ತೀರ್ಥಹಳ್ಳಿ
ಬೆಚ್ಚಿ ಬಿದ್ದಿದೆ .... ನಿಜ ತೀರ್ಥಹಳ್ಳಿ ಬೆಚ್ಚಿ ಬಿದ್ದಿದೆ..
ಯಾವ
ಊರನ್ನು , ಸುಸಂಸ್ಕೃತರ ನಾಡು ಅನ್ನುತ್ತಿದ್ದೆವು, ಯಾವ ಊರಿನ ಜನರನ್ನು ಸಭ್ಯರು , ಸಜ್ಜನರು
ಅನ್ನುತ್ತಿದ್ದೆವು ,ಯಾವ ಊರಿನಲ್ಲಿ ನೀರು ಕೇಳಿದವರಿಗೆ ಬೆಲ್ಲ ಕೊಡುತ್ತಿದ್ದರೋ , ಅದೇ ಜನ ಇಂದು
ರೊಚ್ಚಿಗೆದ್ದಿದ್ದಾರೆ , ತಮ್ಮದೇ ಊರಿನ ಎಳೆ ಹೆಣ್ಣು ಮಗಳನ್ನ , ಹಾಡಹಗಲೇ ಅಪಹರಿಸಿ , ಅತ್ಯಾಚಾರ
ನಡೆಸಿ , ವಿಷ ಕುಡಿಸಿ ಕೊಲೆಗೈದ ಸಂಗತಿಯನ್ನ ಅರಗಿಸಿಕೊಳ್ಳಲಾಗದೆ ತೊಳಲಾಡುತ್ತಿದ್ದಾರೆ ...
ತೀರ್ಥಹಳ್ಳಿ ಜನ ಬೀದಿಗೆ ಬಂದಿದ್ದಾರೆ , ಆ ನತದೃಷ್ಟ ಹೆಣ್ಣು ಮಗಳಿಗೆ ಆದ ಅನ್ಯಾಯಕ್ಕೆ
ಪ್ರತಿಕಾರ ಕೇಳುತ್ತಿದ್ದರೆ , ಸತ್ತವಳು ಯಾರ ಮಗಳಾದರೇನು , ತಮ್ಮದೇ ಮಗಳೇನು ಎಂಬಂತೆ ಕಂಬನಿ
ಮಿಡಿದಿದ್ದಾರೆ ... ಇಡಿ ತಾಲೂಕ್ಕಿಗೆ ತಾಲೂಕು ಪ್ರತಿಭಟನೆಯಲ್ಲಿ ನಿರತವಾಗಿದ್ದರೆ , ಆದರೆ ಇಲ್ಲೊಬ್ಬ
ಮನುಷ್ಯ ಏನು ಆಗಿಯೇ ಇಲ್ಲವಂತೆ ತಣ್ಣಗೆ ಹೇಳಿಕೆ ಕೊಡುತ್ತ ಓಡಾಡುತ್ತಿದ್ದಾರೆ, ಆ ಮನುಷ್ಯ ಬೇರೆ
ಯಾರು ಅಲ್ಲ , ಈ ಘನವೆತ್ತ ಸರ್ಕಾರದ ಶಿಕ್ಷಣ ಮಂತ್ರಿ , ತೀರ್ಥಹಳ್ಳಿ ಕ್ಷೇತ್ರದ ಶಾಸಕ ಕಿಮ್ಮನೆ
ರತ್ನಾಕರ್ ...
ಕಿಮ್ಮನೆ
ರತ್ನಾಕರ್ , ಹುಡುಗಿ ತೀರಿಕೊಂಡ ದಿನ ಕೊಟ್ಟ
ಹೇಳಿಕೆ ಹೇಗಿತ್ತು ಎಂದರೆ , ತೀರ್ಥಹಳ್ಳಿ ಜನತೆಗೂ , ನಂದಿತಾ ಸಾವಿಗೂ ಸಂಭಂದವೇ ಇಲ್ಲ ,
ಪ್ರತಿಭಟನೆ , ಗಲಾಟೆ ನಡೆಸುತ್ತಿರುವುದು ಬಿಜೆಪಿ ಜನರೇ ಹೊರತು, ಸಾಮಾನ್ಯ ನಾಗರಿಕರಲ್ಲ ಎಂದು .ಒಬ್ಬ
ಜನಪ್ರತಿನಿಧಿ ಹಾಳಾಗಿ ಹೋಗಲಿ , ಒಬ್ಬ ಮನುಷ್ಯನಾಗಿ ಇಂತಹ ಮಾತು ಯಾರಾದ್ರೂ ಆಡಲು ಸಾಧ್ಯವೇ ..
ಬಾಲಕಿಯ ಸಾವಿನಲ್ಲೂ ರಾಜಕೀಯ ಹುಡುಕುವ... ಸಾವಿಗೆ ನ್ಯಾಯ ಕೇಳುವ ಪ್ರತಿಭಟನೆಯಲ್ಲೂ ದುರುದ್ದೇಶ
ಕಾಣುವ ಇಂತಹ ಮನುಷ್ಯ , ತೀರ್ಥಹಳ್ಳಿ ಕ್ಷೇತ್ರದ ಶಾಸಕ ಅನ್ನುವುದು , ಇಡಿ ತೀರ್ಥಹಳ್ಳಿಯ
ಪ್ರಜ್ಞಾವಂತ ನಾಗರಿಕರ ತಲೆ ತಗ್ಗಿಸುವಂತೆ ಮಾಡಿದೆ.. ತೀರ್ಥಹಳ್ಳಿ ಯಾ ಜನ ಒಬ್ಬ ಅಮಾಯಕ ಬಾಲಕಿಯ ಸಾವಿಗೆ
ನ್ಯಾಯ ಕೇಳುವ ಹಾಗೆ ಇಲ್ಲವ ? ಹಾಗಾದ್ರೆ ತೀರ್ಥಹಳ್ಳಿಯ ಸಾಮಾನ್ಯ ನಾಗರಿಕ ಅಷ್ಟೊಂದು ಸಂವೇದನ
ಹೀನನಾಗಿ ಬದಲಾದನೆ ? , ನಂದಿತಾ ಳ ಶವ ಮೆರವಣಿಗೆಯಲ್ಲಿ ಕಣ್ಣಿರು ಇಡುತ್ತಿದ್ದ ಹೆಣ್ಣು ಮಕ್ಕಳು
ಗ್ಲಿಸರಿನ್ ಹಾಕಿ ಕೊಂಡು ಬಂದಿದ್ದರೆ? ಹೇಳಿ ಕಿಮ್ಮನೆ ಅವರೇ , ಇಂತಹ ಬರ್ಬರತೆ ಯನ್ನ ಖಂಡಿಸಲು
ಒಂದು ಪಕ್ಷದ ಕಾರ್ಯಕರ್ತ ಆಗಿಯೇ ಇರಬೇಕೆ ? ಕಿಮ್ಮನೆ ಅವರಿಗೆ ಅತ್ಯಾಚಾರಿಗಳನ್ನ ರಕ್ಷಿಸಲು ಇಂತಹ
ಉತ್ಸಾಹ ಯಾಕೆ ? ನಂದಿತಾ ಳ ಕೊಲೆಯನ್ನ , ಅಸಹಜ ಸಾವು ಎಂದು ಬಿಂಬಿಸಲು ಕಾರಣ , ಅವರ ಹೃದಯ ಹೀನ
ಲೆಕ್ಕಾಚಾರ . ಇಷ್ಟಕ್ಕೂ ಕಿಮ್ಮನೆ ಈ ಕೆಳಮಟ್ಟಕ್ಕೆ ಇಳಿಯಲು ಕಾರಣ , ತಮ್ಮ ಸಮಸ್ತ ಚುನಾವಣಾ
ಖರ್ಚು ನೋಡಿಕೊಂಡ ನ್ಯಾಷನಲ್ ಬ್ರದರ್ಸ್ ನ ಋಣ
ಸಂದಾಯ ಎಂದು ಇಡಿ ತೀರ್ಥಹಳ್ಳಿ
ಮಾತನಾಡುತ್ತಿದೆ .
ಅತ್ಯಂತ
ಸಭ್ಯ ಊರು ಎಂದು ಕರೆಸಿಕೊಳ್ಳುವ ತೀರ್ಥಹಳ್ಳಿಯಲ್ಲಿ , ಹೆಣ್ಣು ಮಕ್ಕಳನ್ನು ದೇಶದ ನಾನಾ ವೇಶ್ಯಾವಾಟಿಕೆಗೆ ಗೃಹಕ್ಕೆ ಮಾರುವ ವ್ಯವಸ್ತಿತ ಜಾಲ ಇದೆ .. ಕಳ್ಳ ನೋಟು ಚಲಾವಣೆ
ಮಾಡುವ ಜಾಲವಿದೆ , ಶ್ರೀಗಂದ ತೀರುವ ತನಕ ತಿಂದು ತೇಗಿದ ಕಳ್ಳರ ಗುಂಪು ಈಗ , ಮರಗಳ್ಳತನಕ್ಕೆ
ಇಳಿದಿದ್ದಾರೆ , ಅಕ್ರಮ ಮರಳು ದಂಧೆ , ಅಕ್ರಮ ಕಲ್ಲು ಗಣಿಗಾರಿಕೆ ಇದೆ, ಇಷ್ಟೆಲ್ಲಾ ಇದ್ದರು , ಇಲ್ಲಿನ ಪೋಲಿಸ್ ರು ಸುಖ
ಜೀವಿಗಳು.. ಯಾವ ಅಕ್ರಮಕ್ಕು ಬ್ರೇಕ್ ಹಾಕಿದ ಉದಾಹರಣೆ ಇಲ್ಲ.. ಆದರೆ ನಂದಿತಾ ಕೊಲೆ ,
ಪ್ರಕರಣವನ್ನ ಆತ್ಮಹತ್ಯೆ ಎಂದು ನಿರೂಪಿಸಲು ಸಾಕಷ್ಟು ಬೆವರು ಹರಿಸುತ್ತಿರುವುದರ ಹಿಂದಿನ ಗುಟ್ಟು
, ಇದೆ ಕಿಮ್ಮನೆ ರತ್ನಾಕರ್ ನ ಅಧಿಕಾರ ಮತ್ತು ನ್ಯಾಷನಲ್ ಬ್ರದರ್ನನ ಹಣ ಎಂದು ಚಿಕ್ಕ ಮಕ್ಕಳು ಕೂಡ ಹೇಳುತ್ತಿದ್ದಾರೆ...
ಕೆಲವು
ವರ್ಷದ ಹಿಂದೆ ತೀರ್ಥಹಳ್ಳಿ ಸುತ್ತಮುತ್ತಲ ಊರುಗಳಾದ , ಕುಂದಾದ್ರಿ ಬೆಟ್ಟಕ್ಕೆ , ಕುಪ್ಪಳಿ
ಕಾಡಿಗೆ ಏಕಾಂತ ಅರಸಿ ಬರುತ್ತಿದ್ದ ಯುವ ಜೋಡಿಗಳನ್ನ , ಥಳಿಸಿ , ಹುಡುಗಿಯರ ಮೇಲೆ ಲೈಂಗಿಕ
ದೌರ್ಜನ್ಯ ನಡೆಸಿ ಅದರ ವೀಡಿಯೊ ಚಿತ್ರೀಕರಣ ಮಾಡುತ್ತಿದ್ದ ಒಂದು ತಂಡವೆ ಅಸ್ತಿತ್ವದಲ್ಲಿತ್ತು ,
ಕಾಲ ಕ್ರಮೇಣ ಇಂತಹ ಘಟನೆಗೆ ಅಂಜಿದ ಜೋಡಿಗಳು ಅಂತಹ ಜಾಗಕ್ಕೆ ಹೋಗಲು ನಿಲ್ಲಿಸದವೋ , ಆ ತಂಡಗಳು
ತಮ್ಮ ಕೆಲಸ ಶುರು ಮಾಡಿದ್ದು ತೀರ್ಥಹಳ್ಳಿ ಊರಿನಲ್ಲಿಯೇ , ಹೈ ಸ್ಕೂಲ್ ಗೆ ಹೋಗುವ ಹೆಣ್ಣು ಮಕ್ಕಳನ್ನು , ಪರಿಚಯ ಮಾಡಿಕೊಳ್ಳುವುದು ,
ಅವರಿಗೆ ಮೊಬೈಲ್ , ಚಾಕಲೇಟ್ ಆಸೆ ತೋರಿಸಿ , ಲೈಂಗಿಕವಾಗಿ ಬಳಸಿಕೊಳ್ಳುವುದು , ಮೊಬೈಲ್ , ಚಾಕಲೇಟ್
ಆಮಿಷಕ್ಕೆ ಬೀಳದ ಹುಡುಗಿಯರನ್ನ , ಮಾದಕ ಪದಾರ್ಥ ಕೊಟ್ಟು ಉಪಯೋಗಿಸಿಕೊಳ್ಳುವುದು , ಅದನ್ನ ವೀಡಿಯೊ ಮಾಡಿ ಬ್ಲಾಕ್
ಮೇಲ್ ಮಾಡುವುದು ... ಇದೆ ಬ್ಲಾಕ್ಮೇಲ್ ಗೆ ಭಯ ಬೀಳುವ ಹೆಣ್ಣು ಮಕ್ಕಳನ್ನ , ಪದೇ ಪದೇ ಸಾಮೂಹಿಕ
ಅತ್ಯಾಚಾರಕ್ಕೆ ಇಡು ಮಾಡುವುದು. ಇಂತಹ ಬಹಳಷ್ಟು ಬೆಳಕಿಗೆ ಬಾರದೆ ಮುಚ್ಚಿ ಹೋಗಿವೆ .. ಈಗ್ಗೆ ಒಂದು ವರ್ಷದ ಹಿಂದೆ ಬೆಳಕಿಗೆ ಬಂದ ಪ್ರಕರಣದಲ್ಲೂ
ಹೀಗೆ ಆಗಿತ್ತು , ಪದೇ ಪದೇ ತನ್ನ ಮೇಲೆ ನಡೆದ ದೌರ್ಜನ್ಯ ಸಹಿಸದ ಬಾಲಕಿ , ತನ್ನ ಪೋಷಕರಲ್ಲಿ
ಹೇಳಿಕೊಂಡರೆ , ಮರ್ಯಾದೆಗೆ ಅಂಜಿದ ಪೋಷಕರು .. ಆ ವಿಷಯವನ್ನೇ ಮುಚ್ಚಿ ಹಾಕಿದ್ದರು .. ನಂದಿತಾ
ಪ್ರಕರಣ ಇದಕ್ಕಿಂತ ಬಿನ್ನವೇನು ಅಲ್ಲ .. ಒಂದು ಪಕ್ಷ ಆಕೆಯ ಮೇಲೆ ನಡೆಯುತ್ತಿದ್ದ ದೌರ್ಜನ್ಯವನ್ನ
, ಕಟ್ಟಿಗೆ ಆರಿಸಲು ಬಂದಿದ್ದ ತುಡ್ಕಿ ಗ್ರಾಮದ ಜನ ನೋಡದೆ ಇದ್ದಿದ್ದರೆ , ಈ ಪ್ರಕರಣ ಕೂಡ
ಮುಚ್ಚಿ ಹೋಗುತ್ತಿದ್ದರಲ್ಲಿ ಸಂಶಯ ಇಲ್ಲ.. ತೀರ ಅಸ್ವಸ್ತ ಗೊಂಡಿದ್ದ ಬಾಲಕಿ , ಆಸ್ಪತ್ರೆ
ಸೇರಿದ್ದು , ಆಕೆಯ ಮೇಲೆ ದೌರ್ಜನ್ಯ ನಡೆದಿದ್ದು ಬೆಳಕಿಗೆ ಬಂದಿದ್ದೆ , ಆಕೆ ಸತ್ತ ನಂತರ ...
ತೀರ್ಥಹಳ್ಳಿ ಪೊಲೀಸರು ಎಷ್ಟರ ಮಟ್ಟಿಗೆ ಕ್ರಿಯಾಶೀಲರು ಅಂದರೆ , ನಂದಿತಾ ಳ ತಂದೆ ಬಂದು ಕಂಪ್ಲೇಂಟ್
ಕೊಡುವವರೆಗೂ , ಕುರ್ಚಿಗೆ ಹೊಡಿಸಿಕೊಂಡಿದ್ದ ಮೊಳೆ ತೆಗೆದುಕೊಳ್ಳುವ ಪ್ರಯತ್ನವನ್ನೇ ಮಾಡಿರಲಿಲ್ಲ
.
ನಂದಿತಾ ಳ
ಕೊಲೆ ಪ್ರಕರಣ ಮುಚ್ಚಿ ಹಾಕಲು ಮೊದಲು ತೇಲಿಸಿದ ಕಥೆ ಏನೆಂದರೆ “ ನಂದಿತಾ ಳಿಗೂ ಕೊಲೆ ಆರೋಪಿ
ಹುಡುಗನಿಗೂ ಆಕೆಗೂ ಅನೈತಿಕ ಸಂಭಂದ ಇತ್ತು, ಆಕೆಯ ಇಚ್ಛೆ ಮೇರೆಗೆ ಆನಂದ ಗಿರಿಯಲ್ಲಿ , ಇಬ್ಬರು
ಕೇಳಿಯಲ್ಲಿ ತೊಡಗಿದ್ದರು ಅದನ್ನ ಕಂಡ ಗ್ರಾಮಸ್ತರು ಆಕೆಯ ಮನೆಗೆ ವಿಷಯ ತಿಳಿಸಿದ್ದಾರೆ , ಮನೆಗೆ
ಕರೆದುಕೊಂಡ ಪೋಷಕರು ಆಕೆಗೆ ಥಳಿಸಿದ್ದಾರೆ , ಆ ಅವಮಾನಕ್ಕೆ ಅಂಜಿದ ಹುಡುಗಿ ವಿಷ ಸೇವೆಸಿ ಪ್ರಾಣ
ಬಿಟ್ಟಿದ್ದಾಳೆ “.- ಮನುಷ್ಯತ್ವ ಇರುವ ಯಾರಾದರು ಆಡುವ ಮಾತ ಇದು ? ೧೩ ವಯಸ್ಸಿನ ಹುಡುಗಿಯನ್ನ
ಅನಾಯಾಸವಾಗಿ ಅನೈತಿಕತೆಗೆ ಇಳಿಸಿ ಬಿಟ್ಟರು .. ಆದರೆ ಬಾಲಕಿ ಮೇಲೆ ನಡೆಯುವ ಸಮ್ಮತಿ ಕಾಮ ಕೂಡ
ಅತ್ಯಾಚಾರ ಅನ್ನಿಸಿಕೊಳ್ಳುತ್ತದೆ ಅಂತ ಯಾವಾಗ ಈ ದುರುಳರಿಗೆ ಹೊಳೆಯಿತೋ ತಕ್ಷಣ ಕಥೆ ಬದಲಾವಣೆ
ಆಯ್ತು.
ಈಗ
ಚಾಲ್ತಿಯಲ್ಲಿರುವ ಕಥೆ ಪ್ರಕಾರ “ ನಂದಿತಾ ತಾನು ಸರಿಯಾಗಿ ಓದುತ್ತಿಲ್ಲ ಅಂತ ಅರಿವಾಗಿ
(ನೆನಪಿರಲಿ ಪರೀಕ್ಷೆ ನಡೆಯಲು ಇನ್ನು ೫ ತಿಂಗಳು ಬಾಕಿ ಇದೆ ) ಒಂದು ಪತ್ರವನ್ನ ಸ್ವಚ್ಛ
ಕನ್ನಡದಲ್ಲಿ ಟೈಪ್ ಮಾಡಿಸಿ , ಪ್ರಿಂಟ್ ತೆಗಿಸಿ , ಬ್ಯಾಗ್ ನಲ್ಲಿ ಇಟ್ಟುಕೊಂಡು , ಆನಂದ ಗಿರಿಗೆ
ಹೋಗಿ ವಿಷ ತೆಗೆದು ಕೊಂಡಳಂತೆ .. – ೧೩ ವರ್ಷದ ಬಾಲಕಿ ಡೆತ್ ನೋಟ್ ಟೈಪ್ ಮಾಡಿಸಿ
ಇಟ್ಟುಕೊಳ್ಳುವುದು ಸಾದ್ಯವೇ ಎಂದು ಎಲ್ಲ ಕ್ಯಾಕರಿಸಿ ಉಗಿದ ಮೇಲೆ , ಪೊಲೀಸರು ತೀರಿ ಕೊಂಡ,
ಹುಡುಗಿಯನ್ನ ಮತ್ತೆ ಬದುಕಿಸಿ , ಆಕೆಯ ಕೈಯಿಂದ ಮತ್ತೊಂದು ಡೆತ್ ನೋಟ್ ಬರೆಸಿ , ಹಾಜರು
ಪಡಿಸಿದ್ದಾರೆ ... ಆಹಾ ಒಂದು ಕೇಸ್ ಮುಚ್ಚಿ ಹಾಕಲು ಎಂತ ಪ್ರಯತ್ನ .. ಇವರೇನು ತಿರ್ಥಹಳ್ಳಿಯ ಜನರನ್ನ
ಮೂರ್ಖರು ಅಂತ ಭಾವಿಸಿದ್ದಾರೆ ಅಂತ ಅನ್ನಿಸುತ್ತದೆ . ಮಾದ್ಯಮಕ್ಕೆ ಬಿಡುಗಡೆ ಮಾಡಿದ್ದ ಟೈಪ್
ಮಾಡಿದ ಪತ್ರ & ಅದು ಸರಿಯಾಗಿಲ್ಲ ಎಂದು ಅದರ ಹಿಂದೆಯೇ ಬಂದ ಹಸ್ತಾಕ್ಷರ ದ ಪತ್ರ ಯಾರ ಸೃಷ್ಟಿ ಅಂತ ಹೊಸದಾಗಿ ಹೇಳಬೇಕಿಲ್ಲ ಅಲ್ಲವೇ ?
ಪ್ರೀತಿಯ
ಕಿಮ್ಮನೆ ಅವರೇ , ನಿಮ್ಮಿಂದ ಈ ಕ್ಷೇತ್ರದಲ್ಲಿ ಒಂದೇ ಒಂದು ಅಭಿವೃದ್ದಿ ಕಾರ್ಯ ಆಗಲಿಲ್ಲ ,
ತೀರ್ಥಹಳ್ಳಿಯ ಇಡಿ ತಾಲೂಕಿಗೆ ಒಂದೇ ಒಂದು ಮಾದರಿ ಶಾಲೆ ಮಾಡಲು ನಿಮ್ಮ ಕೈಯಲ್ಲಿ ಆಗಲಿಲ್ಲ ..
ನಿಮ್ಮದೇ ಮೂಗಿನಡಿಯ ಶಾಲೆಗಳಲ್ಲಿ ಅತ್ಯಾಚಾರ ನಡೆಯುತ್ತಿದ್ದರು ನಿಮ್ಮಿಂದ ಅದನ್ನ ನಿಲ್ಲಿಸಲು
ಆಗಲಿಲ್ಲ , ಇಷ್ಟೆಲ್ಲಾ ಇದ್ದರು ನಾವು ನಿಮ್ಮ ಕೊರಳ ಪಟ್ಟಿ ಹಿಡಿದು ಕೇಳಿರಲಿಲ್ಲ ... ಆದರೆ
ಇಂದು ನೀವು ರಕ್ಷಿಸಲು ಪ್ರಯತ್ನಿಸುತ್ತಿರುವುದು , ಒಂದು ಎಳೆ ಹೆಣ್ಣು ಮಗಳ ಮೇಲೆ ಅತ್ಯಾಚಾರ
ಮಾಡಿದ ಕಾಮುಕರನ್ನ .. ಅವರು ಯಾವುದೇ ಧರ್ಮಕ್ಕೆ ಸೇರಿರಲಿ , ಎಷ್ಟೇ ಶ್ರೀಮಂತರಿರಲಿ .. ಆ
ಹೆಣ್ಣು ಮಗಳ ಘೋರ ಸಾವಿಗೆ ಬೆಲೆ ಕೊಡಿ .. ನಿಮ್ಮ ಮಗಳ ಮೇಲೆಯೇ ಇಂತಹದೊಂದು ದೌರ್ಜನ್ಯ
ನಡೆದಿದ್ದರೆ , ನಿಮ್ಮ ನಡೆ ಹೀಗೆಯೇ ಇರುತ್ತಿತ್ತೆ ? , ನಮ್ಮ ಸಹನೆಗೂ ಒಂದು ಮಿತಿ ಇದೆ , ಈ
ಪ್ರಕರಣ ಮುಚ್ಚಿ ಹಾಕುವ ಪ್ರಯತ್ನ ಈಗಲೇ ಕೈ ಬಿಡಿ.. ಇಲ್ಲದೆ ಹೋದರೆ ತೀರ್ಥಹಳ್ಳಿ ರಾಜಕೀಯ
ಇತಿಹಾಸದಲ್ಲೇ ನೀವೊಬ್ಬ , ಆಯೋಗ್ಯ , ಭ್ರಷ್ಟ , ಚಾರಿತ್ರ್ಯ ಹೀನ ರಾಜಕಾರಣಿ ಆಗಿ ದಾಖಲಾಗುತ್ತಿರ
ಎಂಬುದು ನೆನಪಿರಲಿ .. ನಿಮ್ಮನ್ನು ಬೆಂಬಲಿಸಲು ,
ನಿಮ್ಮದೇ ಪಕ್ಷದ ಯಾರೊಬ್ಬರು ಕೂಡ ಮುಂದೆ ಬರುತ್ತಿಲ್ಲ ಎನ್ನುವುದು ನಿಮ್ಮ ಗಮನಕ್ಕಿರಲಿ ..
ಕೊನೆಯದಾಗಿ
, ಪ್ರೀತಿಯ ನಂದಿತಾ, ಮತ್ತೆ ಹುಟ್ಟಿ ಬಾ ಎಂದು ಹೇಳುವ ಯೋಗ್ಯತೆ ನಮಗಿಲ್ಲ .. ನಿನ್ನ ಈ
ಜನ್ಮದಲ್ಲೇ ಘೋರ ಸಾವಿನಿಂದ ತಪ್ಪಿಸಲು ಆಗದ ನಮಗೆ , ನಿನ್ನ ಮುಂದಿನ ಜನ್ಮದ ಬಗ್ಗೆ ಹೇಳುವ ಯಾವ
ಯೋಗ್ಯತೆ ಇದೆ ? , ನಿನ್ನ ಸಾವಿನಲ್ಲಿ ಬೇಳೆ ಬೇಯಿಸಲು ಪ್ರಯತ್ನಿಸುತ್ತಿರುವ ಕಿಮ್ಮನೆ ಅಂತಹ ನೀಚ
ರಾಜಕಾರಣಿಯ ಮೇಲೆ, ನಿನ್ನ ಗೋರಿಯ ಮೇಲೆ ಹಣ ಮಾಡಲು ಹೊರಟಿರುವ ಪೋಲೀಸರ ಮೇಲೆ , ನಿನ್ನ ಸಾವಿಗೂ
ಬೆಲೆ ಕಟ್ಟಿ , ಪ್ರಕರಣವನ್ನೇ ಮುಚ್ಚಿ ಹಾಕಲು ಪ್ರಯತ್ನಿಸುತ್ತಿರುವ ದುಷ್ಟರ ಮೇಲೆ ನಿನ್ನ ಬಿಸಿ ಕಣ್ಣಿರ ಶಾಪ ತಗುಲಲಿ ..