ಮಂಗಳವಾರ, ನವೆಂಬರ್ 26, 2013

ಭಯೋತ್ಪಾದಕಿ ಆಯಿಶಾ ಬಾನು !? ಮತ್ತು ನಸೂ ಎಂಬ ಪತ್ರಕರ್ತ

ಪತ್ರಕರ್ತನಿಗೆ ಕಾಮನ್ ಸೆನ್ಸ್ ಇರಬೇಕ ? ಎಂದು ಯಾರದರು ಪ್ರಶ್ನಿಸಿದರೆ ನನ್ನ ಉತ್ತರ, ಖಂಡಿತ ಅಗತ್ಯ ಇಲ್ಲ . ಕಾನೂನಿನ ಪರಿಜ್ಞಾನವೇ ಇಲ್ಲದ ಎಷ್ಟೋ ಜನ ಇಂದು ಪತ್ರಕರ್ತರು ಅನ್ನಿಸಿಕೊಂಡಿದ್ದಾರೆ . ಉದಾರಣೆ ಬೇಕಾ  ? ದಯವಿಟ್ಟು ಭೇಟಿ ಮಾಡಿ , ಮಂಗಳೂರಿನ ಕ್ಯಾತ ಪತ್ರಕರ್ತ ನಸೂ ಅಲಿಯಾಸ್ ನಸ  (ಇದರ ಅರ್ಥ ಕೊನೆಯಲ್ಲಿ ಹೇಳ್ತಿನಿ )... ಈ ಮನುಷ್ಯನ ಹಳವಂಡ ಏನೇ ಇರಲಿ , ಈಗ ವಿಷಯಕ್ಕೆ ಬರೋಣ .


 ಭಯೋತ್ಪಾದಕಿ ಆಯಿಶಾ ಬಾನು !? ಸುದ್ದಿಯ ಇನ್ನೊಂದು ಮುಖ    ಅನ್ನೋ ಲೇಖನ ವರ್ತಮಾನದಲ್ಲಿ ಪ್ರಕಟವಾಗುತ್ತೆ , ಬರೆದವರು ನಮ್ಮ ಪ್ರೀತಿಯ ನಸ.
ಇಡಿ ಲೇಖನ ಸುತ್ತಿದ್ದು ಅಯೆಶು ಬಾನುಳ ಇತಿಹಾಸ ಮತ್ತು ೨ ಮಕ್ಕಳು ಕೊಟ್ಟು ಪರಾರಿ ಆದ ಪತಿರಾಯ ಮತ್ತು ಅವಳನ್ನು ನೋಡಿಕೊಂಡ DYFI ಸಂಘಟನೆ ಸುತ್ತ... ಅಪರೂಪಕ್ಕೆ ಸಂಘಟನೆ ಒಂದು ಒಳ್ಳೆ ಕೆಲಸ ಮಾಡಿದೆ ಶ್ಲಾಘಿಸೋಣ ಆದರೆ ಲೇಖನದ ಕೊನೆಯ ಪ್ಯಾರ ಇದೆಯಲ್ಲ , ಅದು ಸುಳ್ಳುಗಳ ಸಂತೆ.
ಪಾಪ ಬಡ ದಂಪತಿಗಳು ಹುಂಡಿ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರಂತೆ 
 ಹುಂಡಿ ವ್ಯವಹಾರ ಅನ್ನೋದು ಸಂಪೂರ್ಣ ವಿಶ್ವಾಸದ ಮೇಲೆ ನಡೆಯೋ ದಂದೆ . ಎಲ್ಲೋ ಕೊಟ್ಟ ಇನ್ನೆಲ್ಲೋ ತಲುಪುತ್ತೆ ಅಂದರೆ ಅದರ ನೆಟ್ವರ್ಕ್ ಬಗ್ಗೆ ಯೋಚಿಸಿ ? ಸುಖಾ  ಸುಮ್ಮನೆ ಯಾರು ಯಾರು ಕೈಗೂ ಹಣ ಕೊಡುವುದಿಲ್ಲ ಅಲ್ಲವೇ ? ಹುಂಡಿ ವ್ಯವಹಾರ ಮಾಡಲು ಆಯೇಶ ಮತ್ತು ಆಕೆ ಪತಿಗೆ ಇದ್ದ ಯೋಗ್ಯತೆ ಏನು ? ಇರಲು ಒಂದು ಮನೆಯು ಇಲ್ಲದ ಆಕೆಗೆ ಕೋಟಿ ಕೋಟಿ ಹಣ ಹಂಚಲು ಕೊಡುತ್ತಾರೆ ಎಂದರೆ ನಂಬಲು ಸಾದ್ಯವೇ ?
ಇರಲಿ ಕೊಟ್ಟರು ಅಂದುಕೊಳ್ಳೋಣ ಆಕೆಗೆ ಬಿಹಾರದವರೆಗೆ ನೆಟ್ವರ್ಕ್ ಬೆಳೆದಿದ್ದಾರು ಹೇಗೆ ? ಬಿಹಾರಕ್ಕೆ ಹಣ ಸಾಗಿಸಲು ಸ್ವಂತ ಮನೆಯು ಇಲ್ಲದ ಮಂಗಳೂರಿನ ಗೃಹಿಣಿ ಯೇ ಬೇಕಿತ್ತೆ ? ಬಿಹಾರದಲ್ಲಿ ಯಾರು ಈ ದಂದೆ ಮಾಡುವವರು ಇಲ್ಲವೇ ? ಅದು ಕೋಟಿ ಲೆಕ್ಕದಲ್ಲಿ ...
ಹವಾಲ ಹಣ ಯಾರಿಗೆ ಸೇರುತ್ತಿದೆ ಅಂತ ಜುಬೇರ್ ದಂಪತಿಗೆ ಗೊತ್ತಿರಲಿಲ್ಲ ಅಂತ ನಸ ಹೇಳುತ್ತಾರೆ . ಅದೇ ಮೇಲಿನ ಪ್ಯಾರದಲ್ಲಿ ಬಡಪಾಯಿ ಮುಸ್ಲಿಂ ಯುವಕರು ಕೂಲಿ ನಾಲಿ ಮಾಡಿ ಮನೆಗೆ ತೆರಿಗೆ ತಪ್ಪಿಸಲು ಹಣ ಕಳಿಸುತ್ತಿದ್ದರು ಅಂತ ಉಲ್ಲೇಖಿಸಿದ್ದಾರೆ .   ಅಂದರೆ ಹಣ ಯಾರಿಗೆ ಕೊಡುತ್ತಿದ್ದೇವೆ ಜುಬೇರ್ ದಂಪತಿಗೆ ಗೊತ್ತಿಲ್ಲ ಅಂದರೆ ಪ್ರಾಮಾಣಿಕವಾಗಿ ದುಡಿದ ಹಣ ಅಲ್ಲ ಅಂತ ಅರ್ಥ ತಾನೇ... ಆ ಸಮಯದಲ್ಲೇ ಇದನ್ನ ನಿಲ್ಲಿಸಬಹುದಿತ್ತಲ್ಲ ? ಕೋಟಿ ಗಟ್ಟಲೆ ಹಣ ವರ್ಗಾವಣೆ ಮಾಡುವವರು ಅಷ್ಟೊಂದು ದಡ್ಡರು ಎಂದರೆ ನಂಬಲು ಸಾದ್ಯವೇ ?
ಇನ್ನು ಪೋಲಿಸ್ ರು ಅಧಿಕೃತವಾಗಿ ಏನು ಹೇಳಿಲ್ಲ ...... ಯಾರಿಗೆ ಹೇಳಿಲ್ಲ ? ನಿಮಗೆ ಹೇಳಬೇಕಿತ್ತೆ ? ವಾರಂಟ್ ಕೈಯಲ್ಲಿ ಹಿಡಿದು ಬರುವ ಅಧಿಕಾರಿ ಯಾರಿಗೆ ಹೇಳಬೇಕೋ ಅವರಿಗೆ ಹೇಳಿಯೇ ಬಂದಿರುತ್ತಾರೆ ....
 ಇನ್ನು ಬಂದಿಸಲು ಬಂದಿದ್ದು ಇಬ್ಬರೇ ಪೋಲಿಸ್ ರು .. ಸ್ವಾಮೀ  ಇದೇನು ವಿಕ್ರಮ್ ನ "ಅಪರಿಚತಡು " ಚಿತ್ರ ಅಲ್ಲ ... ಒಂದು ಹೆಂಗಸು ಮತ್ತು ಅದರ ತರಕಲಂಗಡಿ ಗಂಡನ ಬಂದಿಸೋಕ್ಕೆ ಇನ್ನೆಷ್ಟು ಜನ ಬೇಕು ? ಆಕೆ ಖಂಡಿತ ಕಿಂಗ್ ಪಿನ್ ಅಲ್ಲ , ಯಾರೋ ಕೈಯಿಂದ ಉಪಯೋಗಕ್ಕೊಳಗಾದ ಆಯುಧ ಅಂತ ಪೋಲಿಸ್ ರಿಗೆ ಚೆನ್ನಾಗಿ ಗೊತ್ತಿದೆ.
ನಿಮ್ಮ ಲೇಖನದ ಕೊನೆಯ ಲೈನ್ ಖಂಡಿತ ಒಪ್ಪುತ್ತೇನೆ , ಸುಳ್ಳು ಪ್ರೀತಿಯ ನಾಟಕ ಆಡುವವರ  ಹಿಂದೆ ಹೋದರೆ ಕೊನೆಗೆ ಎಲ್ಲಿಗೆ ಸೇರುತ್ತಾರೆ ಅನ್ನೋದಕ್ಕೆ ಆಕೆ ಸಾಕ್ಷಿ ಆದಳು ಅಷ್ಟೇ ...

ಇನ್ನು ನಿನ್ನೆ ನಸು ಫೇಸ್ಬುಕ್ ಲ್ಲಿ ಕೊಟ್ಟ ಸಮಜಾಯಿಷಿ ಹೀಗಿದೆ "  ಕರ್ನಾಟಕ ಪೋಲಿಸ್ ಕಮಿಷನರ್ ಮತ್ತು ಬಿಹಾರ್ ಪೋಲಿಸ್ ರನ್ನ ಸಂಪರ್ಕಿಸಿದ್ದ ನಸುಗೆ , ಆಕೆಗೆ ಪಾಕಿಸ್ತಾನದಿಂದ ಹಣ ವರ್ಗಾವಣೆ ಆಗಿಲ್ಲ ಮತ್ತು ಆಕೆಯನ್ನ ಕೇವಲ ಹವಾಲ ವ್ಯವಹಾರದ ಕಾರಣಕ್ಕೆ ಬಂದಿಸಿದ್ದೇವೆ ಅಂತ ಹೇಳಿದ್ದರಂತೆ "
ಅಲ್ಲ ಸ್ವಾಮೀ ವಿಚಾರಣೆ ಮದ್ಯೆ ಯಾವ ಪೋಲಿಸ್ , ವಿಚಾರಣ ವಿಷಯಗಳನ್ನ ಬಿಟ್ಟುಕೊಡುತ್ತಾನೆ ? ಇಷ್ಟಕ್ಕೂ ನಸು ಅಂತಹ ಬೋರ್ಡಿಗಿಲ್ಲದ ಪತ್ರಕರ್ತರು ಕಾಲು ಕಾಲಿಗೆ ಸಿಗೋ ಈ ಕಾಲದಲ್ಲಿ . ಇಂತಹ ಸಾವಿರ ಪತ್ರಕರ್ತರು ಅವರನ್ನ  ಸಂಪರ್ಕಿಸಿರುತ್ತಾರೆ , ಎಲ್ಲರಿಗು ಸಮಜಾಯಿಸಿ ಕೊಡುತ್ತ ಯಾರು ಕೂತಿರುತ್ತಾರೆ ? ಅವರ ಏನೇ ಹೇಳಿದರು ಅವರ ಅಭಿಪ್ರಾಯ ಚಾರ್ಜ್ ಶೀಟ್ ದಾಖಲಿಸಿದ ಮೇಲೆಯೇ ಅಲ್ಲವೇ ಗೊತ್ತಾಗೋದು ? ನಸುಗೆ ಇಷ್ಟು ಗೊತ್ತಿಲ್ಲವೇ... ? ಅದು ಆರು ತಿಂಗಳು ಜೈಲ್ ಜೀವನ ಕಳೆದ ಮೇಲು ? ಆಶ್ಚರ್ಯ ...
ಒಂದು ಪಕ್ಷ ಪೋಲಿಸ್ ರು ನಸುಗೆ ಕೊಟ್ಟ ಮಾಹಿತಿ ಸತ್ಯ ಅಂತ ಇಟ್ಟುಕೊಳ್ಳೋಣ , ನಿಜ ಹೇಳಬೇಕೆಂದರೆ  ಭಯೋತ್ಪಾದಕರಿಗೆ ಹಣ ಬರುತ್ತಿರುವುದು ಅರಬ್ ನಿಂದಲೇ ಹೊರತು ಬಡ ಪಾಕಿಸ್ತಾನದಿಂದ ಅಲ್ಲ . ಅಲ್ಲಿಗೆ ಅದನ್ನು ಭಯೋತ್ಪಾದಕರಿಗೆ ಬಂದ ಹಣ ಅಲ್ಲ ಅಂತ ಹೇಳಲು ಸಾದ್ಯವಿಲ್ಲ .
ಆಕೆಗೆ ಯಾರ ಕೈಗೆ ಹಣ ಕೊಡುತ್ತಿದ್ದೇನೆ ಅಂತ ಗೊತ್ತಿಲ್ಲದೇ ಇರಬಹುದು ... ಆದರೆ ಹಣ ಪಡೆದವರು ಭಯೋತ್ಪಾದಕರು ಆಗಿರಬಹುದು ಅಲ್ಲವೇ ? ಇಲ್ಲ ಅನ್ನಲು ನಿಮ್ಮ ಪ್ರಕಾರ ಆಕೆಗೆ ಹಣ ತೆಗೆದುಕೊಂಡವರು ಯಾರು ಅಂತಾನೆ ಗೊತ್ತಿಲ್ಲ ... !!!!

ಒಂದು ಪಕ್ಷ ಆಕೆಗೆ ಭಯೋತ್ಪದಕರಿಗೆ ಹಣ ಕೊಡುತ್ತಿದ್ದೇನೆ ಅಂತ ಗೊತ್ತಿಲ್ಲದೇ,  ಹಣ ಕೊಟ್ಟರು ಕೂಡ ಅದು ಭಯೋತ್ಪಾದನೆಗೆ ಸಹಾಯಕ ಕೆಲಸವೇ ಅಲ್ಲವೇ ? ಭಯೋತ್ಪಾದಕರಿಗೆ ಸಹಾಯ ಮಾಡಿದವರನ್ನ  ಭಯೋತ್ಪದಕಿ ಅಂತ ಕರೆಯದೆ ಅಂಗನವಾಡಿ ಸಹಾಯಕಿ ಅಂತ ಕರೆಯಲು ಆಗದು ಅಲ್ಲವೇ ?
ಇನ್ನು ನೀವು ಹೇಳಿದ್ದನ್ನು ನಂಬೋಣ ಅಂದರೆ ನೀವು ಉಳಿಸಿಕೊಂಡಿರುವ ವಿಶ್ವಾರ್ಹತೆ ಆದರು ಏನು ? 
 ನಿಮ್ಮ ಯೋಗ್ಯತೆ ಬಗ್ಗೆ ಹೇಳಲು ಏನಿದೆ ? ಮಣಿಪಾಲ ರೇಪ್ ಕೇಸ್ ನ ಆರೋಪಿಯನ್ನ ಬಜರಂಗ ದಳದ ಕಾರ್ಯಕರ್ತನ ತಮ್ಮ ಎಂದು ನೀವು ಸುಳ್ಳು ಸುದ್ದಿ ಹಬ್ಬಿಸಿದ್ದು, ಅದು ಸುಳ್ಳು ಅಂತ ಗೊತ್ತಾದ ಕೂಡಲೇ , ಪೋಲಿಸ್ ರನ್ನ ಕಂಡು ಪರಾರಿ ಆಗುವ ಮೆಜೆಸ್ಟಿಕ್ ರಾತ್ರಿ ರಾಣಿಯರಂತೆ , ಫೇಸ್ಬುಕ್ ನ ಪೋಸ್ಟ್ ಡಿಲಿಟ್ ಮಾಡಿ ಓಡಿ ಹೋಗಿದ್ದು , ಇದನ್ನ ಕರ್ನಾಟಕದ ಜನ ಕೆಲವು ದಶಕ ಮರೆಯೋದಿಲ್ಲ ಬಿಡಿ , ಮಾಡಿದ ತಪ್ಪಿಗೆ ಒಂದು ಕ್ಷಮೆ ಕೇಳಬೇಕು ಅನ್ನೋ ನೈತಿಕತೆ ಕೂಡ ಇಲ್ಲದ ನೀವು , ದೊಡ್ಡ ಜನಗಳ ಬಗ್ಗೆ ತುಚ್ಚವಾಗಿ ಮಾತಾಡುವ ಧೈರ್ಯ ಪ್ರದರ್ಶಿಸುತ್ತಿರಿ . ಏನಾದರು ನಾಚಿಕೆ ಮಾನ ಅನ್ನೋದು ಏನಾದರು ನಿಮಗಿದೆಯೇ ?
ಪತ್ರಕರ್ತ ಆದವನಿಗೆ ಬುದ್ದಿ ಇಲ್ಲದೆ ಇದ್ದರು ಪರವಾಗಿಲ್ಲ , ಸೊಂಟದ ಕೆಳಗೆ ಇರಬಾರದು ... ಈಗ ನಿಮಗೆ ಇರೋದು ಅಲ್ಲೇನೆ ...  ಸ್ವಲ್ಪ ಅದನ್ನು ಮೇಲೆ ತಂದು ಕೊಳ್ಳುವ ಪ್ರಯತ್ನ ಮಾಡಿ.

ಇನ್ನು ಇಂತಹ ಘನಂದಾರಿ ಲೇಖನ ಪ್ರಕಟಿಸಿದ ವರ್ತಮಾನದ ರವಿ ಕೃಷ್ಣ ರೆಡ್ಡಿ ಯವರ ಬಳಿ ಬರೋಣ , ಎರಡು ಚುನಾವಣೆಗೆ ನಿಂತು ಹೋರಾಡಿದ ಧೀರ , ಭ್ರಷ್ಟಾಚಾರ ನಿಮೂರ್ಲನೆಗೆ ಮೇಲಿನಿಂದ ಉದುರಿ ಬಿದ್ದ ಸಾಕ್ಷಾತ್ ಶ್ರೀ ಕೃಷ್ಣನಂತೆ ಪೋಸ್ ಕೊಡುವ ರೆಡ್ಡಿಯವರೇ , ನಿಮಗೆ ಹವಾಲ ಹಣ ದಂಧೆ ಒಂದು ಭ್ರಷ್ಟಾಚಾರ ದ ಭಾಗ ಎಂದು ಗೊತ್ತಿಲ್ಲವೇ ? ಇದನ್ನು ನಿಮಗೆ ಸಂತೋಷ್ ಹೆಗ್ಡೆ  ರ  ಮೂಲಕವೇ ಹೇಳಿಸಬೇಕೆನು ? ಒಂದು ಹವಾಲ ದಂಧೆ ನಡೆಸುವವಳ (ಭಯೋತ್ಪಾದಕಿ ಬಿಟ್ಟುಬಿಡಿ ) ಪರ ವಕಾಲತ್ತು ನಡೆಸುವ ದರ್ದು ನಿಮಗೇನಿದೆ ? ನಾಳೆ ತಲೆಹಿಡುಕರ ಸಂಘದವರಿಗೂ ಲೇಖನ ಬರೆಯಲು ಅವಕಾಶ ಕೇಳಿದರೆ ಇಲ್ಲ ಅನ್ನದೆ ಅವಕಾಶ ಕೊಡುತ್ತಿರೆನೋ... ? ಅಲ್ಲವೇ ? ... ಇನ್ನೊಮ್ಮೆ ನಾನು ಭ್ರಷ್ಟಾಚಾರದ ವಿರುದ್ದ ಅಂತ ಹೇಳಿಕೆ ಕೊಡುವ ಮುನ್ನ ಅಕ್ಕ ಪಕ್ಕ ನೋಡಿಕೊಳ್ಳಿ , ಕೊಳೆತ ಮೊಟ್ಟೆ , ಟೊಮೇಟೊ ಬಿದ್ದವೋ ಮುಖದ ಮೇಲೆ .

ಕೊನೆ ಮಾತು : ದೇಶದ್ರೋಹಿಗಳ ಮುಂದೆ ಲಂಗೋಟಿ ಬಿಚ್ಚಿಕೊಂಡು ಓಡಾಡುವವರ ಮದ್ಯೆ , "ಚಡ್ಡಿ " ಹಾಕಿಕೊಂಡಿರುವವನೆ ಮರ್ಯಾದಸ್ಥ. 

ಚಿತ್ರಕೃಪೆ : ಭೂತಕಾಲದಲ್ಲಿರೋ "ವರ್ತಮಾನ"