎಂದು ಅಪಾದಿಸುತ್ತಿರಿ. ಹುಚ್ಚು ನಾಯಿ ಎಷ್ಟು ಜನಕ್ಕೆ ಕಚ್ಚಿತು ಎಂದು ಲೆಕ್ಕ ಇಟ್ಟು ಅದನ್ನು ಹಿಡಿಯ ಬೆಕಿಲ್ಲ. ಅದಕ್ಕೆ ಹುಚ್ಚು ಹಿಡಿದಿದೆ ಎಂಬ ಒಂದೇ ಕಾರಣ ಸಾಕು. 

"ಕೆಲವು ಮಾಧ್ಯಮಗಳು ಈ ಕೃತಿಯ ಕುರಿತಂತೆ ಅನವಶ್ಯ ಚರ್ಚೆಯನ್ನು ಹುಟ್ಟಿಸಿ ಹಾಕಿರುವುದೇ ಲೇಖಕನ ಬಂಧನಕ್ಕೆ ಕಾರಣವಾಗಿದೆ. ಯಾಕೆಂದರೆ ಢುಂಢಿ ಕಾದಂಬರಿಯ ಕುರಿತಂತೆ ಗಂಭೀರವಾದ ವಿಮರ್ಶೆಯಾಗಲಿ, ಚರ್ಚೆಯಾಗಲಿ ಈವರೆಗೆ ಎಲ್ಲೂ ನಡೆದಿಲ್ಲ. ಈ ಕೃತಿಯ ಕುರಿತಂತೆ ಗದ್ದಲ ಎಬ್ಬಿಸಿದವರು ಸಾಹಿತ್ಯ ವಲಯದವರಲ್ಲ. ಬದಲಿಗೆ ಕೆಲವು ಪತ್ರಿಕೆಗಳ ವರದಿಗಾರರು" - . ಎಂದು ಹೇಳುತ್ತಿದ್ದೇರಿ. ಸಾಹಿತ್ಯ ವಲದವರು ಮಾತ್ರ ಗದ್ದಲ ಎಬ್ಬಿಸ ಬಹುದೆಂದರೆ ಆ ಪುಷ್ಕ ಅವರಿಗೆ ಮಾತ್ರ ಮಿಸಲಾಗಿರಬೆಕು. ಅದಲ್ಲದೆ ಸಾರ್ವಜನಿಕ ಪ್ರಕಟಣೆ ಆದರೆ ಅದರ ಮೇಲೆ ಎಲ್ಲರಿಗು ಹಕ್ಕಿರುತ್ತದೆ. ಅದೇನು ನೀವು ನಿಮ್ಮ ಪಾಕಿಸ್ತಾನದಲ್ಲಿರುವ ಪ್ರಿಯತಮೆಗೆ ಬರೆದ ಪ್ರೇಮ ಪತ್ರ ಅಲ್ಲ. 
."ಆಕಾಶದಲ್ಲಿರುವ ಚಂದ್ರನೇ ಗಣಪತಿಯನ್ನು ನೋಡಿ ನಕ್ಕು ಶಾಪಕ್ಕೆ ಒಳಗಾದ ಕತೆ ನಮ್ಮ ಮುಂದಿದೆ" ಎನ್ನುತ್ತಿರಿ ಮತ್ತೆ ಲೇಖಕನಿಗೆ ಸಾರ್ವತ್ರಿಕ ಶಾಪ ಏಕೆ ಎಂದೂ ಕೇಳುತ್ತೇರಿ. ಉಪ್ಪು ತಿಂದವನು ನೀರು ಕುಡಿಯಲೇ ಬೇಕು. 
"ಬುಡಕಟ್ಟು ಪ್ರದೇಶಗಳಲ್ಲಿ ಗಣಪತಿಯ ಕುರಿತಂತೆ ಅವರು ತಮ್ಮದೇ ಆದ ನಂಬಿಕೆಗಳನ್ನು ಹೊಂದಿದ್ದಾರೆ". ಎನ್ನುವ ನೀವು ಅಸಂಖ್ಯಾತ ಹಿಂದೂಗಳ ನಂಬಿಕೆಗೆ ದ್ರೋಹ ಮಾಡುವುದು ಎಷ್ಟು ಸರಿ? 
"‘ಢುಂಢಿ’ ಕೃತಿ ಕೆಲವು ಅಧ್ಯಯನಗಳ ಆಧಾರದಲ್ಲಿ ಬರೆದಿರುವುದು" -  ಯಾವ ಅಧಾರಗಳು ?.ಗ಼ಣೆಶನ ಸಮ ಕಾಲೀನರು ದಾಖಲಿಸಿರುವ ಸತ್ಯವೇ??

" ಉದ್ದೇಶಪೂರ್ವಕವಾಗಿ ಒಂದು ನಂಬಿಕೆಯನ್ನ್ನು ಕೆಡಿಸುವ ಗುರಿ ಮಾಡುತ್ತದೆ ಎಂದಾದರೆ ಅದರ ವಿರುದ್ಧ ನ್ಯಾಯಾಲಯಕ್ಕೆ ತೆರಳುವ ಅಧಿಕಾರವಿದೆ" ಎಂದು ಬರೆದಿದ್ದೆರಿ. ಈಗ ಅದನ್ನೇ ನೀವು ಮಾಡಿ...ಪೊಲಿಸರ ವಿರುದ್ದ ಮೊಕದ್ದೊಮ್ಮೆ ಹಾಕಿ. 
" ಶೀತವಾಯಿತೆಂದು ಮೂಗನ್ನೇ ಕತ್ತರಿಸಲು ಹೊರಟವರಂತೆ, ಬರೆದ ಲೇಖಕನನ್ನೇ ಅವಸರದಲ್ಲಿ ಬಂಧಿಸಲು ಹೊರಟಿದೆ ನಮ್ಮ ಕಾನೂನು ವ್ಯವಸ್ಥೆ" ಎನ್ನುತ್ತೇರಿ. ಸಾಂಕಾಮಿಕ ರೋಗ ಹರಡದಂತೆ ಎಚ್ಚರವಹಿಸಿದ್ದಾರೆ ಅಷ್ಟೇ 

"ಲೇಖಕರು ತಮ್ಮ ದುರುದ್ದೇಶಕ್ಕಾಗಿ ಇನ್ನೊಬ್ಬರ ನಂಬಿಕೆಗಳನ್ನು ನೋಯಿಸುವುದು ಎಷ್ಟರ ಮಟ್ಟಿಗೂ ಸರಿಯಲ್ಲ. ಅದು ಎಲ್ಲ ರೀತಿಯಲ್ಲೂ ಖಂಡನೀಯ". ಇದು ಯಾವುದಕ್ಕೆ ನಿಮ್ಮ ಮುನ್ನುಡಿ ಎಂಬುದು ನಿಮ್ಮ ಮುಂದಿನ ಸಾಲುಗಳಲ್ಲಿ ಗೊತ್ತಾಗುತ್ತದೆ. 
"ಈ ಹಿಂದೆ ಎಸ್. ಎಲ್. ಭೈರಪ್ಪ ‘ಆವರಣ’ ಕೃತಿಯಲ್ಲಿ ಮುಸ್ಲಿಮರ ಕುರಿತಂತೆ ಹೀನಾಯವಾಗಿ ಬರೆದಿದ್ದರು ಆದರೆ ಕರ್ನಾಟಕದ ಮುಸ್ಲಿಮರು ಅದನ್ನು ಎಲ್ಲೂ ವಿವಾದಗೊಳಿಸದೆ, ಸಮನ್ವಯವನ್ನು ಕಾಪಾಡಿದರು. ಆಗ ಯಾವ ಪತ್ರಿಕೆಗಳೂ, ಸಂಘಟನೆಗಳೂ ಭೈರಪ್ಪನವರನ್ನು ಬಂಧಿಸಲು ಒತ್ತಾಯಿಸಲಿಲ್ಲ. ಒಂದೆರಡು ಪತ್ರಿಕೆಗಳಂತೂ ಅದೊಂದು ಅಪರೂಪದ ಕೃತಿಯೆಂಬಂತೆ ಪ್ರಚಾರ ನೀಡಿದರು" ಎನ್ನುವ ನೀವು ಆಗ ಬೈರಪ್ಪನವರು ಇಸ್ಲಾಂ ಬಗ್ಗೆ ಬರೆದಿದ್ದರೆ ನೀವೇಕೆ ಸುಮ್ಮನಿದ್ದಿರಿ?? ಅವರ ವಿರುದ್ದ ನ್ಯಾಯಾಲಯಕ್ಕೆ ಏಕೆ ಹೋಗಲಿಲ್ಲಾ .. ಏಕೆಂದರೆ  ಬೈರಪ್ಪನವರು ಬರೆದಿದ್ದು ಸತ್ಯ. ಅದಕ್ಕೆ ನೀವು ಸುಮ್ಮನಾದಿರಿ. "ಮೌನಂ ಸಮ್ಮತಿ ಸೂಚಕಂ"  ಈ ನಿಟ್ಟಿನಲ್ಲಿ ‘ಢುಂಢಿ’ ಕೃತಿಯ ಲೇಖಕನ ಬಂಧನಸರಿಯಾದ ಕ್ರಮ ..

"ಅಸ್ಪಷ್ಟ ಮಾಹಿತಿಯ ಆಧಾರದಲ್ಲಿ ಪೊಲೀಸ್ ವ್ಯವಸ್ಥೆ, ಲೇಖನಿಯಂತಹ ಸೂಕ್ಷ್ಮ ವಿಷಯದಲ್ಲಿ ಮಧ್ಯಪ್ರವೇಶಿಸುವುದು ತಪ್ಪು. ಮೊತ್ತ ಮೊದಲು ಕೃತಿಯನ್ನು ಸಂಯಮದಿಂದ ಓದಬೇಕು. ಹಾಗೆಯೇ ಹಿರಿಯ ಸಾಹಿತಿ, ತಜ್ಞರ ಜೊತೆ ಕೃತಿಯ ಕುರಿತಂತೆ ಚರ್ಚಿಸಿ ಕ್ರಮ ತೆಗೆದುಕೊಳ್ಳಬೇಕು. ಒಂದು ವೇಳೆ ಸಮಾಜದ ಸೌಹಾರ್ದವನ್ನು ಕೆಡಿಸುವ ದುರುದ್ದೇಶದಿಂದಲೇ ಈ ಕೃತಿ ರಚನೆಯಾಗಿದೆ ಎಂದಾದರೆ ಲೇಖಕನನ್ನು ಬಂಧಿಸಿದರೂ ಅದರಲ್ಲಿ ತಪ್ಪೇನಿಲ್ಲ" ಎಂದು ನೀವೇ ಹೆಳುತ್ತೇರಿ. ಅದೇ ಕಾರಣಕ್ಕಾಗಿ ಬಂದಿಸಿದ್ದಾರೆ ಎಂದು ಗೊತ್ತಿಲ್ಲವೇ??
" ಅಭಿವ್ಯಕ್ತಿ ಸ್ವಾತಂತ್ರ ಯಾವತ್ತೂ ದುರುಪಯೋಗವಾಗಬಾರದು. ಅಭಿವ್ಯಕ್ತಿ ಸ್ವಾತಂತ್ರ ದುರುಪಯೋಗಗೊಂಡರೆ, ನಿಜವಾದ ಲೇಖಕರು, ಪತ್ರಕರ್ತರಿಗೆ ಅದು ಸಮಸ್ಯೆಯಾಗುತ್ತದೆ. ಎಂದು ಹಪ ಹಪಿಸುತ್ತೇರಿ.." ನಿಜ ಅದು. ಆದರೆ ನಿಮ್ಮಂತಹ ಡೋಂಗಿ ಮತೀಯವಾದಿ ಲೇಖಕರಿಗೆ ಇದು ಅನ್ವಯಿಸುವುದಿಲ್ಲ.

"ಡುಂಡಿ" ಯೋಗೇಶ ಮಾಸ್ಟರ್ ಅನ್ನೋ "ಹುಚ್ಚು ಮನುಷ್ಯನ ಹತ್ತು ಮುಖಗಳು"

 ಇಂತಹ ಮನುಷ್ಯನಿಂದ ಇನ್ನೆಂತಹ  ಸಂಶೋದನೆ ನಿರೀಕ್ಷಿಸುವುದು ಸಾದ್ಯ ..?











"ಡುಂಡಿ" ಅನ್ನೋ ಸಂಶೋದನೆ ಮತ್ತು "ಇನ್ನೋಸೆನ್ಸ್ ಆಫ್ ಮುಸ್ಲಿಂ " ಅನ್ನೋ ವಿಕೃತಿ

ಬಿ ಎಂ ಬಷೀರ್ ಎಂಬ ಮನುಷ್ಯನ ದ್ವಂದದ ಬಗ್ಗೆ ಬರೆಯಲು ವರುಷವೇ ಸಾಲದೇನೋ , ಈ ಕೆಳಗಿನ ಎರಡು ಲೇಖನ ನೋಡಿ , ಒಂದು ಹಿಂದೂಗಳ ದೇವರಾದ ಗಣಪತಿಯನ್ನ ಅವಮಾನಿಸಿದ "ಡುಂಡಿ" ಕಾಂದಬರಿ ಲೇಖಕನ ಬಂದನದ ಕುರಿತು , ಇನ್ನೊಂದು ಪ್ರವಾದಿ ಮೊಹಮದ್ ರವರ ಬಗ್ಗೆ ಕೆಟ್ಟದಾಗಿ ಚಿತ್ರಿಸಿದ "ಇನೋಸೆನ್ಸ್ ಆಫ್ ಮುಸ್ಲಿಂ" ಎಂಬ ಚಿತ್ರ ನಿರ್ದೇಶಕನ ಕುರಿತು.
ಡುಂಡಿ ಲೇಖಕನ ಕುರಿತು ಇರುವ ಅವರ ಸಹಾನುಭೂತಿ, ಇನೋಸೆನ್ಸ್ ಆಫ್ ಮುಸ್ಲಿಂ ಚಿತ್ರ ನಿರ್ದೇಶಕನ ಕುರಿತು ಅವರಿಗಿಲ್ಲ. ಡುಂಡಿ ಕೃತಿ ಚರ್ಚೆಗೆ ಒಳಪಡಬೇಕು ಅನ್ನೋ ಮನುಷ್ಯ , ಆ ಚಿತ್ರವನ್ನು ಕೂಡ ವಿಮರ್ಶೆಗೆ ಒಳಪಡಿಸಬೇಕು ಅನ್ನೋದಿಲ್ಲ... 
ಪುಸ್ತಕದ ವಿರುದ್ದ ನಡೆಯುತ್ತಿರುವ ಪ್ರತಿಭಟನೆಯನ್ನು ಖಂಡಿಸುವ ಬಷೀರರು, "ಮುಸ್ಲಿಂ" ಚಿತ್ರದ ವಿರುದ್ದ ನಡೆದ ಪ್ರತಿಭಟನೆಯನ್ನ ಸಮರ್ಥಿಸಿಕೊಳ್ಳುತ್ತಾರೆ...
ಡುಂಡಿ ಪುಸ್ತಕ ರಚಿಸಿದ್ದು ಕೆಲವು ಸಂಶೋದನೆಗಳ ಮೇಲೆ ಎಂದು ಸಮರ್ಥಿಸುವ , ಅವರು "ಇನ್ನೋಸೆನ್ಸ್ ಆಫ್ ಮುಸ್ಲಿಂ " ಅನ್ನ ಒಂದು ಸಂಶೋಧನೆ ಎನ್ನಲಾರರು  
"ಡುಂಡಿ" ಯನ್ನ ನಿಷೇದಿಸುವುದು ಅಭಿವ್ಯಕ್ತಿ ಸ್ವಾತ್ರಂತ್ಯದ ಹರಣ ಎಂದು ಪ್ರತಿಪಾದಿಸುವ ಬಷೀರರು , "ಮುಸ್ಲಿಂ" ಚಿತ್ರವನ್ನು ವಿಕೃತಿ ಅನ್ನುತ್ತಾರೆ .... 
ಪರಧರ್ಮವನ್ನು ಹೀಯಾಳಿಸಿದರೆ ಖುಷಿ ಪಡುವ , ಸ್ವ ಧರ್ಮದ ಬಗ್ಗೆ ಯಾರಾದರು ಟೀಕಿಸಿದರೆ ತಿರುಗಿ ನಿಲ್ಲುವ ಇಂಥವರು ಪತ್ರಿಕೋದ್ಯಮದ ಮಟ್ಟಿಗೆ ಕಪ್ಪು ಚುಕ್ಕೆಯೇ ...

ಎರಡು ಲೇಖನ ಕೆಳಗೆ ಕೊಟ್ಟಿದ್ದೀನಿ , ಬಷೀರ್ ಎಂಬ ಅರೆಬೆಂದ ಮನಸ್ಥಿತಿ ನಿಮಗೆ ಅರ್ಥ ಆಗಲಿ ಅಂತ....    



---------------------------------------------------------------------------------------------------------

ವಾರ್ತಾಭಾರತಿ ದೈನಿಕದ ಶುಕ್ರವಾರದ ಸಂಚಿಕೆಯ ಸಂಪಾದಕೀಯ 

ಗಣಪತಿಗೆ ಮಾಡಿದ ಅಪಚಾರ
ಶುಕ್ರವಾರ - ಆಗಸ್ಟ್ -30-2013

ಒಬ್ಬ ಕೊಲೆಗಾರನನ್ನು, ಒಬ್ಬ ಕ್ರಿಮಿನಲ್‌ನನ್ನು ಬಂಧಿಸುವಾಗ ಪೊಲೀಸರು ಸಾವಿರ ಬಾರಿ ಯೋಚಿಸುತ್ತಾರೆ. ಆದರೆ ಒಬ್ಬ ಲೇಖಕನನ್ನು ಮಾತ್ರ, ಅತ್ಯಂತ ಸುಲಭವಾಗಿ ಬಂಧಿಸಿ ಜೈಲಿಗೆ ತಳ್ಳುತ್ತಾರೆ. ಯಾಕೆಂದರೆ ಲೇಖಕರ ಹಿಂದಿರುವುದು, ಅವನ ಬಡಪಾಯಿ ಓದುಗರು ಮಾತ್ರ. ಕಪಟ ರಾಜಕಾರಣಿಗಳು, ಭೂಗತ ಪಾತಕಿಗಳು, ಅಕ್ರಮ ಗಣಿಗಾರಿಕೆ ನಡೆಸುವ ಪಾಳೆಗಾರರು ಇರುವುದಿಲ್ಲ. ಅವನನ್ನು ಬಂಧಿಸಿದರೆ ಕೇಳುವವರು ಯಾರೂ ಇಲ್ಲ ಎನ್ನುವುದು ಪೊಲೀಸರಿಗೆ ಚೆನ್ನಾಗಿ ಗೊತ್ತಿದೆ. ಹೆಚ್ಚೆಂದರೆ, ಒಂದು ಹತ್ತು ಮಂದಿ ಚಿಂತಕರು, ಲೇಖಕರು ಸೇರಿ ಪ್ರತಿಭಟನೆ ನಡೆಸಬಹುದು. ಕೆಲವು ಜನ ಸೇರಿದರೆ ಅವರನ್ನು ಲಾಠಿಯಲ್ಲಿ ಮಣಿಸಬಹುದು. ಮತ್ತೂ ಜನ ಸೇರಿದರೆ ಅವರಿಗೆ ನಕ್ಸಲೀಯರೆಂಬ ಹಣೆಪಟ್ಟಿ ಕಟ್ಟಿ ಅವರನ್ನು ಮುಂದೆ ಹೆಜ್ಜೆ ಇಡದಂತೆ ಮಾಡಬಹುದು. ಬಹುಶಃ ಈ ಸರಳ ಯೋಚ
ನೆಯ ಬಲದಿಂದಲೇ ಇರಬೇಕು, ಗುರುವಾರ ಓರ್ವ ಲೇಖಕನನ್ನು ಪೊಲೀಸರು ಬಂಧಿಸಿ ಎಳೆದೊಯ್ದಿದ್ದಾರೆ. ಅಂದ ಹಾಗೆ ಈತ ಯಾವುದೇ ಮಾಧ್ಯಮಗಳು ದಿನನಿತ್ಯ ನಡೆಸುವಂತೆ ಕೋಮು ಪ್ರಚೋದಕವಾದ ಬರಹಗಳನ್ನು ಬರೆದಿಲ್ಲ. ಗಾಂಧಿಯನ್ನು ಕೊಂದ ಗೋಡ್ಸೆಯನ್ನು ಸಮರ್ಥಿಸಿಲ್ಲ. ಆತ ಒಂದು ಕಾದಂಬರಿಯನ್ನು ಬರೆದ. ಅದೊಂದೇ ಕಾರಣಕ್ಕೆ ಕೃತಿ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಪೊಲೀಸರು ಆತನನ್ನು ಬಂಧಿಸಿ ಎತ್ತೊಯ್ದರು. 
‘ಢುಂಢಿ’ ಎನ್ನುವ ಕಾದಂಬರಿಯನ್ನು ಬರೆದ ಲೇಖಕನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿಸಿದ ಅಥವಾ ಬಂಧಿಸಲು ಆದೇಶ ನೀಡಿದ ಪೊಲೀಸ್ ಅಧಿಕಾರಿ ಈ ಕಾದಂಬರಿಯ ಎಷ್ಟು ಹಾಳೆಗಳನ್ನು ಬಿಡಿಸಿದ್ದಾರೆ ಎನ್ನುವುದರ ಕುರಿತಂತೆ ಮಾಹಿತಿಯಿಲ್ಲ. ಕೆಲವು ಮಾಧ್ಯಮಗಳು ಈ ಕೃತಿಯ ಕುರಿತಂತೆ ಅನವಶ್ಯ ಚರ್ಚೆಯನ್ನು ಹುಟ್ಟಿಸಿ ಹಾಕಿರುವುದೇ ಲೇಖಕನ ಬಂಧನಕ್ಕೆ ಕಾರಣವಾಗಿದೆ. ಯಾಕೆಂದರೆ ಢುಂಢಿ ಕಾದಂಬರಿಯ ಕುರಿತಂತೆ ಗಂಭೀರವಾದ ವಿಮರ್ಶೆಯಾಗಲಿ, ಚರ್ಚೆಯಾಗಲಿ ಈವರೆಗೆ ಎಲ್ಲೂ ನಡೆದಿಲ್ಲ. ಈ ಕೃತಿಯ ಕುರಿತಂತೆ ಗದ್ದಲ ಎಬ್ಬಿಸಿದವರು ಸಾಹಿತ್ಯ ವಲಯದವರಲ್ಲ. ಬದಲಿಗೆ ಕೆಲವು ಪತ್ರಿಕೆಗಳ ವರದಿಗಾರರು. ಅದೂ ಪುಸ್ತಕ ಬಿಡುಗಡೆಯ ಸಂದರ್ಭದಲ್ಲಿ ಓರ್ವ ಹಿರಿಯ ಸಾಹಿತಿ ಮಾಡಿದ ಭಾಷಣ ಮತ್ತು ಪುಸ್ತಕದ ಮುನ್ನುಡಿಯನ್ನಷ್ಟೇ ಓದಿ ಚರ್ಚೆ ಮಾಡಿ, ಸಮಾಜವನ್ನು ಕಲಕಿದ್ದಾರೆ. ಇದೀಗ ಅದರ ಫಲವನ್ನು ಲೇಖಕ ಉಣ್ಣುವಂತಹ ಸ್ಥಿತಿ ನಿರ್ಮಾಣವಾಗಿದೆ.

ವಿಘ್ನ ನಿವಾರಕ ಗಣಪತಿಯ ಕುರಿತಂತೆ ಪುರಾಣದಲ್ಲಿ ನೂರಾರು ಕತೆಗಳಿವೆ. ಗಣಪತಿಯನ್ನು ಭಾರತೀಯರಲ್ಲಿ ಬಹುತೇಕ ಮಂದಿ ವಿಘ್ನ ನಿವಾರಕ ಎಂದು ನಂಬುತ್ತಾರೆ. ಒಂದು ರೀತಿಯಲ್ಲಿ ಅವನ ರೂಪವೇ ವಿಮರ್ಶೆ, ಗೇಲಿಗೆ ಒಳಪಡುತ್ತದೆ. ಆಕಾಶದಲ್ಲಿರುವ ಚಂದ್ರನೇ ಗಣಪತಿಯನ್ನು ನೋಡಿ ನಕ್ಕು ಶಾಪಕ್ಕೆ ಒಳಗಾದ ಕತೆ ನಮ್ಮ ಮುಂದಿದೆ. ಬುಡಕಟ್ಟು ಪ್ರದೇಶಗಳಲ್ಲಿ ಗಣಪತಿಯ ಕುರಿತಂತೆ ಅವರು ತಮ್ಮದೇ ಆದ ನಂಬಿಕೆಗಳನ್ನು ಹೊಂದಿದ್ದಾರೆ. ‘ಢುಂಢಿ’ ಕೃತಿ ಕೆಲವು ಅಧ್ಯಯನಗಳ ಆಧಾರದಲ್ಲಿ ಬರೆದಿರುವುದು. ಉದ್ದೇಶಪೂರ್ವಕವಾಗಿ ಒಂದು ನಂಬಿಕೆಯನ್ನ್ನು ಕೆಡಿಸುವ ಗುರಿ ಆ ಕೃತಿಗಿಲ್ಲ. ಒಂದು ವೇಳೆ ಆ ಕೃತಿ ಅದನ್ನು ನಂಬಿದವರ ಭಾವನೆಗಳಿಗೆ ನೋವನ್ನುಂಟು ಮಾಡುತ್ತದೆ ಎಂದಾದರೆ ಅದರ ವಿರುದ್ಧ ನ್ಯಾಯಾಲಯಕ್ಕೆ ತೆರಳುವ ಅಧಿಕಾರವಿದೆ. ಆದರೆ, ಶೀತವಾಯಿತೆಂದು ಮೂಗನ್ನೇ ಕತ್ತರಿಸಲು ಹೊರಟವರಂತೆ, ಬರೆದ ಲೇಖಕನನ್ನೇ ಅವಸರದಲ್ಲಿ ಬಂಧಿಸಲು ಹೊರಟಿದೆ ನಮ್ಮ ಕಾನೂನು ವ್ಯವಸ್ಥೆ.
ಲೇಖಕರು ತಮ್ಮ ದುರುದ್ದೇಶಕ್ಕಾಗಿ ಇನ್ನೊಬ್ಬರ ನಂಬಿಕೆಗಳನ್ನು ನೋಯಿಸುವುದು ಎಷ್ಟರ ಮಟ್ಟಿಗೂ ಸರಿಯಲ್ಲ. ಅದು ಎಲ್ಲ ರೀತಿಯಲ್ಲೂ ಖಂಡನೀಯ. ಈ ಹಿಂದೆ ಎಸ್. ಎಲ್. ಭೈರಪ್ಪ ‘ಆವರಣ’ ಕೃತಿಯಲ್ಲಿ ಮುಸ್ಲಿಮರ ಕುರಿತಂತೆ ಹೀನಾಯವಾಗಿ ಬರೆದಿದ್ದರು. ಆದರೆ ಕರ್ನಾಟಕದ ಮುಸ್ಲಿಮರು ಅದನ್ನು ಎಲ್ಲೂ ವಿವಾದಗೊಳಿಸದೆ, ಸಮನ್ವಯವನ್ನು ಕಾಪಾಡಿದರು. ಆಗ ಯಾವ ಪತ್ರಿಕೆಗಳೂ, ಸಂಘಟನೆಗಳೂ ಭೈರಪ್ಪನವರನ್ನು ಬಂಧಿಸಲು ಒತ್ತಾಯಿಸಲಿಲ್ಲ. ಒಂದೆರಡು ಪತ್ರಿಕೆಗಳಂತೂ ಅದೊಂದು ಅಪರೂಪದ ಕೃತಿಯೆಂಬಂತೆ ಪ್ರಚಾರ ನೀಡಿದನು. ಇದೀಗ ಗಣಪತಿಯ ಸಂಶೋಧನಾತ್ಮಕ ಕೃತಿಯ ಬಗ್ಗೆ ತಮ್ಮ ಮೂಗಿನ ನೇರಕ್ಕೆ ವದಂತಿಗಳನ್ನು ಹಬ್ಬಿಸಿ ಅದೇ ಪತ್ರಿಕೆಗಳೇ ಲೇಖಕನ ಬಂಧನಕ್ಕೆ ಕಾರಣವಾಗಿರುವುದು ವಿಷಾದನೀಯ.
ಈ ನಿಟ್ಟಿನಲ್ಲಿ ‘ಢುಂಢಿ’ ಕೃತಿಯ ಲೇಖಕನ ಬಂಧನ ಅಕ್ಷಮ್ಯ. ಅಸ್ಪಷ್ಟ ಮಾಹಿತಿಯ ಆಧಾರದಲ್ಲಿ ಪೊಲೀಸ್ ವ್ಯವಸ್ಥೆ, ಲೇಖನಿಯಂತಹ ಸೂಕ್ಷ್ಮ ವಿಷಯದಲ್ಲಿ ಮಧ್ಯಪ್ರವೇಶಿಸುವುದು ತಪ್ಪು. ಮೊತ್ತ ಮೊದಲು ಕೃತಿಯನ್ನು ಸಂಯಮದಿಂದ ಓದಬೇಕು. ಹಾಗೆಯೇ ಹಿರಿಯ ಸಾಹಿತಿ, ತಜ್ಞರ ಜೊತೆ ಕೃತಿಯ ಕುರಿತಂತೆ ಚರ್ಚಿಸಿ ಕ್ರಮ ತೆಗೆದುಕೊಳ್ಳಬೇಕು. ಒಂದು ವೇಳೆ ಸಮಾಜದ ಸೌಹಾರ್ದವನ್ನು ಕೆಡಿಸುವ ದುರುದ್ದೇಶದಿಂದಲೇ ಈ ಕೃತಿ ರಚನೆಯಾಗಿದೆ ಎಂದಾದರೆ ಲೇಖಕನನ್ನು ಬಂಧಿಸಿದರೂ ಅದರಲ್ಲಿ ತಪ್ಪೇನಿಲ್ಲ. ಯಾಕೆಂದರೆ ಅಭಿವ್ಯಕ್ತಿ ಸ್ವಾತಂತ್ರ ಯಾವತ್ತೂ ದುರುಪಯೋಗವಾಗಬಾರದು. ಅಭಿವ್ಯಕ್ತಿ ಸ್ವಾತಂತ್ರ ದುರುಪಯೋಗಗೊಂಡರೆ, ನಿಜವಾದ ಲೇಖಕರು, ಪತ್ರಕರ್ತರಿಗೆ ಅದು ಸಮಸ್ಯೆಯಾಗುತ್ತದೆ. ಬಂಧಿಸಲ್ಪಟ್ಟ ಲೇಖಕನನ್ನು ತಕ್ಷಣ ಬಿಡುಗಡೆ ಮಾಡಿ, ಸರಿಯಾದ ದಾರಿಯಲ್ಲಿ ಕಾನೂನು ಹೆಜ್ಜೆಯಿಡಬೇಕು. ಗಣಪತಿ ವಿದ್ಯೆಯ ಅಧಿದೇವತೆ ಎಂಬ ನಂಬಿಕೆಯಿದೆ. ಜ್ಞಾನದ ಅಧಿದೇವತೆಯಾದ ಗಣಪತಿಯ ಹೆಸರಿನಲ್ಲೇ ಇದೀಗ ಜ್ಞಾನವನ್ನು ಅದುಮಿಡಲು ಕೆಲವು ಹಿತಾಸಕ್ತಿಗಳು ಪ್ರಯತ್ನಿಸುತ್ತಿರುವುದು ನಿಜಕ್ಕೂ ಗಣಪತಿಗೆ ಮಾಡುವ ಅಪಚಾರವೇ ಸರಿ.

-------------------------------------------------------------------------------------------
"ಇನ್ನೋಸೆನ್ಸ್ ಆಫ್ ಮುಸ್ಲಿಂ'' ನಿರ್ದೇಶಕನೊಬ್ಬನ ವಿಕಾರ ಮುಖ...
ಸೆಪ್ಟೆಂಬರ್ ೨೪ , ೨೦೧೨


ಇತ್ತೀಚಿಗೆ ಇನ್ನೋಸೆನ್ಸ್ ಆಫ್ ಮುಸ್ಲಿಂ ಚಿತ್ರ ನೋಡಿದೆ. ಆ ಚಿತ್ರವನ್ನು ಮಾಡಿದ ಮನುಷ್ಯನ ವಿಕಾರ ಮುಖವನ್ನಷ್ಟೇ ನನಗೆ ಅದರಲ್ಲಿ ನೋಡಲು ಸಾಧ್ಯವಾಯಿತು.

ಮಹಮ್ಮದ್ ಪೈಗಂಬರ್ ನಾನು ಅತಿ ಇಷ್ಟಪಡುವ ಮನುಷ್ಯ.
೧೫೦೦ ವರ್ಷಗಳ ಹಿಂದೆ ವ್ಯಾಪಾರಿಗಳ ನಾಡಿನಲ್ಲಿ ""ಇಂದಿನಿಂದ ಬಡ್ಡಿ ನಿಷೇಧಿಸಲಾಗಿದೆ'' ಎಂದು ಘೋಷಿಸಿ, ಬಡವರನ್ನು ಸುತ್ತುವರಿದ ಬಡ್ಡಿಯ ಸಂಕಲೆಯನ್ನು ಕಳಚಿದ ಈತನಲ್ಲದೇ ನನ್ನ ಪ್ರವಾದಿ ಇನ್ನೊಬ್ಬನು ಇರಲು ಸಾಧ್ಯವೇ?. ಒಂದು ವೇಳೆ ತನ್ನ ಧರ್ಮವನ್ನು ಪ್ರಚಾರ  ಮಾಡೋದೇ ಪ್ರವಾದಿಯ ಉದ್ದೇಶವಾಗಿದ್ದರೆ ವ್ಯವಸ್ಥೆಯ ವಿರುದ್ಧ ಇಂತಹ ಒಂದು ನಿರ್ಣಯ ಮಾಡಲು ಸಾಧ್ಯವಿತ್ತೆ? ವ್ಯವಸ್ಥೆಯೊಂದಿಗೆ,  ಮುಖ್ಯವಾಗಿ ದೊಡ್ಡ ವ್ಯಾಪಾರಿಗಳೊಂದಿಗೆ, ಶ್ರಿಮಂತರೊಂದಿಗೆ ರಾಜಿ ಮಾಡಿಕೊಂಡಿದ್ದರೆ ಬಹುಶಹ  ಇದಕ್ಕಿಂತಲೂ ವಿಶಾಲವಾಗಿ ಧರ್ಮವನ್ನು ಬೆಳೆಸಬಹುದಿತ್ತೋ ಏನೋ..

ವ್ಯಭಿಚಾರವನ್ನು ಘನತೆ ಎಂದು ತಿಳಿದುಕೊಂಡ ಸಮಾಜದಲ್ಲಿ ವ್ಯಭಿಚಾರ ಮಾಡಬೇಡಿ. ಬೇಕಾದರೆ ಆಕೆಯನ್ನು ಮದುವೆಯಾಗಿ, ಆಕೆಗೆ "ಪತ್ನಿಗೆ ಸಲ್ಲಬೇಕಾದ ಹಕ್ಕು''ಗಳನ್ನು ನೀಡಿ ಎಂದು ಘೋಶಿಸಿದ್ದವರನ್ನು ಪ್ರೀತಿಸದೇ ;ಇರಲು ಸಾಧ್ಯವೇ.

೧೫೦೦ ವರ್ಷಗಳ ಹಿಂದೆಯೇ "ಪಾನ ನಿಷೇಧ'' ಜಾರಿಗೆ ತಂದ ಮನುಷ್ಯನ ಸಂದೇಶ ನನ್ನ ಪಾಲಿಗೆ ಅಪ್ಪಟ ದೇವರ ಸಂದೇಶವೇ ಹೌದು.
"ಇನ್ನು ಮುಂದೆ ಬಡ್ಡಿ ಮನ್ನಾ ಮಾಡಲಾಗಿದೆ. ನಿಮ್ಮ ಸಂಪತ್ತಿನ ಒಂದು ಭಾಗವನ್ನು ಬಡವರಿಗೆ ನೀಡೋದು  ಕಡ್ಡಾಯವಾಗಿದೆ'' ಈ  ಸಂದೇಶಕ್ಕು ಖಡ್ಗ ಕ್ಕೂ ಯಾವುದಾದರು ಸಂಬಂಧ ಇದೆಯೇ?

ಕಾಣದ ಆ ದೇವರ ಕಾಲಿಗಷ್ಟೇ ಬೀಳಬೇಕು. ಮನುಷ್ಯರ ಕಾಲಿಗೆ ಬೀಳುದನ್ನು  ನಿಷೇಧಿಸಲಾಗಿದೆ ಎಂಬ ಅಪ್ಪಟ ಸಮಾನತೆಯ ಕನಸನ್ನು ಕಾಣಲು ಈ ಜಗತ್ತಲ್ಲಿ ಪ್ರವಾದಿ ಮಹಮ್ಮದ್ಗಷ್ಟೇ ಸಾಧ್ಯವಾಯಿತು.

ಸಾಧಾರಣ ಎಲ್ಲ ಧಾರ್ಮಿಕ ಸುಧಾರಕರು ತಮ್ಮ  ಅನುಯಾಯಿಗಳನ್ನು ಶಿಷ್ಯರು ಎಂದು ಕರೆಯುತ್ತಾರೆ. ಆದರೆ ಪ್ರವಾದಿ ತನ್ನ ಅನುಯಾಯಿಗಳನ್ನು “ಸಂಗಾತಿ-(ಸಹಾಬಿ)'' ಎಂದು ಕರೆದರು. ಸಂಗಾತಿ ಅಥವಾ ಕಾಮ್ರೇಡ್ ಎಂಬ ಶಬ್ದವನ್ನು ಮೊದಲು ಬಳಸಿದ್ದು ಮಹಮ್ಮದ್.. ಯಾವತ್ತು ತನ್ನ ಕಾಲಿಗೆ ಬೀಳೋದು, ತನ್ನನ್ನು  ಕಂಡಾಗ ಎದ್ದು ನಿಲ್ಲೋದನ್ನು ಸಂಗಾತಿಗಳಿಗೆ ಮಹಮ್ಮದ್ ನಿಷೇಧಿಸಿದ್ದರು.

೧೫೦೦ ವರ್ಷಗಳ ಹಿಂದೆ ಹೆಣ್ಣಿಗೆ ಆಸ್ತಿಯ ಹಕ್ಕನ್ನು ಘೋಷಿಸಿದ್ದು ಮಹಮ್ಮದ್. ಹೆಣ್ಣನ್ನು ಹೂತುಹಾಕುವ ವ್ಯವಸ್ಥೆಯಲ್ಲಿ, ಹೆಣ್ಣನ್ನು ಮದುವೆಯಾಗುವಾಗ…ಆಕೆಗೆ ಮೆಹರನ್ನು (ವಧುದಕ್ಷಿಣೆ) ಕಡ್ಡಾಯ ಗೊಳಿಸಿದರು. ಅಂದಿನ ದಿನಗಳಲ್ಲಿ ಹೆಣ್ಣಿಗೆ ಇದೊಂದು ಭಾರೀ  ಕೊಡುಗೆಯೇ ಆಗಿತ್ತು.

ಇಸ್ಲಾಂ ಖಡ್ಗದಿಂದ ಆಗಿತ್ತೆ? ತನ್ನ ಚಿಂತನೆಯನ್ನು ಹರಡುವಾಗ ಮಹಮ್ಮದ್ ಒಬ್ಬಂಟಿಯಾಗಿದ್ದರು. ಒಬ್ಬಂಟಿಯಾಗಿ ಅವರು ತನ್ನ ಹೋರಾಟವನ್ನು ಮಾಡಿದರು. ಅವರಿಗೆ ಮೊದಲು ಜೊತೆಯಾದುದು  ಸಂಗಾತಿ ಅಬುಬಕರ್. ಅನಾಥ ಮಹಮ್ಮದ್ನನ್ನು ಸಾಕಿದ್ದು ದೊಡ್ಡಪ್ಪ ಅಬು ತಾಲಿಬ್. ವಿಶೇಷವೆಂದರೆ ಅಬು ತಾಲಿಬ್ ತನ್ನ ಜೀವನದ ಕೊನೆಯವರೆಗೂ ಇಸ್ಲಾಂ ಸ್ವೀಕರಿಸಲಿಲ್ಲ. ಆದರೆ ಅವರ ನಡುವೆ ಸಂಬಂಧಕ್ಕೆ ಅದರಿಂದ ಯಾವ  ಧಕ್ಕೆಯಾಗಲಿಲ್ಲ. ಇಸ್ಲಾಂ ಸ್ವೀಕರಿಸುವಂತೆ ಮಹಮ್ಮದ್ ಸದಾ ದೊಡ್ಡಪ್ಪನನ್ನು ಮನವೊಲಿಸುತ್ತಲೇ ಇದ್ದರು. ದೊಡ್ಡಪ್ಪ ಸಾಯುವ ಹಂತದಲ್ಲಿರುವಾಗ  ಇಸ್ಲಾಂ ಸ್ವೀಕರಿಸುವಂತೆ  ಮಾಡಲು ಕೊನೆಯ ಪ್ರಯತ್ನ ನಡೆಸಿದರು. "ಇಸ್ಲಾಮ್ಮ್ ಸ್ವೀಕರಿಸಿದರೆ ಸಮಾಜದಲ್ಲಿ ನನ್ನ ಘನತೆಗೆ ಕುಂದುಂಟಾಗುತ್ತದೆ'' ಎಂದು ಅಬುತಾಲಿಬ್ ಆ ಆಹ್ವಾನವನ್ನು ನಿರಾಕರಿಸಿದರು. ದೊಡ್ಡಪ್ಪ ಸಾವಿನ ಕೊನೆಯ ಕ್ಷಣದಲ್ಲಿದ್ದಾಗ ಮುಹಮ್ಮದ್ ಅವರ ದೇಹವನ್ನೆಲ್ಲ ತನ್ನ ಕೈಯಿಂದ ಸವರಿದರಂತೆ. "ನನ್ನ ಕೈ ಸ್ಪರ್ಶದಿಂದ ದೊಡ್ಡಪ್ಪ ಸ್ವರ್ಗ ಸೇರಲಿ'' ಎನ್ನುವ ಆಶೆಯಿಂದ. ವಿಶೇಷವೆಂದರೆ, ಅಬುತಾಲಿಬ್ ಇಸ್ಲಾಂ ಸ್ವೀಕರಿಸದೆ ಇದ್ದರೂ ಪ್ರವಾದಿಯನ್ನು  ಶತ್ರುಗಳಿಂದ ತಮ್ಮ ಜೀವ ಇರುವವರೆಗೂ ರಕ್ಷಿಸಿದರು. ಅಬುತಾಲಿಬ್ ಒಬ್ಬರಿಗೆ ಹೆದರಿ ಮಹಮ್ಮದರನ್ನು ಶತ್ರುಗಳು ಕೊಲ್ಲದೆ ಉಳಿಸಿದ್ದರು. ಪರಸ್ಪರರ ಚಿಂತನೆ ಬೇರೆಯಾಗಿದ್ದರು ಪರಸ್ಪರರನ್ನು ಪ್ರೀತಿಸುತ್ತಿದ್ದರು. ಅಭಿವ್ಯಕ್ತಿ ಸ್ವಾತಂತ್ರ್ಯದ ಅತಿ ದೊಡ್ಡ ಉಧಾಹರಣೆ ಇಲ್ಲಿದೆ.

ಇಸ್ಲಾಮಿನಲ್ಲಿ  ಮೊತ್ತ ಮೊದಲ ಪ್ರಾರ್ಥನೆಯ  ಕರೆ ಅಥವಾ ಅಜಾನ್ ನೀಡಿರುವುದು ಒಬ್ಬ ನಿಗ್ರೋ. ಅವರ ಹೆಸರು ಬಿಲಾಲ್. ಗುಲಾಮಿ ವ್ಯವಸ್ಥೆಯನ್ನು  ಪ್ರಶ್ನಿಸಿದ ಮಹಾ ಮನುಷ್ಯನೋಬ್ಬನನ್ನು ಯಾರಿಗಾದರು ದ್ವೇಷಿಸಲು ಸಾಧ್ಯ ಎಂದರೆ, ಆತನ ಹೃದಯ ಕೊಳೆತಿದೆ ಎಂದೇ ಅರ್ಥ.
"ನಾನು ದೇವರಲ್ಲ, ನಿಮ್ಮಂತೆಯೇ ಮನುಷ್ಯ.'' ಎಂದು ಪದೇ ಪದೇ ಘೋಷಿಸಿ…ಎಲ್ಲೂ ತನ್ನ ಭಾವಚಿತ್ರವು ಇರದಂತೆ ಜಾಗೃತೆ ವಹಿಸಿದ ಅಪ್ಪಟ ಮನುಷ್ಯ ಮಹಮ್ಮದ್. ಅವರ  ಚಿತ್ರ ಒಂದಿದ್ದರೆ ಇಂದು ಅದನ್ನೇ  ದೇವರಾಗಿ ಪೂಜಿಸುತ್ತಿದ್ದರು. ಗಲ್ಲಿ ಗಲ್ಲಿಗಳಲ್ಲಿ  ಅವರ ಪ್ರತಿಮೆಗಳು ನಿಂತಿರುತ್ತಿತ್ತು. ಇಂದಿಗೂ  ಪ್ರವಾದಿ ಮಹಮ್ಮದ್ ದೇವರು ಅಲ್ಲ ಎಂದು ದೃಡವಾಗಿ ನಂಬಿರೋದರ ಹಿಂದೆ ಅವರ ದೂರದೃಷ್ಟಿ ಕೆಲಸ ಮಾಡಿದೆ. ಹೆಚ್ಚಿನ ಧರ್ಮ ಪ್ರಚಾರಕರು ಬೋಧನೆ ಮಾಡುತ್ತಾ ಮಾಡುತ್ತಾ ತಾವೇ ದೇವರಾದರು. ಆದರೆ ಮಹಮ್ಮದ್ ಅದನ್ನು ನಖಶಿಖಾಂತ ತಡೆದರು.

ನಾನು ಹೊಸದಾಗಿ ಧರ್ಮವನ್ನು ಸೃಷ್ಟಿಸುತ್ತಿಲ್ಲ. ಹಿಂದೆ ಆಗಿ ಹೋಗಿರುವ  ಜೀಸಸ್, ಮೋಶೆ, ಅಬ್ರಾಹಾಂ,  ದಾವುದ್ ಎಲ್ಲರು ಇಸ್ಲಾಮ್ನ ಪ್ರವಾದಿಗಳೇ. ಅವರು ಹೇಳಿದ್ದನ್ನೇ ನಾನು ಹೇಳುತ್ತಿದ್ದೇನೆ. ಹೊಸತಾಗಿ ಏನು ಹೇಳುತ್ತಿಲ್ಲ..ಎಂದು ಹೇಳಿದ್ದು ಮಾತ್ರವಲ್ಲ, ಕ್ರಿಶ್ಚಿಯನ್, ಯಹೂದಿಗಳು ನಂಬುವ ಪ್ರವಾದಿಗಳ ಹೆಸರನ್ನು ಹೇಳುವಾಗಲು ಕಡ್ಡಾಯವಾಗಿ ಅವರಿಗೆ ದೇವರು  ಶಾಂತಿ ನೀಡಲಿ  ಎಂದು ಹೇಳಿ ಗೌರವ ಸೂಚಿಸಲು  ಕಳಿಸಿದ್ದು ಮಹಮ್ಮದ್. ಈ ಮನುಷ್ಯ ನನಗೆ ಇಷ್ಟವಾಗದೆ ಇರೋದಕ್ಕೆ ಕಾರಣಗಳು ಇವೆಯೇ?

ಎಲ್ಲಕ್ಕಿಂತ ದೊಡ್ಡ ದುರಂತವೆಂದರೆ ಇನ್ನೋಸೆನ್ಸ್ ಆಫ್ ಮುಸ್ಲಿಂ ಚಿತ್ರವನ್ನು ಪ್ರತಿಭಟಿಸುವ, ಅದನ್ನು ನಿಷೇಧಿಸಬೇಕು ಎಂದು ಒತ್ತಾಯಿಸುವ ಒಂದು ಸಮೂಹವನ್ನು ಮತ್ತೆ “ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಲ್ಲಿ” ಅಪರಾಧಿಗಳನ್ನಾಗಿ ಕಟಕಟೆಯಲ್ಲಿ ನಿಲ್ಲಿಸುತ್ತಿರೋದು. ಆ ಸಿನಿಮಾಕ್ಕೆ ಬಂದ ಪ್ರತಿಭಟನೆಯು  ಅದೂ ಅಭಿವ್ಯಕ್ತಿಯೇ ಅಲ್ಲವೇ? “ಇನ್ನೋಸೆನ್ಸ್ ಆಫ್ ಮುಸ್ಲಿಂ…” ನಿರ್ದೇಶಕ ಸಿನಿಮಾದಂತಹ ಅದ್ಭುತ ಮಾಧ್ಯಮವನ್ನು ದುರುಪಯೋಗ ಪಡಿಸಿಕೊಂಡಿದ್ದಾನೆ. ಯಾವುದೇ ವೈಚಾರಿಕ ಚರ್ಚೆಗಳಿಲ್ಲದ  ಈ ಚಿತ್ರ , ಕೋಟ್ಯಂತರ ಜನ ಪ್ರೀತಿಸುವ ಮನುಷ್ಯನೊಬ್ಬನ ಮೇಲೆ ದಾಳಿ ನಡೆಸುವ ಉದ್ದೇಶಕ್ಕಾಗಿಯೇ ಮಾಡಿರೋದಾಗಿದೆ.. ಒಂದು ಗಂಬೀರ ಚರ್ಚೆಗೆ ಸಾಧ್ಯ ಮಾಡಿಕೊಡುವ ಸಿನಿಮ ಮಾಧ್ಯಮ ಇಂಥವರ ಕೈಯಲ್ಲಿ ದುರ್ಬಳಕೆಯಾದಾಗ, ನಾಳೆ ಅದರ ಪರಿಣಾಮವನ್ನು ಸೃಜನ ಶೀಲ ನಿರ್ದೇಶಕರು ಎದುರಿಸಬೇಕಾಗುತ್ತದೆ. ಕ್ಯಾಮರದಲ್ಲಿ ಸಿನಿಮ ತೆಗೆದರೆ ಅಭಿವ್ಯಕ್ತಿ. ಅದೇ ಕ್ಯಾಮರದಲ್ಲಿ ಒಬ್ಬನ ತಲೆಗೆ ಹೊಡೆದರೆ ಅದನ್ನು ಸಿನಿಮ ಎಂದು ಕರೆಯಲಾಗೋದಿಲ್ಲ. ಅದು ಹಿಂಸೆ, ಕ್ರೌರ್ಯ…ಅದನ್ನೇ ಆ ನಿರ್ದೇಶಕ ಮಾಡಿದ್ದಾನೆ.

ಇನ್ನೋಸೆನ್ಸ್ ಆಫ್ ಮುಸ್ಲಿಂ ಚಿತ್ರವನ್ನು ಮಾಡಿದ ನಿರ್ದೇಶಕ ಖಂಡಿತವಾಗಿಯೂ ಒಂದು ಭಯಾನಕ ರೋಗದಿಂದ ನರಳುತ್ತಿದ್ದಾನೆ. ಆ ರೋಗ ಬೇಗ ವಾಸಿಯಾಗಿ ಆತ ಗುಣಮುಖನಾಗಲಿ ಎಂದು ಹಾರೈಸುವ. ಅವನ ಉದ್ದೇಶವೇ ಕ್ರೌರ್ಯವನ್ನು ಉದ್ಧೀಪಿಸೋದು.. ಸಹನೆ ಮತ್ತು ತಾತ್ಸಾರದಿನ್ದಷ್ಟೇ ಆ ಕ್ರೌರ್ಯವನ್ನು ಪರಿಣಾಮಕಾರಿಯಾಗಿ ಎದುರಿಸಲು ಸಾಧ್ಯ. ಅದಕ್ಕೆ ಅವನಂತೆಯೇ  ಪ್ರತಿಕ್ರಯಿಸಲು ಹೋದಲ್ಲಿ...ಅವನು ತನ್ನ ಉದ್ದೇಶವನ್ನು ಸಾಧಿಸ ತೊಡಗುತ್ತಾನೆ. ಹಿಂಸಾ ರೀತಿಯ ಪ್ರತಿಭಟನೆಯನ್ನೇ ಮುಂದಿಟ್ಟುಕೊಂಡು ತನ್ನ ಚಿತ್ರವನ್ನು ಸಮರ್ಥಿಸ ತೊಡಗುತ್ತಾನೆ.

ಪ್ರಮುಖ ಸುದ್ದಿಗಳು ........

ಲೇಖಕರು - ರಿತೇಶ್ ಕುಮಾರ್ ಶೆಟ್ಟಿ 


ಪ್ರಮುಖ ಸುದ್ದಿಗಳು ........
೧) ಗುಜುರಿ ಅಂಗಡಿಯವನು ನೀಡಿದ ಸುಳಿವಿನ ಮೇರೆಗೆ ಇನ್ನೋರ್ವ ಶಾಂತಿ ದೂತನ ಬಂಧನ.
೨) ಪಾಕಿಸ್ಥಾನದಲ್ಲಿ ದ್ರೋನ್ ದಾಳಿಯಲ್ಲಿ ಸಾಯುವುದಕಿಂತ ತಿಹಾರ್ ಜೈಲ್ನಲ್ಲಿ ಬಿರಿಯಾನಿ ತಿಂದು ಕೇಂದ್ರ ಸರಕಾರ ನೀಡುವ ಉಚಿತ ಕಾನೂನ್ ನೆರವನ್ನು ಸದುಪಯೋಗ ಪಡಿಸಿಕೊಳ್ಳುವುದೇ ಸೂಕ್ತ ಅನಿಸಿದ್ದರಿಂದ ಭಾರತಕ್ಕೆ ಬಂದೆ - ಸೆರೆ ಸಿಕ್ಕ ಶಾಂತಿ ದೂತ.
೩) ಈ ವಿಷಯದ ಮೇಲೆ ನಗರದ ಬಾರ ಒಂದರಲ್ಲಿ ಅಶಾಂತ ಮೂರ್ತಿಯವರ ನೇತ್ರತ್ವದಲ್ಲಿ ಸಭೆ ಸೇರಿದ ವಿಕಾರವಾದಿಗಳು ಹೀಗೆ ಸರಣಿ ಬಂಧನಗಳು ನಡೆಯುವುದರಿಂದ ಒಂದು ನಿರ್ಧಿಷ್ಟ ಕೋಮಿನ ಹೆಸರು ಕೆಡುತ್ತದೆ ಆದ್ದರಿಂದ ತಿಂಗಳಿಗೆ ಒಬ್ಬನಿಗಿಂತ ಜಾಸ್ತಿ ಭಯೋತ್ಪಾದಕರ ಬಂಧನಕ್ಕೆ ಕೇಂದ್ರ ಸರಕಾರ ಆಸ್ಪದ ನೀಡಬಾರದು ಎಂದು ನಿರ್ಣಯ ಮಂಡಿಸಲಾಯಿತು ಮತ್ತು ಬೂಬ,ಬೂದಿ,ದೆವ್ವೂರ ಆದಿಯಾಗಿ ಎಲ್ಲ ವಿಕಾರವಾದಿಗಳು ಗಡ್ದಕೆರೆದು ಇದನ್ನು ಅನುಮೋದಿಸಿದರು ಮತ್ತು ಈಗಾಗಲೇ ತುಂಡನ ಮೂಲಕ ಜೈಲು ಕೋಟ ಭರ್ತಿಯಾದ್ದರಿಂದ ಸೆರೆಹಿಡಿಯಲ್ಪಟ್ಟ ಶಾಂತಿ ದೂತನನ್ನು ಬಿಟ್ಟು ಮುಂದಿನ ತಿಂಗಳಲ್ಲಿ ಹಿಡಿಯಬೇಕು ಎಂದು ಕೇಂದ್ರ ಸರಕಾರವನ್ನು ಒತ್ತಾಯ ಮಾಡಲಾಯಿತು.
೪) ಇದಕ್ಕೆ ಸ್ಪಂದಿಸಿದ ಕೇಂದ್ರ ಸಚಿವರೋರ್ವರು ಈಗಾಗಲೇ ಬಂದಿಸಿದ್ದರಿಂದ ಬಿಡುವುದು ಅಸಾಧ್ಯ ಆದರೆ ಕೇಂದ್ರದ ಮಹಾತ್ವಕಂಕ್ಷಿ ಯೋಜನೆಯಾದ ಕಾನೂನು ನೆರವನ್ನು ಭಟ್ಕಳದಿಂದಲೆ ಶುರು ಮಾಡುವುದಾಗಿ ಆಶ್ವಾಸನೆ ನೀಡಿದರು.
೫) ಇತ್ತೀಚಿನ ವರದಿ ನಿಲುಮೆ ಯಾ ಮೇಲೆ ನಡೆದ ಉಗ್ರರ ದಾಳಿಯನ್ನು ಖಂಡಿಸಿದ ನಿರ್ವಾಹಕರು ಕಾನೂನು ಮೊರೆ ಹೋಗುವುದಾಗಿ ತಿಳಿಸಿದರು ಮತ್ತು ಇದನ್ನು ಕೇಳಿ ಬೂಸಿ ಬೂಬರವರು ತಬ್ಬಿಬ್ಬು ಗೊಂಡು ನಗರದ ಲಲಿತ್ ಬಾರನಲ್ಲಿ ಪೆಗ್ ಹಾಕಲು ಕೂತುಕೊಂಡರು ಎಂದು ನಂಬಲರ್ಹ ಮೂಲಗಳಿಂದ ತಿಳಿದು ಬಂದಿದೆ.

ಸಾಯಿತಿಗಳು ಮತ್ತು ಸೋಮುವಾದಿಗಳು

ಲೇಖಕರು - ವಿಶ್ವನಾಥ್ ರೆಡ್ಡಿ 









(ಕಡ್ಡಾಯವಾಗಿ ಬುದ್ಧಿವಂತರಿಗೆ ಮಾತ್ರ)

ಅದ್ಹೇಗೆ ಬಂತೋ ಗೊತ್ತಿಲ್ಲ ಸೋಮವಾದಿ ಕುಟ್ಟಣ್ಣನಿಗೆ, ಮಧ್ಯಪಾನ ಮಾಡಿದ ನಂತರ ಮನುಷ್ಯನಲ್ಲಾಗುವ ಬದಲಾವಣೆಗಳ ಕುರಿತು ಒಂದು ಲೇಖನ ಬರೆಯಬೇಕೆಂಬ ಬಯಕೆ ಶುರುವಾಗಿಬಿಟ್ಟಿತ್ತು. ಅದಕ್ಕಾಗಿ ಆತ ಬೆಂಗಳೂರಿನ ಬಾರೊಂದರಲ್ಲಿ ಕುಳಿತು ಗುಪ್ತವಾಗಿ ಕುಡುಕರ ದೇಹ ಭಾಷೆಗಳನ್ನು ಅಧ್ಯಯನ ಮಾಡಲು ತೀರ್ಮಾನಿಸಿದ. ಒಂದು ದಿನ ಕತ್ತಲಾಗುತ್ತಿದ್ದಂತೆ ಬಾರೊಳಗೆ ಹೊಕ್ಕು ಮೂಲೆಯೊಂದರ ಟೇಬಲ್ ಹಿಡಿದು ಕುಳಿತುಕೊಳ್ಳುವಷ್ಟರಲ್ಲಿ, 10-15 ಜನರಿದ್ದ ಇನ್ನೊಂದು ಗ್ಯಾಂಗು ಬಂದು ಈತನ ಹಿಂದಿನ ಇನ್ನೊಂದು ಟೇಬಲ್‌ನಲ್ಲಿ ಆಸೀನವಾಯಿತು. ತಿರುಗಿ ನೋಡುವಷ್ಟರಲ್ಲಿ ಆತನಿಗೆ ಕಾಣಿಸಿದ್ದು ಖ್ಯಾತ ಸಾಯಿತಿ  , ರಾಬರಿ ಅಂಗಡಿಯ ಮಾಲೀಕ ಮತ್ತು ಅವನ ಪಟಾಲಮ್ಮು. ಅವರೊಂದಿಗೆ, ಯಾವಾಗಲೂ ವಡಾ ವಡಾ ಅಂತ ವದರುವ ಅತ್ಯಾತೀತವಾದಿ ಸುವರ್ ಸಂಜು ಇದ್ದದ್ದನ್ನು ನೋಡಿ, ಸೋಮವಾದಿ ಕುಟ್ಟಣ್ಣ ನಿಗೆ ಆಕಾಶಕ್ಕೆ ಮೂರೇ ಗೇಣು! ಯಾಕೆಂದರೆ ಆತನ ಟಾಪಿಕ್ಕಿಗೆ ಸರಿಯಾದ ವ್ಯಕ್ತಿಗಳೇ ಸಿಕ್ಕಿದ್ದರು.!

ಕುಟ್ಟಣ್ಣ ಅವರ ಟೇಬಲ್ ಕಡೆಗೇ ಕಿವಿಯಾಗಿಸಿ ಕುಳಿತಿದ್ದ. ಮೊದಮೊದಲು ಶಾಂತವಾಗಿಯೇ ಶುರುವಾದ ಗುಂಡು ಪಾರ್ಟಿ, ಬರು ಬರುತ್ತಾ ಸೋಮವಾದಿಗಳ ಕಡೆಗೇನೇ ನಿಶಾನೆ ಇಡತೊಡಗಿತ್ತು. ಕ್ಯಾತ ಸಾಯಿತಿ  ಮಾತನಾಡುತ್ತಿದ್ದ; ಈ ಸೋಮವಾದಿಗಳ ಕಿರಿ ಕಿರಿ ಜಾಸ್ತಿಯಾಯ್ತು. ಏನೇನೋ ಮಾಡಿ ನಾಲ್ಕು ಕಾಸು ಸಂಪಾದನೆ ಮಾಡೋ ನಮ್ಮ ಸೀಕ್ರೇಟು ಅವರಿಗೆ ಗೊತ್ತಾಗಿಬಿಟ್ಟಿದೆ. ಸಾಮಾಜಿಕ ಜಾಲ ತಾಣಗಳಲ್ಲಂತೂ ನಮಗೆ ಹೆಚ್ಚಿನ ಅವಮಾನವಾಗುತ್ತಿದೆ. ಏನೋ ಇದುವರೆಗೂ ನಾನೆಲ್ಲೂ ಅದರ ಹೆಸರೇ ಕೇಳಿಲ್ಲ, ಅಂತ ರೋಗ ನನಗೆ ಬಂದಿದೆಯೆಂದು ಸುಳ್ಳೇ ಸುದ್ದಿ ಹಬ್ಬಿಸುತ್ತಿದ್ದಾರೆ. ಅದೆಲ್ಲ ಸುಳ್ಳು.ಬೇಕಾದರೆ ನೀವೇ ನೋಡಿ, ಅಂದವನೇ ಎದ್ದು ನಿಂತು ಹಿಮ್ಮುಖವಾಗಿ ಬಗ್ಗಿ ನಿಂತುಬಿಟ್ಟ!. ಅಷ್ಟರಲ್ಲೇ ನಾಲ್ಕು ಪೆಗ್ಗು ಹೊಡೆದಿದ್ದನಲ್ಲ ಸುವರ್ ಸಂಜು, ಎದ್ದು ನಿಂತವನೇ ಅಣ್ಣಾ ನೀನು ಕೂತ್ಕೋಳಣ್ಣಾ ನಾವು ಇಲ್ಲವಾ ನಿನ್ನ ತಮ್ಮಂದಿರು.... ನಿನಗೆ ಅವಮಾನ ಮಾಡಿದ ಮೇಲೆ ಅದು ನಮಗೆ ಆದಂಗಣ್ಣಾ..... ನಮ್ಮ ಸಾಹೇಬರು ಇದ್ದಾರೆ ಸುಜ್ಞಾನಿ ರುದ್ದರ್. ಅವರ ಹೆಸರು ಕೇಳಿದರೆ ಸಾಕು ಈ ಸೋಮುವಾದಿಗಳೆಲ್ಲ ಗಡ ಗಡ ಗಡ.... ಅಂದವನೇ ಏ ವೇಯ್ಟರ್ ಒನ್ ಮೋರ್ ಪೆಗ್ ಅಂತ ಕೂಗಿ ಕುಳಿತುಕೊಂಡುಬಿಟ್ಟ.

ಕುಟ್ಟಣ್ಣ ಮೊದಲಿನಿಂದ ಶುರುವಾದ ಅವರ ಎಲ್ಲಾ ಸಂಭಾಷಣೆಯನ್ನೂ ಗುಪ್ತವಾಗಿ ನೋಟ್ಸ್ ಮಾಡಿಕೊಳ್ಳುತ್ತಿದ್ದ. ಆತನಿಗೆ ಒಂದಂತೂ ಸ್ಪಷ್ಟವಾಗಿ ಹೋಗಿತ್ತು; ಎಣ್ಣೆ ಹೊಡೆಯದ ಹೊರತು ಇವರಿಗೆ ಮಾತನಾಡೋಕೆ ಸುತಾರಾಂ ಧೈರ್ಯ ಬರುವದಿಲ್ಲ. ಎಣ್ಣೆಯೇ ಇವರ ಎನರ್ಜಿ! ಸರಕಾರ ಮಧ್ಯಪಾನ ನಿಷೇಧದಂತ ಕಾಯಿದೆಯೇನಾದರೂ ಜಾರಿಗೆ ತಂದರೆ ಇವರ ಬದುಕೇ ದುಸ್ತರವಾಗುತ್ತದೆ!ಇವರಿಗೆ ಅತ್ಯುತ್ತಮ ಯೋಚನೆಗಳು ಹುಟ್ಟುವದು ಬಾರುಗಳಲ್ಲಿಯೇ!

ಕುಟ್ಟಣ್ಣ ಇನ್ನೊಂದು ಗಮನಿಸಿದ ಅಂಶವೆಂದರೆ ವೇಯ್ಟರ್ ಬಿಲ್ಲು ತಂದಿಡುವ ಮೊದಲೇ ಮೂತ್ರ ವಿಸರ್ಜನೆಯ ನೆಪದಲ್ಲಿ ಟೇಬಲ್ ಪೂರಾ ಖಾಲಿಯಾಗಿದ್ದುದು.
ತಂಡದ ಎಲ್ಲಾ ಸದಸ್ಯರು ಒಬ್ಬೊಬ್ಬರಾಗಿ ಕೆಳಗಡೆ ಜಮಾವಣೆಯಾಗಿದ್ದರು. ಅವರನ್ನೆಲ್ಲಾ ವಿಚಾರ ಗೋಷ್ಟಿಗೆ ಕರೆಸಿದ ತಪ್ಪಿಗೆ, ಮುಖ ಹಿಂಜಿಕೊಂಡೇ ರಾಬರಿ ಅಂಗಡಿ ಮಾಲೀಕ ಬಿಲ್ಲು ಚುಕ್ತಾ ಮಾಡಿ ಬಂದ. ಹಿಂದೆಯೇ ಕೆಳಗಿಳಿದು ಬಂದ ಕುಟ್ಟಣ್ಣನಿಗೆ ಕಾಣಿಸಿದ್ದನ್ನು ಅವರ ಇನ್ನೊಂದು ಮುಖ. .....!.

ಅದೇ ಇನ್ನೊಂದು ರೋಚಕ ಅಧ್ಯಾಯ...............ಸಧ್ಯದಲ್ಲೇ ನಿರೀಕ್ಷಿಸಿ.!!

(ಸಶೇಷ)

ಬುಧವಾರ, ಆಗಸ್ಟ್ 28, 2013

ಮಂಗಳೂರು : ಭಾರಿ ಹೊಗೆ ದುರಂತ, ಯಾವುದೇ ಜೀವ ಹಾನಿ ಇಲ್ಲ

ಬಡಾಯಿ ನ್ಯೂಸ್ , ಮಂಗಳೂರು
ಸೆ ೨೬ : ನಿನ್ನೆ ಮಂಗಳೂರಿನ ಜನ , ಒಂದು ವಿಚಿತ್ರ , ವಿಸ್ಮಯ ಮತ್ತು ಕೌತುಕ ಘಟನೆಗೆ ಸಾಕ್ಷಿ ಆಗಬೇಕಾಯಿತು. ನಿನ್ನೆ ಮಧ್ಯಾಹ್ನ ಸುಮಾರು ೧೨ ಗಂಟೆ ಸಮಯಕ್ಕೆ ನಗರದ ಹೆಸರಾಂತ ಜನ ಓದದ ಪತ್ರಿಕೆ “ವಾಂತಿ ಭಾರತಿ “  ಕಚೇರಿ ಇಂದ ಹೊರಬರುತ್ತಿದ್ದ ದಟ್ಟ ಹೊಗೆ ಈ ಕೌತುಕಕ್ಕೆ ಮೂಲ ಕಾರಣ ...
ಮೊದಲು ಚಿಕ್ಕದಾಗಿ ಶುರುವಾದ ಹೊಗೆ, ನಂತರ ದಟ್ಟವಾಗಿ ರೂಪಗೊಂಡಿದ್ದು ಜನರ ಭೀತಿಗೆ ಕಾರಣವಾಗಿತ್ತು.. ಮೊದಲು ಸ್ಥಳಿಯರು, ಮಾರಾಟವಾಗದೇ ತುಂಬಿಕೊಂಡ ಪತ್ರಿಕೆಯ ರಾಶಿಗೆ ಬೆಂಕಿ ಬಿದ್ದಿರಬೇಕು ಎಂದು ಊಹಿಸಿದ್ದರು. ಆದರೆ ಹೊಗೆಯ ವಾಸನೆಯು ಪೇಪರ್ ಸುಟ್ಟಂತೆ ಇರದೇ ಚರ್ಮ ಸುಟ್ಟಂತೆ ಇದ್ದುದ್ದರಿಂದ ಜನ ಗೊಂದಲಕ್ಕೆ ಒಳಗಾದರು ಎಂದು ತಿಳಿದು ಬಂದಿದೆ...

ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ್ದ ಅಗ್ನಿಶಾಮಕ ಸಿಬ್ಬಂದಿ , ಕಚೇರಿಯ ಒಳ ನುಗ್ಗಿ ನೋಡಿದ ದೃಶ್ಯ ಕಂಡು ಬೆಚ್ಚಿ ಬಿದ್ದಿದ್ದಾರೆ... ಕಾರಣವೆನಂದರೆ ಹೊಗೆಯು ಯಾವುದೇ ಬೆಂಕಿಯ ಸ್ವರೂಪದಿಂದ ಬರದೆ, ಸಂಪಾದಕರಾದ ಮಾನ್ಯ “ಬೂಬ” ಅವರ ಚೇಂಬರ್ ನಿಂದ, ಅದರಲ್ಲೂ ಅವರ ಕುರ್ಚಿಯಿಂದ, ಅದರಲ್ಲೂ ಅವರ ಅವರು ಕೂತ ಕುರ್ಚಿಯ ಕೆಳಗಿನಿಂದ  ಬರುತ್ತಿತ್ತಂತೆ. ಮೂರ್ಛೆ ತಪ್ಪಿ ಬಿದ್ದಿದ್ದ ಬೂಬರನ್ನು ಪ್ರಥಮ ಚಿಕಿತ್ಸೆಯ ನಂತರ
ಹೆಚ್ಚಿನ ವಿಚಾರಣೆ ನಡೆಸಲಾಗಿ ಸಂಪಾದಕರು ಫೇಸ್ಬುಕ್ ನಲ್ಲಿದ್ದ ನಮೋ ಅಭಿಮಾನಿಗಳು, ಮುಖ್ಯವಾಗಿ ನಿಲುಮೆಯಲ್ಲಿ ಮೋದಿ ಪರ ಇರುವ ಹವಾವನ್ನು ಮತ್ತು ಸಂಪಾದಕರಿಗೆ ನಮೋ ಅಭಿಮಾನಿಗಳು  ಮಂಗಳಾರತಿ ತೆಗೆದಿದ್ದನ್ನು ನೋಡಿ ತಾಳಲಾಗದೆ , ಹೊಟ್ಟೆ ಉರಿದುಕೊಂಡು, ಆ ಉರಿಯು ಶಾಖವಾಗಿ, ತಳ ಸೇರಿ, ಸುಟ್ಟು ಕರಕಲಾಗಿ, ಕೆಟ್ಟ ಹೊಗೆಯಾಗಿ ಹೊರಗೆ ಬರುತ್ತಿತ್ತು ಎಂದು ತಿಳಿದು ಬಂದಿದೆ.
ತಕ್ಷಣ ಕಾರ್ಯಪ್ರವೃತರಾದ ಅಗ್ನಿಶಾಮಕ ದಳದ ಸಿಬ್ಬಂದಿಗಳು, ಸಂಪಾದಕರ ತಳಕ್ಕೆ ಒಂದಷ್ಟು ನೀರು ಹೊಡೆದು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿದ್ದಾರೆ... 
ಈ ಬಗ್ಗೆ ಬಡಾಯಿ ನ್ಯೂಸ್ ಜೊತೆ ಮಾತನಾಡಿರುವ ಆಸ್ಪತ್ರೆಯ ಹೆಸರಾಂತ ವೈದ್ಯ ಡಾಕ್ಟರ್ ಪಟ್ಟಾಭಿ ವಿಜಯ್ ಮಲ್ಯ ಅವರು , ಈ ತರಹದ ಖಾಯಿಲೆಯನ್ನು ವೈಜ್ಞಾನಿಕ ಭಾಷೆಯಲ್ಲಿ “ ಹೆತ್ಲಾಂಡಿ ಕ್ಯುಲೋಸಿಸ್” ಎಂದು ಕರೆಯುತ್ತಾರೆ ಎಂದು ವಿವರಿಸಿದರು... ಈ ಕಾಯಿಲೆಯು ಇತ್ತೀಚಿಗೆ ಬುದ್ದಿಜೀವಿಗಳಲ್ಲಿ ಸಾಮಾನ್ಯವೆಂದು ಆದರೆ ನಮ್ಮ “ಬೂಬ” ಅವರು ಕಾಯಿಲೆಯ ಗರಿಷ್ಟ ಮಟ್ಟ ತಲುಪಿದರಿಂದ ಇಷ್ಟು ಹೊಗೆ ಬರಲು ಕಾರಣ ಎಂದು ತಿಳಿಸಿದರು. ಈ ಕಾಯಿಲೆಯೇ ತಡೆಗಟ್ಟಲು ಯಾವುದೇ ಔಷದ ಸದ್ಯಕ್ಕೆ ಲಭ್ಯವಿಲ್ಲ ಈ ಸಲದ ಲೋಕಸಭಾ ಚುನಾವಣೆಯ ನಂತರ ಇದು ಸಾಮಾನ್ಯ ಸ್ಥಿತಿಗೆ ಬರಬಹುದು ಎಂದು ತಿಳಿಸಿದ್ದಾರೆ
ಘಟನೆಯಿಂದ ಮಾನ್ಯ “ಬೂಬ” ಅವರ ತಳಕ್ಕೆ ಗಂಭೀರ ಗಾಯಗಳಾಗಿದ್ದು , ತಳವು ತನ್ನ ಆಕಾರವನ್ನೇ ಕಳೆದುಕೊಂಡಿದೆ ಎಂದು ತಿಳಿಸಿದ್ದಾರೆ... ಚಿಕಿತ್ಸೆ ಮುಂದುವರೆದಿದ್ದು ಕೆಲವು ದಿನಗಳ ಮಟ್ಟಿಗೆ ಆಸ್ಪತ್ರೆಯಲ್ಲಿ ಇರಿಸಿಕೊಳ್ಳಲು ನಿರ್ಧರಿಸಲಾಗಿದೆ  ಹಾಗೂ ಕಡ್ಡಾಯವಾಗಿ ಮನುಷ್ಯರು ತಿನ್ನುವ ಪದಾರ್ಥಗಳನ್ನು ಮಾತ್ರ ತಿನ್ನಬೇಕೆಂದು “ಬೂಬ“ ಅವರಿಗೆ ಸೂಚಿಸಲಾಗಿದೆ ಎಂದರು.
ಖಂಡನೆ : ಈ ಘಟನೆಯನ್ನು ಅತ್ಯಂತ ಖೇದಕರ ಎಂದು “ಕರ್ನಾಟಕ ಕಾರ್ಯ ಮರೆತ ಪತ್ರಕರ್ತರ ಒಕ್ಕೂಟ” ಖಂಡಿಸಿದೆ ... ಒಬ್ಬ ಸಂಪಾದಕನ ತಳ ಸುಡುವ ಮಟ್ಟಕ್ಕೆ ಅವರನ್ನ ಉರಿಸುವುದು ಅತ್ಯಂತ ಅಮಾನವೀಯ ಇದು ಮೋದಿ ಅಭಿಮಾನಿಗಳ ದುಷ್ಕೃತ್ಯದ ಪರಮಾವದಿ ಎಂದು ಕಿಡಿಕಾರಿದ್ದಾರೆ , ಈ ಬಗ್ಗೆ ಚರ್ಚಿಸಲು ರಾತ್ರಿ ೯.೩೦ ಕ್ಕೆ ಕಾನಿಷ್ಕ ಬಾರ್ ನಲ್ಲಿ ಸಭೆ ಕರೆಯಲಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಒಕ್ಕೂಟ ತಿಳಿಸಿದೆ.
ಶ್ರದ್ದಾಂಜಲಿ : ವಿಷಯ ತಿಳಿದ ನಮೋ ಬ್ರಿಗೆಡ್ ನ ಕಾರ್ಯಕರ್ತರು ಮಂಗಳೂರಿನಲ್ಲಿ  “ಬೂಬ” ಅವರ ತಳಕ್ಕೆ ಶ್ರದ್ದಾಂಜಲಿ ಕೋರಿದ್ದಾರೆ ಎಂದು ತಿಳಿದು ಬಂದಿದೆ....
ಬಡಾಯಿ ಕ(ತ)ಳಕಳಿ : ಬಡಾಯಿ ನ್ಯೂಸ್ ಇಂತಹ ಹೀನ ಕೃತ್ಯವನ್ನು ಉಗ್ರವಾಗಿ ಖಂಡಿಸುತ್ತದೆ, ಕ್ಯಾತ ಸಂಪಾದಕರ ಕಥೆ ಹೀಗಾದರೆ ಸಣ್ಣ ಪುಟ್ಟ ಪತ್ರಕರ್ತರ ಸ್ಥಿತಿಯ ಬಗ್ಗೆ ಬಡಾಯಿ ನ್ಯೂಸ್ ಕ(ತ)ಳವಳ ವ್ಯಕ್ತಪಡಿಸುತ್ತಿದೆ ... ಸರ್ಕಾರ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಈ ಮೂಲಕ “ಬಡಾಯಿ ನ್ಯೂಸ್” ಆಗ್ರಹಿಸುತ್ತದೆ....
ಇತ್ತೀಚಿಗಷ್ಟೇ “ಬಡಾಯಿ ನ್ಯೂಸ್” ನಲ್ಲಿ ಮಾನ್ಯರ ಸಂದರ್ಶನ ಪ್ರಕಟವಾಗಿದ್ದು ಸ್ಮರಿಸಬಹುದು...   


ವಿಶೇಷ ಸೂಚನೆ : ಇದನ್ನ ಓದಿದ ಮೇಲೆ ಯಾರದಾದರೂ ತಳ ಸುಟ್ಟರೆ ಆಸ್ಪತ್ರೆಯ ಚಿಕಿತ್ಸಾ ವೆಚ್ಚಕ್ಕೆ “ಬಡಾಯಿ ನ್ಯೂಸ್” ಜವಾಬ್ದಾರರಾಗುವುದಿಲ್ಲ.

"ಬೂಸಿ ಬಷೀರ್" ಅವರೊಂದಿಗೆ ಬಡಾಯಿ ನ್ಯೂಸ್

ಕನ್ನಡದ ಹೆಮ್ಮೆಯ ಅಂತರಜಾಲ ಪತ್ರಿಕೆ ಬಡಾಯಿ ನ್ಯೂಸ್ , ಕನ್ನಡದ ಕ್ಯಾತ ಪತ್ರಕರ್ತ ಎಂದು ತಮ್ಮನ್ನು ತಾವು ಕರೆದುಕೊಳ್ಳುವ “ಬೂಸಿ ಬಷೀರ್” ಅವರನ್ನ ಸಂದರ್ಶಿಸಿದೆ ... ಮಾನ್ಯರು ವಾಂತಿ ಭಾರತಿ ಎಂಬ ಯಾರು ಓದದ ಪತ್ರಿಕೆಯ ಎಮ್ಮೆಯ ಸಂಪಾದಕರು ...
ಸಂದರ್ಶನ ನಡೆಸಿಕೊಟ್ಟವರು - ಮುದ್ದೆಶ್...


ಮುದ್ದೆಶ್ : ಕನ್ನಡದ ಎಮ್ಮೆಯ ಪತ್ರಕರ್ತ ಬೂಸಿ ಬಷೀರ್ ಅವರಿಗೆ ಬಡಾಯಿ ನ್ಯೂಸ್ ಗೆ ಸ್ವಾಗತ
ಬೂಸಿ ಬಷೀರ್ : ಧನ್ಯವಾದಗಳು
ಮುದ್ದೆಶ್ : ಮೊದಲು ನಿಮಗೆ ಬಂದಿರುವ “ಮಂಕೆಶ್” ಪ್ರಶಸ್ತಿಗೆ ಅಭಿನಂದನೆ ಕೋರುತ್ತೇನೆ ... ಪ್ರಶಸ್ತಿ ಪಡೆದ ನಂತರ ಹೇಗೆ ಅನ್ನಿಸ್ತ ಇದೆ ?
ಬೂಬ : ಧನ್ಯವಾದಗಳು , ಪ್ರಶಸ್ತಿ ಕೊಂಚ ದುಬಾರಿ ಆಗಿತ್ತು ಅನ್ನೋದು ಬಿಟ್ಟರೆ, ಉಳಿದಂತೆ ತುಂಬಾ ಸಂತೋಷವಾಗಿದೆ ..
ಮುದ್ದೆಶ್ : ನನಗೆ ಅರ್ಥ ಆಗಲಿಲ್ಲ ..
ಬೂಬ : ಇರಲಿ ಬಿಡಿ... ಅದನ್ನು ಇನ್ನೊಮ್ಮೆ ಮಾತಾಡೋಣ .
ಮುದ್ದೆಶ್ : ಸಾರ್ ತಾವು ಹಿಂದೂ ಸಂಘಟನೆಗಳ ಬಗ್ಗೆ ಮತ್ತು ಮೋದಿ ಬಗ್ಗೆ ತುಂಬಾ ಪೂರ್ವಗ್ರಹವಾಗಿ ಬರೆಯುತ್ತಿರಿ ಅನ್ನೋ ಅಪಾದನೆ ಇದೆ , ಇದಕ್ಕೆ ಎನಂತಿರಿ ?
ಬೂಬ : ನೋಡಿ ಹಿಂದೂ ಸಂಘಟನೆಗಳು ಈ ದೇಶದಲ್ಲಿ ಮುಸ್ಲಿಂರನ್ನ ನೆಮ್ಮದಿ ಆಗಿ ಬದುಕಲು ಬಿಡುತ್ತಿಲ್ಲ... ನೋಡಿ ಹಿಂದೂಗಳು ದೀಪಾವಳಿ ದಿನ ಆಟಂ ಬಾಂಬ್ ಹೊಡೆಯಬಹುದು ಆದರೆ ಮುಸ್ಲಿಮರು ಕೊಂಚ ಅದಕ್ಕಿಂತ ದೊಡ್ಡ ಬಾಂಬ್ ಹಾಕಿದ ಕೂಡಲೇ ಉಗ್ರಗಾಮಿ ಅಂತ ಕರೆಯುತ್ತಾರೆ ... ಇದು ತಪ್ಪಲ್ಲವೇ ?
ಮುದ್ದೇಶ : ಯಾವುದೇ ಬಾಂಬ್ ಸ್ಪೋಟ ಆದ ತಕ್ಷಣ , ಹಿಂದೂ ಸಂಘಟನೆಗಳ ಹೆಸರು ಹೇಳುತ್ತಿರಲ್ಲ ಯಾಕೆ ? ಮುಸ್ಲಿಂ ಸಂಘಟನೆಗಳು ಮಾಡಿಲ್ಲ ಅಂತ ನಿಮಗೆ ಅಷ್ಟು ಖಚಿತತೆ ಹೇಗೆ ? ಯಾವ ತನಿಖಾ ಸಂಸ್ಥೆ ನಿಮ್ಮನ್ನು ತನಿಖೆಗೆ ಒಳಪಡಿಸಿಲ್ಲವೇ?
ಬೂಬ : ನೋಡಿ ಮೊತ್ತ ಮೊದಲಿಗೆ ನಾನು ಏನು ಬರೆದರೂ ಅದನ್ನು ಗಂಭೀರವಾಗಿ ತೆಗೆದುಕೊಳ್ಳುವವರು ತುಂಬಾ ಕಡಿಮೆ , ಹಾಗಾಗಿ ತನಿಖಾ ಸಂಸ್ಥೆಗಳ ತನಕ ಹೋಗಲ್ಲ. ... ಮತ್ತು ನಮಗೆ ಸಹಾಯ ಮಾಡುವವರ ಮೆಚ್ಚಿಸೋಕ್ಕೆ ಇದೆಲ್ಲ ಮಾಡಲೇ ಬೇಕಾಗುತ್ತದೆ ...
ಮುದ್ದೇಶ : ಹಿಂದೂಗಳು ಬಂಧನ ಆದಾಗ ನೀವು ತೋರಿಸುವ ಉತ್ಸಾಹ , ಮುಸ್ಲಿಮರು ಬಂಧನ ಆಗುವಾಗ ತೋರಿಸೊಲ್ಲ ಯಾಕೆ ?
ಬೂಬ : ನೋಡಿ ನಾನೊಬ್ಬ ಸೆಕ್ಯುಲರ್ ಬುದ್ದಿಜೀವಿ ... ಬುದ್ದಿಜೀವಿಗಳು ಹೀಗೆ ಇರ್ಬೇಕು ಅಂತ ಒಂದು ಪದ್ಧತಿ ಇದೆ .ಏನೋ ಮುಸ್ಲಿಂ ಯುವಕರು ಸರಿಯಾದ ಮಾರ್ಗದರ್ಶನ ಇಲ್ಲದೆ ಹೀಗೆ ಮಾಡಿರುತ್ತಾರೆ... ಅಷ್ಟಕ್ಕೂ ಇದೆಲ್ಲ ಸಣ್ಣ ಪುಟ್ಟ ವಿಷಯಗಳ ಬಗ್ಗೆ ತಲೆ ಕೆಡಿಸಿಕೊಳ್ಳಬಾರದು .
ಮುದ್ದೇಶ : ಮೋದಿಯ ಬಗ್ಗೆ ಹೇಳಿ
ಬೂಬ : ಮೋದಿ ಒಬ್ಬ ನರಹಂತಕ , ೨೦೦೨ ಕೋಮುಗಲಭೆಗೆ ಮೋದಿಯೇ ಕಾರಣ.
ಮುದ್ದೇಶ : ನೀವು ಏನೇ ಹೇಳಿದ್ರು , ಸುಪ್ರಿಂ ಕೋರ್ಟ್ ರಚಿಸಿದ್ದ ತನಿಖಾ ಸಂಸ್ಥೆ ಮೋದಿ ನಿರಪರಾದಿ ಅಂತ ಹೇಳ್ತಾ ಇದೆ... ಅಷ್ಟಕ್ಕೂ ಮೋದಿಗಿಂತ ಮೊದಲು ಕೂಡ ಗುಜರಾತಲ್ಲಿ ಕೋಮು ಗಲಭೆಗಳು ನಡೆದಿತ್ತು ಅದನ್ನ ಯಾಕೆ ನೀವು ಪ್ರಸ್ತಾಪಿಸುವುದಿಲ್ಲ....
ಬೂಬ : ಸುಪ್ರೀಂ ಕೋರ್ಟ್ ಏನು ಹೇಳಿದೆ ಅಂತ ನನಗೆ ಮಾಹಿತಿ ಇಲ್ಲ ...  ಕೋಮುಗಲಭೆಗೆ ಕಾರಣ ಆದ ಎಲ್ಲರನ್ನ ವಿರೋದಿಸುತ್ತೇನೆ ... ಆದ್ರೆ ಅವರೆಲ್ಲ ಯಾರು ಅಂತ ನನಗೆ ಸರಿಯಾದ ಮಾಹಿತಿ ಇಲ್ಲ.
ಮುದ್ದೇಶ : ಗುಜರಾತ್ ಅಭಿವೃದ್ದಿ ಬಗ್ಗೆ ಹೇಳಿ ?
ಬೂಬ  : ಗುಜರಾತ್ ನಲ್ಲಿ ಆ ಸಮಸ್ಯೆ .. ಈ ಸಮಸ್ಯೆ ಇದೆ, (ನೂರಾರು ವೆಬ್ಸೈಟ್ ಲಿಂಕ್ ಗಳನ್ನ ತೋರಿಸಿ )... ಈಗ ಹೇಳಿ ಅಭಿವೃದ್ದಿ ಎಲ್ಲಿದೆ..
ಮುದ್ದೇಶ : ಆದರೆ ಗುಜರಾತ್ ಸಾದನೆ ಬಗ್ಗೆ ಇದಕ್ಕಿಂತ ಜಾಸ್ತಿ ಲಿಂಕ್ ಗಳು ಸಿಗ್ತಾವೆ ಅಲ್ಲವೇ ? ಅಷ್ಟಕ್ಕೂ ಇಂತಹ ಸಮಸ್ಯೆಗಳು ಎಲ್ಲ ರಾಜ್ಯದಲ್ಲೂ ಸಾಮಾನ್ಯ ತಾನೇ ?
ಬೂಬ : ನೋಡಿ ನಾನು ಇಡಿ ಗುಜರಾತ್ ನ ಗೂಗಲ್ ಮ್ಯಾಪ್ ಲ್ಲಿ ನೋಡಿದ್ದೀನಿ , ನನಗೆ ಅಂತಹ ಅಭಿವೃದ್ದಿ ಕಾಣಿಸಿಲ್ಲ.
ಮುದ್ದೇಶ : ನಿಮಗೆ ಕಾಣಿಸಿಲ್ಲ ಅಂದರೆ ಅಭಿವೃದ್ದಿ ಆಗಿಲ್ಲ ಅಂತ ಅರ್ಥವೇ ?
ಬೂಬ : ಹೌದು
ಮುದ್ದೇಶ : ಹೋಗಲಿ ಕೊಡೊ ಲಿಂಕ್ ಗಳು ನಿಮ್ಮ ಪತ್ರಿಕೆದು ಆಗಿರದೆ , ಬೇರೆ ಯಾವುದು ಪತ್ರಿಕೆದು ಆಗಿರುತ್ತೆ ಯಾಕೆ ?
ಬೂಬ : (ಕಣ್ಣಂಚಿನಲ್ಲಿ ನೀರು ತುಂಬಿಕೊಂಡು) ನಮ್ಮ ಪತ್ರಿಕೆಯನ್ನ ಯಾರು ನಂಬಲ್ಲ... ಯಾವುದೋ ಕಳಪೆ ಹಾಸ್ಯ ಓದಿದ ಹಾಗೆ ಹರಳೆಣ್ಣೆ ಮುಖ ಮಾಡಿಕೊಂಡು ಎದ್ದು ಹೋಗ್ತಾರೆ ಅದಕ್ಕಾಗಿ ಹೀಗೆ ...
ಮುದ್ದೇಶ : ಹೋಗಲಿ ಮುಂಬೈ ಅತ್ಯಾಚಾರ ಪ್ರಕರಣ ಬಗ್ಗೆ ಹೇಳಿ
ಬೂಬ : ಇದರಲ್ಲಿ ಭಜರಂಗ ದಳದ ಯುವಕರ ಕೈವಾಡ ಇದೆ , ಅವರೇ ಇಂಥಹ ಕೆಲಸ ಮಾಡಲು ಸಾದ್ಯ
ಮುದ್ದೇಶ : ಆದರೆ ಅಲ್ಲಿ ಸೆರೆಯದವರಲ್ಲಿ ನಾಲ್ವರು ಮುಸ್ಲಿಮರು ಮತ್ತು ಒಬ್ಬ ಹಿಂದೂ ಹುಡುಗ ಅಲ್ಲವೇ ..
ಬೂಬ : ಹೌದಾ ... (ಒಂದು ನಿಮಿಷ ಮೌನ )... ನೋಡಿ ಆ ಹಿಂದೂ ಯುವಕನೇ ಈ ನಾಲ್ಕು ಅಮಾಯಕ ಮುಸಿಮರನ್ನ ಸಿಲುಕಿಸಿದ್ದಾನೆ...  ಅವ್ನು RSS ಏಜೆಂಟ್ ಅಂತ ಸಾಭೀತು ಮಾಡೋಕ್ಕೆ ಸುವೀನ್ ನೂರಿಂಜೆಗೆ ಹೇಳ್ತಿನಿ ..
ಮುದ್ದೇಶ : ಹೌದು ಇತ್ತೀಚಿಗೆ “ಓಲುಮೆ” ಯಲ್ಲಿ  ಕಾಣಿಸಿಕೊಂಡಿದ್ದಿರಿ ಏನು ವಿಶೇಷ
ಬೂಬ : ಏನ್ ಮಾಡೋಣ , ಮೊದಲೇ ಜನ ನನ್ನ ಪತ್ರಿಕೆ ಓದಲ್ಲ... ಮೊದಲು ಫೇಸ್ಬುಕ್ ನನ್ನ ವಾಲ್ ಲ್ಲಿ ಚರ್ಚೆ ಮಾಡಿಸ್ತ ಇದ್ದೆ... ಈಗ ಅಲ್ಲೂ ಬರಲ್ಲ ... ಇನ್ನು ನಿಲುಮೆಗೆ ಬಂದಾದ್ರು ನಾನು ಬದುಕಿದ್ದೇನೆ ಅಂತ ತೋರಿಸಬೇಕು ಇಲ್ಲ ಅಂದ್ರೆ ಮುಂದಿನ ತಿಂಗಳು “ಅಲ್ಲಿಂದ” ಪೇಮೆಂಟ್ ಬರಲ್ಲ ..
ಮುದ್ದೇಶ : ನೀವು ಸರಿಯಾದ ಚರ್ಚೆಗೆ ಸಿಗಲ್ಲ... ಓಡಿ ಹೋಗ್ತಿರ ಅಂತ ಆಪಾದನೆ ಇದೆ...
ಬೂಬ : ಯಾರೋ ಮನೆ ಕಾಂಪೌಂಡ್ ಗೆ ಉಚ್ಚೆ ಹುಯ್ತಾ ನಿಂತುಕೊಂಡ್ರೆ ಬಿಡ್ತಾರ ? ಓಡಿ ಹೋಗುತ್ತಾ ಹುಯ್ಯಬೇಕು ... ಮೊದಲಿನಿಂದನು ಓಡುತ್ತ ಉಚ್ಚೆ ಹುಯ್ದೆ ಅಭ್ಯಾಸ ..
ಮುದ್ದೇಶ : ಕಾಲು ಮೇಲೆಲ್ಲಾ ಆಗಲ್ವೇ ? ಅಸಹ್ಯ ...
ಬೂಬ : ಅಭ್ಯಾಸ ಆಗಿದೆ, ಮೊದಮೊದಲು ಕಸಿವಿಸಿ ಆಗ್ತಾ ಇತ್ತು ... ಈಗ ಅಂತದ್ದು ಏನಿಲ್ಲ
ಮುದ್ದೇಶ : ಕೊನೆಯದಾಗಿ ಮುಸ್ಲಿಂ ಮತ್ತು ದಲಿತರ ಬಗ್ಗೆ ಹೇಳಿ
ಬೂಬ : ನೋಡಿ ಮುಸ್ಲಿಮರು ಮತ್ತು ದಲಿತರು ಒಂದೇ ಹೊಕ್ಕಳಬಳ್ಳಿಯ ಮಕ್ಕಳ ಹಾಗೆ
ಮುದ್ದೇಶ : ಹೇಗೆ ವಿವರಿಸಿ ..
ಬೂಬ : ವಿವರಣೆ ಕೇಳಬೇಡಿ ಧಮ್ಮಯ್ಯ ...
ಮುದ್ದೇಶ : ಹೋಗಲಿ ಮುಂದಿನ ಯೋಜನೆ ಹೇಳಿ
ಬೂಬ : ಯೋಜನೆ ಏನು ಮಾಡೋದು ಅಂತಾನೆ ಗೊತ್ತಾಗ್ತಾ ಇಲ್ಲ ... ಮೊದಲು ಕಾಂಗ್ರೆಸ್ ನ ಹೊಗಳಿ ಬರಿತಿವಿ ಅಂತ ೪ ಜನ ಕಾಂಗ್ರೆಸ್ಸಿಗರು ಪೇಪರ್ ತಗೊಳ್ಲೋರು , ಈಗ ವಿವಯ ಕರ್ನಾಟಕ ಆ ಕೆಲಸ ನಮಗಿಂತ ಚೆನ್ನಾಗಿ ಮಾಡುತ್ತಿರೋದು ಇಂದ ನಮ್ಮನ್ನ ಮೂಸೋರು ಇಲ್ಲ ...
ಮುದ್ದೇಶ : ಹಾಗಾದರೆ ಮುಂದೆ ?
ಬೂಬ : ಇದ್ದೆ ಇದಿಯಲ್ಲ ಗುಜರಿ ಅಂಗಡಿ , ಹಳೇ ಟೊಪ್ಪಿ ಹಾಕ್ಕೊಂಡು ಕೂರೋದು ಅಷ್ಟೇ
ಮುದ್ದೇಶ : ಧನ್ಯವಾದ ಬೂಸಿ ಬಷೀರ್ ರೆ ... ನಿಮ್ಮೊಂದಿನ ಮಾತುಕತೆಗೆ
ಬೂಬ : ಆಯ್ತು ಆಯ್ತು ,,, ಸಿದ್ದರಾಮಯ್ಯ ಎಲ್ಲಾದರು ಸಿಕ್ಕಿದ್ರೆ ಸ್ವಲ್ಪ ನನ್ನ ಬಗ್ಗೆ ಹೇಳಿ ಪ್ಲೀಸ್ ...
ಮುದ್ದೇಶ : ಓಕೆ ಸರ್ 

 ವಿಶೇಷ ಸೂಚನೆ : ಈ ಸಂದರ್ಶನವು ಯಾವುದೇ ವ್ಯಕ್ತಿಗೆ ಅಥವಾ ಪತ್ರಿಕೆಗೆ ಸಂಭಂದ ಪಟ್ಟಿರುವುದಿಲ್ಲ... ಹಾಗೇನಾದರು ಸಂಭಂದ ಕಂಡು ಬಂದರೆ ಅದನ್ನು ಕನ್ನಡ ಪತ್ರಿಕೋದ್ಯಮದ ದುರಂತ ಎಂದು ಪರಿಗಣಿಸತಕ್ಕದ್ದು



Pheku ಎಂಬ Fake

ಮೋದಿಯವರನ್ನ ಬೆತ್ತಲು ಮಾಡಲು ಹೊರಟ ಫೆಕ್ಹು ವೆಬ್ಸೈಟ್ .. ಎರಡೇ ದಿನದಲ್ಲಿ ತಾನೇ ಬೆತ್ತಲಾಗಿದೆ... ಆತ್ಮಕ್ಕೆ ಶಾಂತಿ ದೊರಕಲಿ

ಬುದ್ದಿಜೀವಿಗಳು ಮತ್ತು ನಾವುಗಳು

ಭಾರತದಲ್ಲಿ ಹಿಂದೂ ಕಂದಾಚಾರಗಳ ಬಗ್ಗೆ ಅನಿಷ್ಟ ಪದ್ದತಿಗಳ ಬಗ್ಗೆ ಯಾರು ಬೇಕಾದರೂ ಚರ್ಚೆ ಮಾಡಬಹುದು, ಈ ವಿಷಯದಲ್ಲಿ ಭಾರತದ ಮುಸ್ಲಿಮರು ಕೂಡ ಇದರ ಬಗ್ಗೆ ಟೀಕೆ ಮಾಡಿದರೆ ತಪ್ಪಿಲ್ಲ .... ಅವರಿಗೆ ಆ ಹಕ್ಕಿದೆ.

ಆದರೆ ಮುಸ್ಲಿಮರ ಕಂದಾಚಾರಗಳ ಬಗ್ಗೆ ಮಾತಾಡುವ ಹಕ್ಕು ಯಾರಿಗೂ ಇಲ್ಲ .... ಸ್ವಭಾವತ್ ಮುಸ್ಲಿಮರು ಅದರ ಬಗ್ಗೆ ಮಾತಾಡುವುದಿಲ್ಲ.... ಹಿಂದೂಗಳು ಇದರ ಬಗ್ಗೆ ಮಾತಾಡಿದರೆ ಕೋಮುವಾದಿಗಳು ಅನ್ನಿಸಿಕೊಳ್ಳಬೇಕಾಗುತ್ತದೆ ಮತ್ತು ಇದರಿಂದ ಕೋಮು ಗಲಭೆಯಂತಹ ಅಹಿತಕರ ಘಟನೆ ಉಂಟಾದರೆ ಹಿಂದುಗಳೇ ಅದರ ಜವಾಬ್ದಾರಿ ಹೊರಬೇಕಾಗುತ್ತದೆ ...
(ಸಾಕ್ಷಾತ್ ಒಬ್ಬ ಬುದ್ದಿ ಜೀವಿ ಹೇಳಿದ ಮಾತಿದು... ಮತ್ತು ಈ ಮಾತನ್ನು , "ಬುದ್ದಿಜೀವಿ ಆಗುವುದು ಹೇಗೆ ....?" ಪುಸ್ತಕದ ಪರಿಷ್ಕ್ರತ ಮುದ್ರಣದಲ್ಲಿ ಸೇರಿಸಲಾಗುತ್ತದೆ )

ಬಡಾಯಿ ನ್ಯೂಸ್ : ಬಿ ಎಂ ಬಷೀರ್ ಪ್ರಶಸ್ತಿ

ಕಪೋಲ ಕಲ್ಪಿತ, ಸತ್ಯದ ತಲೆಯ ಮೇಲೆ ಹೊಡೆಯುವಂತಹ ಸುಳ್ಳು ವರದಿಗಳಿಗಾಗಿ ನೀಡಲಾಗುವ ೨೦೧೨-೧೩ ನೇ ಸಾಲಿನ ಬಿ ಎಂ ಬಷೀರ್ ಪ್ರಶಸ್ತಿಯನ್ನು ಶ್ರೀಯುತ ನವೀನ ಸೂರಿಂಜೆ ಅವರಿಗೆ ನೀಡಲಾಗಿದೆ. ಭಟ್ಕಳದ ಅಬ್ದುಲ್ ನಾಸಿರ್ ಮದನಿ ಪ್ರತಿಷ್ಠಾನ ಕೊಡ ಮಾಡುವ ಈ ಪ್ರತಿಷ್ಟಿತ ಪ್ರಶಸ್ತಿಯನ್ನು ಜನಾರ್ಧನ ಪೂಜಾರಿಯವರು ತಮ್ಮ ಅಮೃತ ಹಸ್ತದಿಂದ ನೀಡಲಿದ್ದಾರೆ ಎಂದು ಪ್ರತಿಷ್ಟಾನದ ಸಂಚಾಲಕರು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದ್ದಾರೆ. ಪ್ರಶಸ್ತಿ ವಿಜೇತ ಸೂರಿಂಜೆಯವರು ಸುಳ್ಳು ವರದಿಯಲ್ಲಿ ಬಹಳ ನೈಪುಣ್ಯತೆ ಹೊಂದಿದ್ದು... ಅದರಲ್ಲಿಯೂ ಮಣಿಪಾಲ್ ಅತ್ಯಾಚಾರ ಪ್ರಕರಣದಲ್ಲಿ ಭಜರಂಗ ದಳಕ್ಕೆ ಕೆಟ್ಟ ಹೆಸರು ತರಲು ಮಾಡಿದ ಪ್ರಯತ್ನ ಗಮನಾರ್ಹವಾಗಿತ್ತು . ಭಜರಂಗದಳದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಯಾರೋ ಕಾರ್ಯಕರ್ತರ ಮುಖ ಮಾರ್ಕ್ ಮಾಡಿ , ಇದು ಅತ್ಯಾಚಾರಿಯ ಅಣ್ಣ ಎಂದು ಇಡಿ ಕರ್ನಾಟಕವನ್ನು ಒಂದು ದಿನದ ಮಟ್ಟಿಗೆ ಮಂಗ ಮಾಡಿದ್ದು ವಿಶೇಷವಾದ ಅವರ ಪ್ರತಿಭೆಗೆ ಸಾಕ್ಷಿಯಾಗಿತ್ತು. ಅಲ್ಲದೆ ಅದು ಸುಳ್ಳು ಅಂತ ಗೊತ್ತಾದ ಮೇಲು ಯಾವುದೇ ತರಹ ಧೈರ್ಯಗುಂದದೆ, ಮಾನ ಮರ್ಯಾದೆಯನ್ನು ತೋರ್ಪಡಿಸದೆ ಪತ್ರಿಕಾ ದಿನದ ಶುಭಾಶಯ ಕೋರುವ ಮೂಲಕ ತಮ್ಮ ಪತ್ರಿಕಾ ಭಂಡತನವನ್ನು ಪ್ರದರ್ಶಿಸಿದ್ದಾರೆ. ಈ ಎಲ್ಲ ವಿಷಯವನ್ನು ಗಮನಿಸಿದ ಮದನಿ ಪ್ರತಿಷ್ಠಾನವು ಅವರಿಗೆ ಬಿ ಎಂ ಬಷೀರ್ ಪ್ರಶಸ್ತಿಯನ್ನು ನೀಡಿದೆ ಎಂದು ಸಂಚಾಲಕರು ತಿಳಿಸಿದರು.
ಈ ಬಗ್ಗೆ ಮಾತಾಡಿದ ಸೂರಿಂಜೆ ಯವರು ಬಷೀರ್ ಹೆಸರಿನ ಪ್ರಶಸ್ತಿ ತನಗೆ ಸಿಕ್ಕಿದ್ದು ತುಂಬಾ ಸಂತೋಷವಾಗಿದೆ ಎಂದು ಬಷೀರ್ ಅವರು ಹೇಳಿದಷ್ಟು ಸುಳ್ಳು ಮತ್ತು ಹಚ್ಚಿದ ಬೆಂಕಿಯ ಅರ್ಧದಷ್ಟು ತಾನು ಮಾಡಿದರು ತನ್ನ ಬಾಳು ಸಾರ್ಥಕ ಎಂದು ಹೇಳಿಕೊಂಡರು.
ಈ ಬಗ್ಗೆ ತಮ್ಮ ಸಂತಸ ಹಂಚಿಕೊಂಡ ಬಷೀರ್ ರು, ನವೀನರ ವಿಶೇಷವಾದ ಪ್ರತಿಭೆ ಹೊಗಳುತ್ತಾ ಮುಂದೊಂದು ದಿನ ಪರ್ವೇಜ್ ಮುಷರಫ್ ರ ಮಾವನ ಮಗನೆ ಪ್ರಮೋದ್ ಮುತಾಲಿಕ್ ಎಂದು ಸೂರಿಂಜೆ ನಿರೂಪಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.
ವರದಿಗಾರ : ಮುದ್ದೆಶ್, ಬಡಾಯಿ  ನ್ಯೂಸ್
 

ಮಣಿಪಾಲ ಅತ್ಯಾಚಾರ ಪ್ರಕರಣ ಮತ್ತು ಕೆಲವು ಸಂದೇಹಗಳು

ಲೇಖಕರು : ಶ್ರೀಕಾಂತ್ ಶೆಟ್ಟಿ 

ಮಣಿಪಾಲದ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ.ಇದರೊಂದಿಗೆ ಕೆಲವು ಗೋಜಲು ಗೋಜಲು ನಾಟಕೀಯ ಘಟನೆಗಳು ಒಂದಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿದೆ.ಮೊದಲು ಎಲ್ಲರ ಬೆರಳು ಯೂನಿವರ್ಸಿಟಿಯ ಕಡೆಗೆ ಬೊಟ್ಟು ಮಾಡಿದ್ದರೆ ಈಗ ಅದು ಕಾಂಗ್ರೇಸ್ ಕಡೆಗೆ ತಿರುಗಿದೆ.ಈ ಕೆಳಗಿನ ಕೆಲವು ಪ್ರಶ್ನೆಗಳು ನಿಮ್ಮನ್ನೂ ಕಾಡಬಹುದು
೧ ಪ್ರಕರಣ ದಾಖಲಾಗದಂತೆ ಯುವತಿಯ ಮೇಲೆ ಒತ್ತಡ ಹೇರಿದವರು ಯಾರು?
೨ ಯುವತಿಯ ಮೇಲೆ ಅತ್ಯಾಚಾರವಾಗಿಲ್ಲ ಕೇವಲ ಅಪಹರಿಸಿದ್ದು ಮಾತ್ರ ಎಂದು ರಿಪೋರ್ಟ್ ತಿರುಚುವ ಯತ್ನ ಯಾಕೆ ನಡೆಯಿತು?
೩ ಅತ್ಯಾಚಾರ ನಡೆದ ಮರುದಿನವೇ ಈ ಕಾಮುಕರ ಸುಳಿವು ಪೋಲೀಸರಿಗೆ ತಿಳಿದಿತ್ತು ಎನ್ನಲಾಗಿದೆ.ಮತ್ತೆ ಏಕೆ ಬಂದಿಸಲಿಲ್ಲ?
ಪ್ರಮುಖ ಆರೋಪಿ ಯೋಗಿಶ್ ಹಾರ್ಡ್ ಕೋರ್ ಕಾಂಗ್ರೇಸಿಗ ಎನ್ನುವುದು ಇಡೀ ಊರಿಗೆ ಗೊತ್ತಿರುವ ವಿಚಾರ ಮತ್ತೆ ಬಜರಂಗದಳದ ಹೆಸರು ತೇಲಿ ಬಿಟ್ಟವರು ಯಾರು?
ಆರೋಪಿಗಳಲ್ಲಿ ಒಬ್ಬನಾದ ಹರಿಪ್ರಸಾದ್ ಐದು ವರ್ಷದ ಹಿಂದೆ ಬಜರಂಗದಳದಲ್ಲಿದ್ದು ಯೋಗೀಶನ ಸಹವಾಸದಿಂದ ಕಾಂಗ್ರೇಸಿಗೆ ಸೇರಿದ್ದ ಮೊನ್ನೆಯವರೆಗೆ ಶಾಸಕರಿಗೆ ಶುಭಕೋರಿ ಹಾಕಲಾಗಿದ್ದ ಬ್ಯಾನರ್ ಒಂದರಲ್ಲಿ ಇವರಿಬ್ಬರ ಹೆಸರು ರರಾಜಿಸುತಿತ್ತು.ಘಟನೆ ನಡೆದ ಎರಡೇ ದಿನದಲ್ಲಿ ಆ ಬ್ಯಾನರ್ ಕಾಣೆಯಾಯಿತು.ಕಾರಣ?
ಯೋಗೀಶ್ ನೇರವಾಗಿ ಪೋಲೀಸರಿಗೆ ಶರಣಾಗದೆ ಪ್ರಮೋದ್ ಮದ್ವರಾಜ್ ಮೊರೆಹೋಗಿದ್ದು ಯಾತಕ್ಕಾಗಿ? ಆತ ಬಜರಂಗದಳದವನಾದರೆ ಪ್ರಮೋದ್ ಬಜರಂಗದಳದ ಸಂಚಲಕನೇ?
ಪೋಲೀಸರು ಬಿಡಿಸಿದ ಓತಿಕ್ಯಾತದ ಮುಸುಡಿನ ರೇಖಾಚಿತ್ರದ ಕಥೆ ಏನಯಿತು? ಇದೆಲ್ಲ ಜನರನ್ನು ದಿಕ್ಕುತಪ್ಪಿಸುವ ಯತ್ನವಲ್ಲವೇ?
ಒಬ್ಬರೌಡಿ ಶೀಟರ್ ಪೋಲಿಸರಿಗೆ ವಿಷಕುಡಿದು ಫೋನ್ ಮಾಡಿದಉದಾಹರಣೆ ಇದೆಯೇ? ಇದ್ದರೂ ಆತ ತನ್ನೊಂದಿಗೆ ಇದ್ದವರ ಮಾಹಿತಿಯನ್ನು ಹೇಳಿ ಸಾಯುವಷ್ಟು ಮೂರ್ಖನೇ?
ಇಡೀ ಊರಲ್ಲಿ ಸಾಲುಸಾಲು ಪ್ರತಿಭಟನೆ ತನಿಖೆಗಳು ನಡೆಯುತಿದ್ದರೂ ಅತ್ಯಾಚಾರಿಗಳು ರಾಜಾರೋಷವಾಗಿ ಓಡಾಡಿಕೊಂಡಿರಲು ಸಾಧ್ಯವೇ ?
ಓಡಾಡುತಿದ್ದರೂ ಅದು ಯಾರ ಧೈರ್ಯದಲ್ಲಿ?
ಇನ್ನೊಬ್ಬ ಆರೋಪಿ ಆನಂದ ಗೋವಾಗೆ ಪರಾರಿಯಾಗಿದ್ದವ ಬಡಗುಬೆಟ್ಟಿನಲ್ಲಿ ಪತ್ತೆಯಾಗಿದ್ದು ಹೇಗೆ? ಅದುಕೂಡ ಹಗ್ಗಹಾಕಿದ ಸ್ಥಿತಿಯಲ್ಲಿ?

ಮೂರನೇ ಆರೋಪಿ ಆನಂದನ ಕಥೆ ಬಾರಿ ಕಾಮೇಡಿ ಇದೆ.. ಆತ ಮನೆಯಲ್ಲಿ ಹಗ್ಗ ಹಾಕಿಕೊಂಡನಂತೆ... ಹಗ್ಗ ತುಂಡಾಗಿ ಬಿದ್ದನಂತೆ... ಮನೆಯವರು ಹೊರಗೆ ಓಡಿಸಿದರಂತೆ..... ಗದ್ದೆಯ ಪುಣಿಯಲ್ಲಿ ಓಡುವಾಗ ಊರಿನವರು ಹಿಡಿದರಂತೆ.. . ತೋಟದಲ್ಲಿ ಕಟ್ಟಿ ಹಾಕಿದ ನಾಯಿ ಹಗ್ಗ ತುಂಡು ಮಾಡಿಕೊಂಡು ಓಡಿದಾಗ ನಾವು ಹಿಂಬಾಲಿಸಿ ಹಗ್ಗ ತುಳಿದು ಹಿಡಿಯುತ್ತೇವಲ್ಲ ಹಾಗಿರಬೇಕು...
ಈಗ ನಾವುಈ ಆರೋಪಿಗಳನ್ನು ಹಿಡಿದುಕೊಟ್ಟಿದ್ದಾನೆ ಎನ್ನಲಾದ ಸುಖೇಶನ ಕಡೆಗೆ ಸ್ವಲ್ಪ ಗಮನಿಸಬೇಕು.ಈತ ಉದಯವಾಣಿಗೆ ನೀಡಿದ ಹೇಳಿಕೆಯಲ್ಲಿ ನಮ್ಮದೇ ಸರಕಾರ ಇದೆ ನಾನು ಎಲ್ಲಾ ಮಾತನಾಡಿದ್ದೇನೆ ಜಾಮೀನು ಮಾಡಿ ಕೊಡೋಣ ಸೆರೆಂಡರ್ ಆಗು ಎಂದಿದ್ದಾನೆ.ಮೊದಲೇ ರೌಡಿಶೀಟರಾಗಿರುವ ಯೋಗೀಶನಿಗೆ ಇಂಥ ಇನ್ನೆಷ್ಟು ಪ್ರಕರಣಗಳಲ್ಲಿ ಜಾಮೀನು ಮಾಡಿಕೊಡಲಾಗಿದೆ?
ತಮ್ಮ ಕಾರ್ಯಕರ್ತ ಈ ಪ್ರಕರಣ ಬೇಧಿಸಲು ಸಹಕರಿಸಿದ ಎಂದು ತಮ್ಮ ಬೆನ್ನನ್ನು ತಾವೇ ತಟ್ಟಿಕೊಂಡಿರುವ ಕಾಂಗ್ರೇಸಿಗರು ಈ ಪ್ರಕರಣ ಆಗಿರುವುದೂ ನಿಮ್ಮದೇ ಕಾರ್ಯಕರ್ತನಿಂದ ಎನ್ನುವುದನ್ನು ಯಾಕೆ ಮರೆತಿದ್ದೀರಿ ?
ಸುಖೇಶನ ಬಗ್ಗೆ ಹೆಮ್ಮೆ ಇರುವ ನಿಮಗೆ ಯೋಗೀಶ ಆನಂದ ಹರೀಶರ ಬಗ್ಗೆ ವಾಕರಿಕೆ ಬರುತ್ತಿಲ್ಲವೇ..?ಆಹುಡುಗಿಯ ತಲೆಗೆ ಕಲ್ಲುಹೊತ್ತು ಹಾಕೋಣ ಎಂದು ಇತರರಿಗೆ ಹುರಿದುಂಬಿಸಿದ ಯೋಗಿಶ ನಿಮ್ಮಕಾರ್ಯಕರ್ತ ಅನ್ನಲು ನಾಚಿಗೆಯಾಗುವುದಿಲ್ಲವೇ?

ಇನ್ನು ಕಾಂಗ್ರೇಸಿಗರ ಹೇಲನ್ನು ಪರಮ ಪ್ರಸಾದ ಎಂದು ತಿಂದು ತೇಗಿ ಜೀವನವನ್ನು ಪಾವನ ಮಾಡಿಕೊಂಡಿರುವ ಕರಾವಳಿಯ ಒಬ್ಬ ಶೋಕಿವಾಲ ಪತ್ರಕರ್ತನೊಬ್ಬ ಗೋಳಿಯಂಗಡಿಯ ಬಜರಂಗದಳದ ಕಾರ್ಯಕರ್ತ ಗಣೇಶ್ ಕುಮರ್ ಎಂಬವರ ಫೋಟೋಗೆ ಮಾರ್ಕ್ ಮಾಡಿ ಇವ ಯೋಗೀಶನ ಅಣ್ಣ ಎಂದು ಪ್ರಚಾರ ಮಾಡಿ ಈಗ ಬಾಲಸುಟ್ಟ ಮಂಗನ ರೀತಿ ಮುಖಮರೆಸಿಕೊಂಡಿದ್ದಾನೆ.ಅವನ ಬೆನ್ನಲ್ಲೇ ವಾರ್ತಾಬ್ಯಾರತಿಯ ಬಿಎಮ್ ಬಶೀರ್ ಎಂಬವನೂ ಇದೇ ರೀತಿಯ ಪ್ರಚಾರ ಮಾಡಲು ಹೋಗಿ ಹಳ್ಳಕ್ಕೆ ಬಿದ್ದಿದ್ದಾನೆ. ಎಷ್ಟಾದರೂ ಜನ ಬುದ್ದಿವಂತರಿದ್ದಾರೆ.ಸರಿತಪ್ಪುಗಳ ಅರಿವು ಅವರಿಗಿದೆ ಮಣಿಪಾಲ ಅತ್ಯಾಚಾರಪ್ರಕರಣವನ್ನು ವ್ಯವಸ್ತಿತವಾಗಿ ಮುಚ್ಚಿಹಾಕುವ ಸಂಚನ್ನು ಕಾಂಗ್ರೇಸಿಗರು ನಡೆಸಿದ್ದು ಈಗ ಗುಟ್ಟಾಗಿ ಉಳಿದಿಲ್ಲ.. ಈ ಬಗ್ಗೆ ಬಜರಂಗದಳ ಪ್ರತಿಭಟನೆ ಮಾಡಿತು ಎಂಬ ಒಂದೇ ಕಾರಣಕ್ಕಾಗಿ ಬಜರಂಗದಳದ ಬಗ್ಗೆ ಅಪಪ್ರಚಾರಮಾಡಲು ತಮ್ಮ ಕುಂಡೆಹರುಕರನ್ನು ಛೂ ಬಿಟ್ಟಿತು ಆದರೆ ಈಬಾಡಿಗೆಬಂಟರು ಲೆಕ್ಕಕ್ಕಿಂತ ಜಾಸ್ತಿ ಹರಿದುಕೊಂಡು ಪ್ಲಾನ್ ಹಿಟ್ ಆಗೋದಿಕ್ಕೆ ಮುಂಚೆನೇ ಠುಸ್ಸ್ ಆಗಿಬಿಟ್ರು...

ಲಂಕೇಶ್ ಪ್ರಶಸ್ತಿ ಮತ್ತು ನನ್ನ ಅಭಿಪ್ರಾಯ

ಬಷೀರ್ ಬಿ ಎಂ ಅವರಿಗೆ "ಲಂಕೇಶ್" ಪ್ರಶಸ್ತಿ ಬಂದಿದೆ ಅಂದಾಗ ಬಹುತೇಕ ನನ್ನ ಸ್ನೇಹಿತರಂತೆ ಒಮ್ಮೆ ಗಾಬರಿ ಆಯ್ತು ... ಅವರ ಪ್ರಳಯಾಂತಕ ಪತ್ರಿಕೆ ಸೇವೆಗೆ ಪ್ರಶಸ್ತಿ ದೊರೆಯುವಂತೆ ಆಯಿತೆ ಎಂದು ಒಮ್ಮೆ ಮಂಡೆ ಬಿಸಿ ಆಯ್ತು. ನಂತರ ಅವರಿಂದಲೇ ಗೊತ್ತಾಯ್ತು ಪ್ರಶಸ್ತಿ ಬಂದಿದ್ದು ಅವರ ಹನಿ ಕಥಾ ಸಂಕಲನ " ಅಂಗೈಯಲ್ಲೇ ಆಕಾಶ " ಕ್ಕೆ ಎಂದು ... ನಿಜಕ್ಕೂ ಇದು ನನಗೆ ಖುಷಿ ಮತ್ತು ಸಮಾಧಾನ ಎರಡು ತಂದುಕೊಟ್ಟ ಅಪರೂಪದ ಸಂದರ್ಭ... ಯಾರೇ ಏನೇ ಹೇಳಲಿ ಅವರೊಬ್ಬ ಅದ್ಬುತ ಕವಿ ಮತ್ತು ಕಥೆಗಾರ ಹಾಗೆಯೇ ಅಷ್ಟೇ ಕೆಟ್ಟ ಪತ್ರಕರ್ತ. ಈ ಪ್ರಪಂಚದ ಎಲ್ಲ ಸಮಸ್ಯೆಗಳಿಗೆ ಹಿಂದೂ ಸಂಘಟನೆಗಳೇ ಕಾರಣ ಅನ್ನುವುದು ಅವರ ಮೂಲಭೂತ ನಂಬಿಕೆ. ವಿಪರ್ಯಾಸ ಏನೆಂದರೆ ಅವರ ಕೆಟ್ಟ ವಿವಾದಿತ ಲೇಖನಗಳು ತೆಗೆದುಕೊಳ್ಳುವ ಪ್ರಚಾರದ ಅರ್ಧದಷ್ಟು ಪ್ರಚಾರ ಅವರ ಅತ್ಯುತ್ತಮ ಕವನ / ಕಥೆಗಳು ತೆಗೆದುಕೊಳ್ಳುವುದಿಲ್ಲ ... ಕನ್ನಡದ ಮಟ್ಟಿಗೆ ಅತಿ ವಿರಳ ಅನ್ನಿಸುವ ಮುಸ್ಲಿಂ ಚಿಂತಕರ ಪೈಕಿ ಒಬ್ಬರು ಅನ್ನಿಸಿಕೊಳ್ಳುವ ಯೋಗ್ಯತೆ ಇರುವ ಬಷೀರ್ ರು ಕಸಬ್, ಅಫ್ಜಲ್ ಅಂತಹ ಅಡ್ನಾಡಿಗಳನ್ನು ಸ್ವಧರ್ಮಿಯರು ಅನ್ನುವ ಒಂದೇ ಕಾರಣಕ್ಕೆ ಬೆಂಬಲಿಸುತ್ತಾರೆ ಮತ್ತು ಆ ಮೂಲಕ ತಮ್ಮನ್ನು ತಾವೇ ಅಪಮೌಲ್ಯ ಮಾಡಿಕೊಳ್ಳುತ್ತಿದ್ದಾರೆ. ಇತ್ತೀಚಿನ ಬೆಳವಣಿಗೆ ಉಲ್ಲೇಖಿಸ ಬೇಕೆಂದರೆ ಅವರ ವಕ್ ಭೂಮಿ ಅತಿಕ್ರಮಣದ ಬಗ್ಗೆ ಬರೆದ ಸಂಪಾದಕಿಯದ ಬಗ್ಗೆ ಚರ್ಚೆಯೇ ನಡೆಯಲಿಲ್ಲ. ಜನಪರ ಹೋರಾಟ ನಡೆಯಬೇಕು ಅಂತ ಕರೆ ಕೊಟ್ಟರು ಯಾರು ಅದರ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ. ಇದು ಮುಸ್ಲಿಂ ಸಮಾಜ ತನ್ನದೇ ಸಮಸ್ಯೆಗಳಿಗೆ ಪ್ರತಿಕ್ರಿಯಿಸುತ್ತಿರುವ ರೀತಿ. ಅದೇ ಸಂಪಾದಕೀಯ ಏನಾದರು ಮೋದಿ ಬಗ್ಗೆ ಆಗಲಿ ಅಥವಾ ಅಡ್ವಾಣಿ ಬಗ್ಗೆ ಬರೆದಿದ್ದರೆ ಅದರ ಕಥೆಯೇ ಬೇರೆ ಆಗುತಿತ್ತು...
ನನ್ನ ಪ್ರಕಾರ ಬಷೀರ್ ಅವರ ಚಿಂತನಾ ಶಕ್ತಿ ಟಿಪ್ಪು ಸುಲ್ತಾನನ ಖಡ್ಗಕ್ಕಿಂತಲೂ ಹರಿತವಾದದ್ದು ಆದರೆ ಅದನ್ನು ಅವರು ಆಲುಗಡ್ಡೆ ಕತ್ತರಿಸಲು ಬಳಸುತ್ತಿದ್ದಾರೆ ಅನ್ನುವುದೇ ವಿಪರ್ಯಾಸ. ಇನ್ನು ಮುಂದೆಯಾದರೂ ಅವರು ಅದನ್ನು ಸರಿಯಾದ ರೀತಿಯಲ್ಲಿ ಬಳಸಲಿ ಅಂತ ಆಶಿಸುತ್ತೇನೆ .... ಮತ್ತು ಅವರು ಪಡೆದ ಪ್ರಶಸ್ತಿಗೆ ಅಭಿನಂದನೆಗಳು ...
ಕನ್ನಡಕ್ಕೆ ಮತ್ತೊಬ್ಬ ನಿಸಾರ್ ಅಹಮದ್ ರ ಅಗತ್ಯವಿದೆ, ಅದರನ್ನ ಅವರು ತುಂಬಲಿ ಅಂತ ಆಶಿಸುತ್ತೇನೆ

ನಾನು ಎನ್ನುವ ಕೋಮುವಾದಿಯ ಮತ್ತೊಂದು ಮುಖ

ನವಂಬರ್ ೧ ೨೦೦೭ ಅವತ್ತು ನಾನು ಮತ್ತು ನಮ್ಮ ಗುರುಮೂರ್ತಿ ಮತ್ತು ನಾಲ್ಕು ಜನ ಎಬಿವಿಪಿ ಗೆಳೆಯರು ರಕ್ತದಾನ ಮಾಡಲು ನಾರಾಯಣ ಹೃದಯಾಲಯಕ್ಕೆ ಹೋಗಿದ್ದೆವು. ಅದು ನನ್ನ ಪ್ರಥಮ ರಕ್ತದಾನ ಹಾಗಾಗಿ ಸ್ವಲ್ಪ ಅಂಜಿಕೆ ಅಂತು ಇತ್ತು . ರಕ್ತ ಕೊಡಬೇಕಾದದ್ದು ೩ ತಿಂಗಳ ಹಸುಗೂಸಿಗೆ. ಹುಟ್ಟುತ್ತಲೇ ಹೃದಯದಲ್ಲಿ ರಂಧ್ರ ಇಟ್ಟುಕೊಂಡಿದ್ದ ಆ ಮುದ್ದು ಹೆಣ್ಣುಮಗಳ ಹೆಸರು ಭೂಮಿಕ. ಹೆಣ್ಣು ಎಂದು ಗೊತ್ತಾದರೆ ಹುಟ್ಟುವ ಮೊದಲೇ ಸಾಯಿಸುವ ಜನಗಳ ಮದ್ಯೆ ಆ ೩ ತಿಂಗಳ ಮಗುವನ್ನು ಬದುಕಿಸಲು ಹೆಣಗುತ್ತಿದ್ದ ಆ ಅಪ್ಪನ ಮುಖ ಇಂದಿಗೂ ಕಣ್ಣಲಿದೆ.
ಹೋಗಿದ್ದ ೬ ಜನರಲ್ಲಿ ರಕ್ತ ಕೊಟ್ಟವರು ೫ ಜನ ಮಾತ್ರ. ಮಾತಲ್ಲೇ ಪಾಕಿಸ್ತಾನದ ಪ್ರಧಾನಿಯನ್ನು ನಿಂತಲ್ಲೇ ಸಾಯಿಸಬಲ್ಲ ನಮ್ಮ ಗುರುಮೂರ್ತಿ ಅಂದು ಯಾಕೋ ಬಿಳುಚಿ ಬೆವೆತು ರಕ್ತ ಕೊಡಲು ಅನ್ ಫಿಟ್ ಅನ್ನಿಸಿಕೊಂಡ.
ನಮ್ಮದೇ ಖರ್ಚಿನಲ್ಲಿ ಹೋಗಿ ಒಂದು ರುಪಾಯಿಯನ್ನು ಪಡೆಯದೇ ರಕ್ತ ಕೊಡುವ ಅವಶ್ಯಕತೆ ಏನಿತ್ತು ಅಂತ ಕೇಳಿದವರು ಇದ್ದಾರೆ.... ಆದರೆ ಅದರಲ್ಲಿರುವ ತೃಪ್ತಿಯನ್ನು ಅನುಭವಿಸಿದವನಿಗೆ ಗೊತ್ತು. ಅದರಲ್ಲೂ ನನಗಿರುವುದು B ನೆಗೆಟಿವೆ ರಕ್ತ, ಬಹಳ ವಿರಳವಾದ ಈ ಗುಂಪಿನ ರಕ್ತ ಬ್ಲಡ್ ಬ್ಯಾಂಕ್ ಗಳಲ್ಲಿ ಸಾಮಾನ್ಯವಾಗಿ ಸಿಗೋದಿಲ್ಲ ಹಾಗಾಗಿ ಅಗತ್ಯ ಇದ್ದವರು ನೇರವಾಗಿ ಸಂಪರ್ಕಿಸಲಿ ಅಂತ ಫೇಸ್ ಬುಕ್ ನಲ್ಲಿ ಕೂಡ ಹಾಕಿಕೊಂಡಿದ್ದೇನೆ. ರಕ್ತದಾನ ಮಾಡುವ ಅವಕಾಶ ಸಿಗುವುದು ೩ ತಿಂಗಳಿಗೆ ಒಮ್ಮೆ ಮಾತ್ರ ಆದರೆ ಆ ೩ ತಿಂಗಳ ಒಳಗೆ ನನಗೆ ಕನಿಷ್ಠ ೧೦ ಕರೆಯಾದರು ಬರುತ್ತೆ. ಕೊಡಕ್ಕೆ ಸಾದ್ಯ ಇಲ್ಲ ಅಂತ ಹೇಳೋದು ಮನಸಿಗೆ ಅತ್ಯಂತ ನೋವು ಕೊಡುವ ವಿಷಯ.
ಮೊನ್ನೆ ಹೆಬ್ಬಾಳದ ಬ್ಯಾಪಿಸ್ಟ್ ಆಸ್ಪತ್ರೆಯಲ್ಲಿ ರಕ್ತ ಕೊಟ್ಟಿದ್ದು ೧೦ನೇ ಬಾರಿ. ಪ್ರತಿಸಲನು ರಕ್ತ ಕೊಡುವಾಗ ನೆನಪಾಗುವುದು ಭೂಮಿಕಳ ಮುಖ, ಎಲ್ಲಿದಿಯೋ ಹೇಗಿದಿಯೋ ಆ ಕಂದ ಗೊತ್ತಿಲ್ಲ ಆದರೆ ನನ್ನೊಳಗಿನ ಮನುಷ್ಯನನ್ನ ಬಡಿದೆಬ್ಬಿಸಿದ್ದು ಆಕೆನೆ... ನೂರು ವರುಷ ಚೆನ್ನಾಗಿ ಬದುಕಲಿ ಆಕೆ ಅನ್ನೋದು ನನ್ನ ಹಾರೈಕೆ ...
ನನ್ನಿಂದ ಈವರೆಗೆ ರಕ್ತ ಪಡೆದ ೧೦ ಜನರಲ್ಲಿ ೩ ಜನ ಮುಸ್ಲಿಮರು, .... ಇದು ಅವಿನಾಶ್ ಹೆಗ್ಡೆ ಎಂಬ ಸೋ ಕಾಲ್ಡ್ ಕೋಮುವಾದಿಯ ಇನ್ನೊಂದು ಮುಖ

ನ್ಯಾಷನಲ್ ಲೀಡರ್ `ಕೈ'ಲಿ ನ್ಯಾಷನಲ್ ಅನಿಮಲ್



ಪ್ರಜಾವಾಣಿ - ೧೦-೬-೨೦೧೩ 

ಅಯ್ಯ ಅವರು ತುರ್ತಾಗಿ ರೆಸಾರ್ಟ್‌ನಲ್ಲಿ ಸಭೆ ಕರೆದಿರುವುದು ಏಕೆ? ಎಂದು ಕುತೂಹಲದಿಂದಲೇ ಪೆಕರ ವರದಿ ಮಾಡಲು ಧಾವಿಸಿದ. ಸಭೆಗೆ ಬುದ್ಧಿಜೀವಿಗಳು, ಸಾಹಿತಿಗಳು, ಹಳೆ ಸಾಹಿತಿಗಳು, ಹೊಸ ಸಾಹಿತಿಗಳು, ಸಮಾಜದ ಮುಖಂಡರು, ರಾಷ್ಟ್ರಮಟ್ಟದ ಒಬ್ಬಿಬ್ಬರು ಪತ್ರಕರ್ತರುಗಳನ್ನು ಮಾತ್ರ ಆಹ್ವಾನಿಸಲಾಗಿತ್ತು. ಇದ್ಯಾವುದೂ ಗೊತ್ತಿಲ್ಲದೆ ಪೆಕರ ರೆಸಾರ್ಟ್‌ಗೆ ನುಗ್ಗಿಯೇಬಿಟ್ಟ. ದ್ವಾರಪಾಲಕರು ಪೆಕರನನ್ನು ತಡೆದೇ ಬಿಟ್ಟರು. ನನ್ನ ಹೆಸರು ಕೇಳಿದರೆ ಸಿಎಂಗಳೇ ನಡುಗುತ್ತಾರೆ, ಪಿಎಂಗಳೇ ಅದರುತ್ತಾರೆ ಇವನ್ಯಾವ ಸೀಮೆ ಸೆಕ್ಯುರಿಟಿ ಎಂದು ಪೆಕರನಿಗೆ ಸಿಟ್ಟು ಬಂತು.

`ರೀ ಸ್ವಾಮಿ ನಾನ್ಯಾರು ಗೊತ್ತಾ' ಎಂದು ಗಟ್ಟಿ ಸ್ವರದಲ್ಲಿ ಒಂದು ಗುಟುರು ಹಾಕಿಯೇ ಬಿಟ್ಟ. ಈ ವ್ಯಕ್ತಿ ಈ ರೀತಿ ಗಟ್ಟಿ ದನಿಯಲ್ಲಿ ಆರ್ಭಟಿಸಬೇಕಾದರೆ ಅಯ್ಯ ಅವರ ಕಚೇರಿಯವರೇ ಇರಬೇಕು ಎಂದು ಭಯಬಿದ್ದ ದ್ವಾರಪಾಲಕರು ಪೆಕರನನ್ನು ಒಳಗೆ ಕಳುಹಿಸಿ ಸೈಲೆಂಟಾದರು.

ಡೆಲ್ಲಿಯಿಂದ ಬೆಂಗಳೂರುವರೆಗೆ ನನ್ನ ಹೆಸರು ಕೇಳದವರೇ ಇಲ್ಲ, ಈನನ್ಮಗನಿಗೇನು ಗೊತ್ತು ನನ್ನ ಖದರು ಎಂದು ಸ್ವಗತದಲ್ಲಿ ಹೇಳುತ್ತಾ ಪೆಕರ ಸಭಾಂಗಣಕ್ಕೆ ಬಂದ ಕೂಡಲೇ ಬುಕ್ಕಿಗಳನ್ನು ಕಂಡು ಕ್ರಿಕೆಟ್ ಆಟಗಾರರು ಬೆಚ್ಚಿಬೀಳುವಂತೆ ಬೆಚ್ಚಿಬಿದ್ದ. ಅಲ್ಲಿ ರಂ ಸಾಹಿತಿಗಳಿಂದ ಹಿಡಿದು ಬಂ ಸಾಹಿತಿಗಳವರೆಗೆ, ಶಾಸನಯುಗದ ಸಾಹಿತಿಗಳಿಂದ ಹಿಡಿದು ಸಿ.ಆರ್. ಹುಂಡಿ ಸಾಹಿತಿಗಳವರೆಗೆ ಎಲ್ಲರೂ ಕಿಕ್ಕಿರಿದು ಸೇರಿದ್ದರು. ಬ್ರಹ್ಮಾಂಡ ಜೋತಿಷಿಗಳ ರೀತಿಯಲ್ಲಿ ಕಾಣುವ ಗುಂಪೊಂದು ಮಂತ್ರ ಪಠಿಸುತ್ತಾ ಕುಳಿತಿತ್ತು, ಅಯ್ಯ ಅವರು ನೇರವಾಗಿ ವೇದಿಕೆಗೆ ಆಗಮಿಸುತ್ತಿದ್ದಂತೆಯೇ ಭಾರೀ ಕರತಾಡನ. `ರಾಷ್ಟ್ರನಾಯಕನಿಗೆ ಜಯವಾಗಲಿ' ಎಂಬ ಹೊಸ ಘೋಷಣೆ.

ಅಯ್ಯ ಅವರಿಗೆ ಖುಷಿಯಾಯಿತು. ಇರಲಿ, ಇರಲಿ. ಇವತ್ತು ಇಲ್ಲಿ ಸೇರಿರೋದು ಖಾಸಗಿ ಸಭೆ. ನನಗೆ ನನ್ನ ಕಮ್ಯುನಿಟಿಯಿಂದ ಒತ್ತಡ ಇದೆ. ಅದಕ್ಕೆ ಆಪ್ತರು, ಕಮ್ಯುನಿಟಿ ಜನರನ್ನು ಮಾತ್ರ ಇಲ್ಲಿಗೆ ಕರೆದಿದ್ದೇನೆ. ನನಗೆ ನಿಮ್ಮ ಸಲಹೆ ಬೇಕು. ಅದರ ಪ್ರಕಾರ ನಾನು ಆ್ಯಕ್ಷನ್ ತಗೋಬೇಕು ಕೇಂದ್ರಕ್ಕೆ ಶಿಫಾರಸು ಮಾಡಬೇಕು ಎಂದು ಅಯ್ಯ ಅವರು ಹೇಳಲಾರಂಭಿಸಿದರು.

ನಡುವೆ ಬಾಯಿಹಾಕಿದ ಬಾಲಬಡುಕನೊಬ್ಬ `ಮೊನ್ನೆ ಸದನದಲ್ಲಿ ರಪ್ಪ ಅವರು ಹೇಳಿದ್ದನ್ನು ಅಷ್ಟು ಸೀರಿಯಸ್ಸಾಗಿ ತಗೋಬೇಡಿ ಸಾರ್, ಲೋಕಸಭೆ ಚುನಾವಣೆ ನಂತರ ನಿಮ್ಮನ್ನು ಬದಲಿಸ್ತಾರೆ ಅಂತ ಹೇಳಿದ್ದು ನಮಗೂ ಬೇಜಾರಾಗಿದೆ' ಎಂದ.

`ನಮ್ಮ ಅಯ್ಯ ಅವರಿಗೆ ಅದೆಲ್ಲಾ ಯಾವ್‌ಲೆಕ್ಕ ಬಿಡಪ್ಪ, ಡಿಸೆಂಬರ್‌ಗೆ ಎಲೆಕ್ಷನ್ ಬರ್ಲಿ, ಆಗ ಇವ್ರೇ ನ್ಯಾಷನಲ್ ಲೀಡ್ರು. ಮೋದಿಗೆ ಸಮಾನ ಪೋಟಿ ಕೊಡೋದು ಅಂದ್ರೆ ನಮ್ಮ ಅಯ್ಯಾನೇ? ಡೆಲ್ಲಿ ಮೇಡಂಗೆ ಇದು ಗೊತ್ತಾಗಿದೆ. ಮುಂದಿನ ಪ್ರಧಾನಿ ಅಯ್ಯ ಎಂದು ಪಕ್ಷ ಘೋಷಿಸಿ ಎಲೆಕ್ಷನ್‌ಗೆ ಹೋಗ್ಲಿ ಹಿಂದೆ ಇರೊವೆಲ್ಲಾ ಮುಂದೆ ಬರ‌್ತಾರೆ ನೋಡ್ತಿರಿ. ಒಳ್ಳೆ ದಾರಾಸಿಂಗ್, ಕಿಂಗ್‌ಕಾಂಗ್ ಕುಸ್ತಿ ಇದ್ದಂಗಿರುತ್ತೆ'. ಇನ್ನೊಬ್ಬ ಅಭಿಮಾನಿ ಬೂಸಿ ಬಿಡಲಾರಂಭಿಸಿದ.

ಅಯ್ಯ ಅವರಿಗೆ ಸಿಟ್ಟು ಬಂತು. `ಏಯ್ ತಡಿಯೋ, ಬಾಯ್ ಮುಚ್ಚೋ' ಎಂದು ಅಭಿಮಾನಿಗಳ ಬಾಯಿ ಮುಚ್ಚಿಸಿದರು. ಅತ್ಯುತ್ಸಾಹದಿಂದ ನಿಗುರಾಡುತ್ತಿದ್ದವರೆಲ್ಲಾ ಡಿಕುಶಿ ಮಾರ್ ತರಹ ತೆಪ್ಪಗಾದರು.

ಅಯ್ಯ ಅವರು ಸಭೆಯ ಅಜೆಂಡಾವನ್ನು ಹೇಳಲಾರಂಭಿಸಿದರು. `ನೋಡಿ ನಮ್ಮ ಸಮಾಜದ ಅಭಯಾನಂದ ಪುರಿ ಸ್ವಾಮೀಜಿಗಳು ಕುರಿಯನ್ನು ರಾಷ್ಟ್ರೀಯ ಪ್ರಾಣಿ ಮಾಡಬೇಕು ಎಂದು ಹೇಳಿದ್ದಾರೆ. ಇದು ನಮ್ಮ ಕಾಲದಲ್ಲಿ ಆಗದಿದ್ದರೆ ಇನ್ಯಾವ ಕಾಲದಲ್ಲಿ ಆಗುತ್ತದೆ?' ಎಂದು ಕೇಳಿದ್ದಾರೆ.

ನನ್‌ಕೈಲಿ ಆಗುತ್ತಾ? ಫರ್ಮಾನು ಬೇರೆ ಹೊರಡಿಸಿರೋದ್ರಿಂದ ನಾನು ಈ ಕೆಲ್ಸ ಮಾಡಲೇಬೇಕಿದೆ, ಅದೊಂದನ್ನು ಮಾಡಿಸಿದ್ರೆ ಸಮಾಜ ಇರೋವರ್ಗೂ ನನ್ನ ಹೆಸರು ಶಾಶ್ವತವಾಗಿರುತ್ತೆ' ಎಂದು ಅಯ್ಯ ಮಾತು ಮುಗಿಸುತ್ತಿದ್ದಂತೆಯೇ, ಖಾವಿ ವೇಷಧಾರಿ ಭಕ್ತನೊಬ್ಬ ಹೌದು ಬುದ್ದೀ ಅತ್ಯಂತ ವಿಷಕಾರಿಯಾದ ಎಕ್ಕದ ಎಲೆ ತಿಂದು ಅಮೃತದಂತಹ ಹಾಲು ಕೊಡುವ ಶಕ್ತಿ ಕುರಿಯಲ್ಲಿದೆ. ಗೋವಿನಲ್ಲಿರುವ ದೈವಿ ಹಾಗೂ ಔಷಧಿ ಗುಣ ಕುರಿಯಲ್ಲಿದೆ. ಇಂಥಾ ಪ್ರಾಣಿಗೆ ಬುದ್ಧಿ ಇಲ್ಲ ಅಂತ ಹೇಳುವವರಿಗೆ ಬುದ್ದಿ ಇಲ್ಲ. ಇನ್ನು ಮುಂದೆ ಅವೆಲ್ಲಾ ನಡಿಯಲ್ಲ, ಕುರಿ ರಾಷ್ಟ್ರೀಯ ಪ್ರಾಣಿ ಆಗಲೇಬೇಕು. ನಮಗೆ `ಹುಲಿ ಬೇಡ ಕುರಿ ಬೇಕು' ಎಂದು ಕೂಗಿಕೊಂಡ.

`ನೀವು ಈಗ ಹೇಗೂ ನ್ಯಾಷನಲ್ ಲೀಡರ್ ಆಗ್ತಾ ಇದೀರಿ, ಕುರಿಯನ್ನು ನ್ಯಾಷನಲ್ ಅನಿಮಲ್ ಮಾಡಿಸಾರ್' ಎಂದು ಬಸವನಗುಡಿ ಸಾಹಿತಿಗಳು ಹೇಳಿದರು.

ರಂ ಸಾಹಿತ್ಯಯುಗದಿಂದ ಬಂದ ಸಾಹಿತಿಗಳೊಬ್ಬರು ಎದ್ದು ನಿಂತು, ಕುರಿ ಬಹಳ ಮಹತ್ವದ ಪ್ರಾಣಿ, ನೋಡಲು ಸುಂದರ ಕೂಡ. ನಾವೀಗ ಎಲ್ಲ ಹಂತದಲ್ಲೂ ಕುರಿಯ ಮಹತ್ವವನ್ನು ಹೇಳಲೇಬೇಕಾಗಿದೆ. ಸಾಹಿತ್ಯದಲ್ಲಿ, ಭಕ್ತಿಗೀತೆಗಳಲ್ಲಿ, ಸಿನಿಮಾದಲ್ಲಿ, ಸುಪ್ರಭಾತದಲ್ಲಿ ಕುರಿಯ ಮಹತ್ವ ಹೇಳಲೇಬೇಕು. ಈ ಕೆಲಸ ರಾಜ್ಯ ಸಾಹಿತ್ಯ ಅಕಾಡೆಮಿಯಲ್ಲೂ, ರಾಷ್ಟ್ರೀಯ ಸಾಹಿತ್ಯ ಅಕಾಡೆಮಿಯಲ್ಲೂ ಆಗಬೇಕು. ನಾನೊಂದು ಶ್ಲೋಕ ಬರೆದಿದ್ದೀನಿ ಕೇಳಿ:

ಶುಕ್ಲಾಂ ಕುರಿಧರಂ, ವಿಷ್ಣುಂ ಚತುಷ್ಪಾದಂ
ಮೋಟುಬಾಲಂ, ಮುದ್ದು ಮುಖಂ
ಬ್ಯಾ ಬ್ಯಾ ಬ್ಯಾ ಹೀ ಹೂ ಹಾಂ.

ಎಲ್ಲರೂ ಚಪ್ಪಾಳೆ ತಟ್ಟಿ ಅವರನ್ನು ಹುರಿದುಂಬಿಸಿದರು. ಈ ಶ್ಲೋಕ ಪ್ರಾಥಮಿಕ ಶಿಕ್ಷಣದಲ್ಲಿ ಕಡ್ಡಾಯ ಆಬೇಕು ಎಂಬ ನಿರ್ಣಯ ಆಯಿತು.
ಶಾಸನಕಾಲದ ಸಾಹಿತಿಗಳು ಎದ್ದುನಿಂತು, ಕುರಿ ಯೂನಿವರ್ಸಿಟಿಯೊಂದನ್ನು ಆರಂಭಿಸಬೇಕು ಎಂದು ಸಲಹೆ ಮಾಡಿದರು. ಎಲ್ಲರೂ ರೋಮಾಂಚಿತರಾದರು.

`ಕುರಿ' ಅನ್ನುವುದು ಪ್ರಾಚೀನಕಾಲದ ಸಾಹಿತ್ಯದಲ್ಲಿ ಇದೆ. ಕ್ರಿಸ್ತ ಪೂರ್ವದಲ್ಲೂ ನಮ್ಮ ಜನ ಇದ್ದರು. ಕಾನಿಷ್ಕನ ಕಾಲದಲ್ಲೇ ಕುರಿನಾಣ್ಯ ಇತ್ತು ಸಾರ್, ಯಜುರ್ವೇದದಲ್ಲೇ ಕುರಿ ಪ್ರಸ್ತಾಪ ಇದೆ. ಸುಮ್‌ಸುಮ್ನೆ ಕುರಿಯನ್ನು ಮಬ್ಬು, ದಡ್ಡಪ್ರಾಣಿ ಅಂತ ಹೇಳೋದು ತಪ್ಪು. ಕುರಿತೋದದೆಯುಂ ಕಾವ್ಯಪ್ರಯೋಗ ಪರಿಣತಮತಿಗಳ್ ಎಂದು ಪ್ರಾಚೀನ ಕವಿಯೇ ಹೇಳಿಲ್ಲವೇ? `ಕುರಿ' ಅನ್ನೋ ಪದ ಅಲ್ಲೇ ಬಳಸಿದ್ದಾನೆ ನೋಡಿ, ಕುರಿತು ಅನ್ನೋ ಪದದಲ್ಲೂ ಕುರಿ ಇದೆ ನೋಡಿ ಸಾರ್‌ ಎಂದು ಚರಿತ್ರೆಯ ಪುಟಗಳನ್ನೇ ತೆರೆಯಲಾರಂಭಿಸಿದರು.

`ಹೇ ಭಾರೀ ಹೇಳಿದ್ರಿ ಬಿಡ್ರಿ' ಎಂದು ಬೀದರ್, ರಾಯಚೂರು, ಕೊಪ್ಪಳದಿಂದ ಬಂದಿದ್ದ ಅಭಿಮಾನಿಗಳು ಹೇಳಿದರು. ಇನ್ನು ಮುಂದೆ ನಾವು ನಮ್ಮ ಹೆಸರಿನ ಮುಂದೆ `ಕುರಿ' ಎನ್ನುವ ಸರ್‌ನೇಮ್ ಸೇರಿಸಿಕೊಳ್ಳಬೇಕು ಎಂದು ಒಬ್ಬರು ಸಲಹೆ ಮಾಡಿದರು. ಕುರಿಯನ್ ಎನ್ನುವವರು ದೊಡ್ಡ ಕ್ರಾಂತಿಯನ್ನೇ ಮಾಡಲಿಲ್ಲವೇ ಸಾರ್, ಅವರೂ ನಮ್ಮವರೇ ಇರಬೇಕು ಅದಕ್ಕೆ ಇನ್ನು ಮುಂದೆ ನಾವೆಲ್ಲಾ ಹೆಸರಿನ ಮುಂದೆ ಕುರಿ ಸೇರಿಸಿಕೊಳ್ತೀವಿ. ತಿಪ್ಪಣ್ಣಕುರಿ, ರಮೇಶಕುರಿ, ಹರೀಶ್‌ಕುರಿ, ಹೀಗೆ ಬರ್ಲಿ ಸಾರ್ ಎಂದು ತಾವು ಶೋಧಿಸಿದ ಹೊಸ ಹೊಳಹನ್ನು ಒಬ್ಬರು ಹರಿಯಬಿಟ್ಟರು.

ಮೂಲೆಯಲ್ಲಿ ಬಕಪಕ್ಷಿಯ ರೀತಿ ಧ್ಯಾನಿಸುತ್ತಿದ್ದ ಕವಿಗಳೊಬ್ಬರು ಎದ್ದು ನಿಂತ ಕೂಡಲೇ ಎಲ್ಲರೂ ಮಾತು ನಿಲ್ಲಿಸಿ ಅವರತ್ತ ನೋಡಿದರು. ಕವಿಗಳು ಹೇಳಿದ್ದಿಷ್ಟೇ: ನಾನು ಜಾಸ್ತಿ ಮಾತಾಡಲ್ಲ. ಕುರಿಗಳಿಗೂ ಮರ್ಯಾದೆ ಕೊಡಬೇಕು. ಇನ್ನು ಮುಂದೆ ನಾನು ಅದನ್ನು ಪಾಲಿಸುವೆ:
ಕುರಿಗಳು ಬಂದರು ದಾರಿ ಬಿಡಿ,
ಕುರಿಗಳ `ಕೈ'ಗೆ ರಾಜ್ಯ ಕೊಡಿ

ಕವಿಗಳು ಮಾತು ಮುಗಿಸಿ ಮೌನವಾಗಿ ಕುಳಿತರು.

ಕುರಿಗೆ ನ್ಯಾಯ ಒದಗಿಸಲೇಬೇಕು, ಚಾಮರಾಜ ಪೇಟೆಯಲ್ಲಿ ಕುರಿಯ 120 ಅಡಿ ಪ್ರತಿಮೆಯನ್ನು ಸ್ಥಾಪಿಸಬೇಕು. ಕುರಿ. ಅಕಾಡೆಮಿ ಸ್ಥಾಪಿಸಬೇಕು. ಕುರಿ ಹಿರತಕ್ಷಣಾ ಸಮಿತಿಯೊಂದನ್ನು ರಚಿಸಬೇಕು. ಕುರಿವಾಣಿ ಎಂಬ ದಿನ ಪತ್ರಿಕೆಯನ್ನು ತಂದು ಕುರಿಯ ಮಹತ್ವವನ್ನು ಜನರಿಗೆ ತಿಳಿಸಬೇಕು. ಕುರಿ ಇರುವ ಚಲನಚಿತ್ರಗಳಿಗೆ ಶೇ ನೂರು ತೆರಿಗೆ ವಿನಾಯಿತಿ ಘೋಷಿಸಬೇಕು. ಇನ್ನು ಮುಂದೆ `ಬಕ್ರಾ' ಎಂಬ ಬೈಗುಳಕ್ಕೆ ನಿಷೇಧ. ಇದಿಷ್ಟು ನಿರ್ಣಯಗಳನ್ನು ಸಭೆಯಲ್ಲಿ ಅಂಗೀಕರಿಸಲಾಯಿತು. `ಕುರಿಗಳು ಸಾರ್ ಕುರಿಗಳು' ಗೀತೆಯನ್ನು ನಾಡಗೀತೆ ಮಾಡೋಣವೇ ಎಂಬ ಸಲಹೆ ಬಂದಾಗ ಬಹಳ ಗದ್ದಲವಾಯಿತು. ಕೊನೆಗೆ ಆ ಗೀತೆಯನ್ನು ನಿಷೇಧಿಸಬೇಕೆಂದು ಒತ್ತಾಯ ಬಂತು. ಮಠಾಧೀಶರ ಕಡೆಯಿಂದ ಆಗಮಿಸಿದ್ದ ಖಾವಿ ತಂಡ `ಹರಹರ ಕುರಿದೇವಾ' ಎಂದು ರಾಗಬದ್ಧವಾಗಿ ಮಂತ್ರಘೋಷ ಮೊಳಗಿಸಿತು.

ನಮ್ಮ ವೀರಾವೇಶದ ಮಾತುಗಳಿಂದ ಅಯ್ಯ ಅವರು ಖುಷಿಯಾಗಿರ್ತಾರೆ ಎಂದು ಅವರತ್ತ ತಿರುಗಿದರೆ ಅಯ್ಯ ಅವರು ಸೊಗಸಾದ ನಿದ್ರೆಯಲ್ಲಿ ಮುಳುಗಿಯೇ ಹೋಗಿಬಿಟ್ಟಿದ್ದಾರೆ! ಅಯ್ಯ ಅವರನ್ನು ಸಹಚರರು ಅಲುಗಾಡಿಸಿ ಅಲರ್ಟ್ ಮಾಡಿದರು. ಏನೂ ಆಗದವರಂತೆ ಎದ್ದು ಹೆಗಲಿಗೆ ಟವಲೇರಿಸಿದ ಅಯ್ಯ ಅವರು, ಎಲ್ಲರೂ ಊಟ ಮಾಡ್ಕೊಂಡು ಹೋಗಿ ಎಂದರು. ಮೀಟಿಂಗ್‌ನಲ್ಲಿ ನಡೆದದ್ದೆಲ್ಲಾ ರಹಸ್ಯವಾಗಿರ್ಲಿ, ಯಾರೂ ಎಲ್ಲೂ ಬಾಯಿಬಿಡ್ಬೇಡಿ ಎಂದು ಎಚ್ಚರಿಸಿದರು.

`ಸಾರ್, ನಾವು ಹೇಳ್ದೆ ಇದ್ರೂ ಪೇಪರ್‌ನವರು ಹೇಗೋ ಕಂಡುಹಿಡಿದು ಬರ್ದುಬಿಡ್ತಾರೆ' ಎಂದು ಬುದ್ದಿಜೀವಿಗಳೊಬ್ಬರು ಹೇಳಿದರು.

ಬರೀಲಿ ಬರೀಲಿ, ಅವರಿಗೆ ಬುದ್ಧಿ ಕಲಿಸೋಣ, ಸಂಪಾದಕರನ್ನ ಕರೆಸಿ ವಾಗ್ದಂಡನೆ ವಿಧಿಸೋಣ, ವರದಿ ಮಾಡಿದ ಪತ್ರಿಕೆಗಳಿಗೆ ಮೂರು ವರ್ಷ ಜಾಹೀರಾತು ನಿಲ್ಲಿಸೋಣ. ಪ್ರೆಸ್‌ನೋಟ್ ಕೊಡಬಾರದು ಎಂಬ ಕಾನೂನು ಮಾಡೋಣ. ಅವರನ್ನು ವಿಧಾನಸೌಧ ಒಳಕ್ಕೇ ಸೇರಿಸೋದು ಬೇಡ ಎಂದು ಅಯ್ಯ ಅವರ ಸಹಚರರು ಹಾರಿ ಬಿದ್ದು ಚಾರ್ಜ್ ಮಾಡಿದರು.

ಪೆಕರ ಸದ್ದಿಲ್ಲದೆ ಜಾಗ ಖಾಲಿ ಮಾಡಿದ.